ಆಲ್ ಇಸ್ಲಾಂ ಲೈಬ್ರರಿ

78 - The Tidings - An-Naba

:1

ಅವರು ಯಾವುದರ ಕುರಿತು ಪರಸ್ಪರ ವಿಚಾರಿಸುತ್ತಿದ್ದಾರೆ?

:2

:3

ಯಾವ ಘಟನೆಯ ಕುರಿತು ಅವರು ಭಿನ್ನಮತ ಹೊಂದಿದ್ದಾರೋ ಅಂತಹ ಗಂಭೀರ ಘಟನೆಯ ಕುರಿತು.

:4

ಖಂಡಿತ ಬೇಡ, ಮುಂದೆ (ಪುನರುತ್ಥಾನದ ದಿನದಲ್ಲಿ) ಅವರು ತಿಳಿಯಲಿದ್ದಾರೆ.

:5

ಖಡಾ ಖಂಡಿತಾ ಬೇಡ, ಅವರು ತಿಳಿಯಲಿದ್ದಾರೆ.

:6

ಭೂಮಿಯನ್ನು ನಾವು ಹಾಸನ್ನಾಗಿ ಮಾಡಲಿಲ್ಲವೇ?

:7

ಪರ್ವತಗಳನ್ನು ಮೊಳೆಗಳನ್ನಾಗಿ ನಾಟಿ ಬಿಟ್ಟಿಲ್ಲವೇ

:8

ನಿಮ್ಮನ್ನು (ಗಂಡು-ಹೆಣ್ಣು) ಜೋಡಿಗಳನ್ನಾಗಿ ನಾವು ಸೃಷ್ಟಿಸಲಿಲ್ಲವೇ?

:9

ನಿಮ್ಮ ನಿದ್ದೆಯನ್ನು ವಿಶ್ರಾಂತಿಯನ್ನಾಗಿ ನಾವು ಮಾಡಿಲ್ಲವೆ?

:10

ರಾತ್ರೆಯನ್ನು ಮುಚ್ಚುವ ವಸ್ತ್ರವನ್ನಾಗಿ ನಾವು ಮಾಡಿಲ್ಲವೆ?

:11

ಹಗಲನ್ನು ಉಪಜೀವನ ಅರಸುವ ಸಮಯವ ನ್ನಾಗಿ ನಾವು ಮಾಡಿಲ್ಲವೆ?

:12

ನಿಮ್ಮ ಮೇಲೆ ಅತ್ಯಂತ ಬಲಿಷ್ಟವಾದ ಏಳು ಗಗನಗಳನ್ನು ನಾವು ನಿರ್ಮಿಸಿಲ್ಲವೆ?

:13

ಜ್ವಾಜಲ್ಯಮಾನ ದೀಪವನ್ನು ನಾವು ಸ್ಥಾಪಿಸಿಲ್ಲವೆ?

:14

ಘನೀಕೃತ ಮೇಘಗಳಿಂದ ಧಾರಾಕಾರ ಮಳೆಯನ್ನು ನಾವು ಸುರಿಸುತ್ತಿಲ್ಲವೆ?

:15

ಅದರ ಮೂಲಕ ಧಾನ್ಯವನ್ನೂ ಸಸ್ಯಗಳನ್ನೂ ನಾವು ಹೊರಡಿಸಲಿಕ್ಕಾಗಿ.

:16

ದಟ್ಟ ತೋಟಗಳನ್ನು ಸೃಷ್ಟಿಸಲಿಕ್ಕಾಗಿ.

:17

ಖಂಡಿತವಾಗಿಯೂ (ಸಜ್ಜನರು ಮತ್ತು ದುರ್ಜನರನ್ನು) ಬೇರ್ಪಡಿಸುವ ದಿನವು ಸಮಯ ನಿಗದಿತವಾಗಿರುತ್ತದೆ.

:18

ಅಂದರೆ ಕಹಳೆಯಲ್ಲಿ ಊದಲಾಗುವ ದಿನ. ಆಗ ನೀವು ತಂಡೋಪತಂಡವಾಗಿ ಬರುವಿರಿ.

:19

ಆಕಾಶವು ಬಿರುಕು ಬೀಳುವುದು. ಆಗ ಅದು ಬಾಗಿಲುಗಳದ್ದಾಗುತ್ತದೆ.

:20

ಪರ್ವತಗಳನ್ನು ಚಲಾಯಿಸಲಾಗುವುದು. ಆಗ ಅವು ಮರೀಚಿಕೆಯಾಗುತ್ತವೆ. (ಅನಾಯಾಸ ಚಲನೆಯ ವಿಷಯದಲ್ಲಿ)

:21

ಖಂಡಿತವಾಗಿಯೂ ನರಕವು ಕಟ್ಟೆಚ್ಚರದ ನಿರೀಕ್ಷೆಯಲ್ಲಿರುತ್ತದೆ .

:22

ಅಕ್ರಮಿಗಳ ಆವಾಸ ಸ್ಥಾನವಾಗಿ.

:23

ಅವರು ಆ ನರಕದಲ್ಲಿ ಅನಂತಕಾಲ ಬಿದ್ದು ಕೊಂಡಿರುವರು.

:24

ಅಲ್ಲಿ ಅವರು ತಣಿವನ್ನಾಗಲಿ ಯಾವುದೇ ಪಾನೀಯವನ್ನಾಗಲಿ ಸವಿಯಲಾರರು.

:25

ಕುದಿಯುವ ಬಿಸಿ ನೀರು ಮತ್ತು ಅತೀ ದುರ್ಗಂಧಮಯ (ನರಕದವರ ದೇಹಗಳಿಂದ ಹೊರ ಬರುವ) ಕೀವಿನ ಹೊರತು.

:26

(ಅವರು ಭೂಮಿಯಲ್ಲಿ ಮಾಡಿದ ದುಷ್ಕರ್ಮ ಗಳಿಗೆ) ಇದು ತಕ್ಕುದಾದ ಪ್ರತಿಫಲವಾಗಿದೆ.

:27

ಏಕೆಂದರೆ ಅವರು ವಿಚಾರಣಾ ದಿನವನ್ನು ಭಯಪಟ್ಟಿರಲಿಲ್ಲ.

:28

ನಮ್ಮ ಎಲ್ಲಾ ದೃಷ್ಟಾಂತಗಳನ್ನು ಅವರು ಸುಳ್ಳಾಗಿಸಿದ್ದರು.

:29

ಅವರ ಸಕಲ ಪ್ರವೃತ್ತಿಗಳನ್ನು ದಾಖಲೆ ಸಹಿತ ನಾವು ತಿಳಿದಿದ್ದೇವೆ.

:30

ಇಂದು ನೀವು ನರಕ ಶಿಕ್ಷೆಯ ರುಚಿಯನ್ನು ಸವಿಯಿರಿ. ನಿಮಗೆ ಯಾತನೆಯ ಹೊರತು ಬೇರೇನನ್ನೂ ನಾವು ಹೆಚ್ಚಿಸಲಾರೆವು.

:31

ಖಂಡಿತವಾಗಿಯೂ ಧರ್ಮನಿಷ್ಠರಿಗೆ ರಕ್ಷಣೆಯ ತಾಣವಿದೆ.

:32

ತೋಟಗಳಿವೆ. ದ್ರಾಕ್ಷೆಗಳಿವೆ.

:33

ಕುಂಭಕುಚದ, ಸಮವಯಸ್ಕ ತರುಣಿಯರಿದ್ದಾರೆ.

:34

ತುಂಬಿ ತುಳುಕುವ ಪಾನಪಾತ್ರೆಗಳಿವೆ.

:35

ಅಲ್ಲಿ ಅವರು ಅನಗತ್ಯ ಹಾಗೂ ಅಸತ್ಯ ಮಾತು ಗಳನ್ನು ಕೇಳಲಾರರು.

:36

ಇದು ನಿನ್ನ ಪ್ರಭುವಿನ ವತಿಯಿಂದ ಯಥೇಚ್ಛ ಹಾಗೂ ಉದಾರ ಪ್ರತಿಫಲ.

:37

ಇದು ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆ ಇರುವ ಸಕಲ ವಸ್ತುಗಳ ರಕ್ಷಕನಾಗಿರುವ ಪರಮ ಕೃಪಾಳುವಾದ ಪ್ರಭುವಿನ ಕಡೆಯಿಂದ. ಅಂದು ಯಾರಿಗೂ ಅವನಲ್ಲಿ ಸಂಭಾಷಣೆಗೆ ಸಾಧ್ಯವಿರದು.

:38

ಆತ್ಮ ಮತ್ತು ಮಲಕ್‍ಗಳು ಸಾಲುಸಾಲಾಗಿ ನಿಲ್ಲುವ ಆ ದಿನ! ಕೃಪಾಳುವಾದ ಅಲ್ಲಾಹನು ಸಮ್ಮತಿ ನೀಡಿದ ಹಾಗೂ ಸತ್ಯವನ್ನೇ ನುಡಿದವರಲ್ಲದೆ ಮತ್ತಾರೂ ಅಂದು ಮಾತಾಡಲಾರರು.

:39

ಆ ದಿನ ಬರುವುದಂತೂ ನಿಜ. ಆದ್ದರಿಂದ ಇಚ್ಛೆಯುಳ್ಳವನು ತನ್ನ ಪ್ರಭುವಿನ ಕಡೆಗೆ ವಿಧೇಯತೆಯಿಂದ ಮರಳಲಿ.

:40

ನಿಮಗೆ ನಾವು ಖಂಡಿತ ಎಚ್ಚರಿಕೆ ನೀಡಿದ್ದೇವೆ. ಸನ್ನಿಹಿತ ಶಿಕ್ಷೆಯ ಬಗ್ಗೆ! ಪ್ರತಿಯೊಬ್ಬನೂ ತಾನೆ ಸಗಿದ ಕರ್ಮ ಫಲವನ್ನು ಕಾಣುವ ಹಾಗೂ ಸತ್ಯ ನಿಷೇಧಿಯು; “ನನ್ನ ನಾಶವೇ, ನಾನು ಮಣ್ಣಾಗಿದ್ದರೆ ಎಷ್ಟು ಚೆನ್ನಾಗಿತ್ತು” ಎಂದು ಪ್ರಲಾಪಿಸುವ ದಿನ!