ಆಲ್ ಇಸ್ಲಾಂ ಲೈಬ್ರರಿ

77 - The Emissaries - Al-Mursalāt

:1

:2

:3

:4

:5

:6

ನಿರಂತರ ರವಾನಿಸಲ್ಪಡುವ, ಅನಂತರ ರಭಸದಿಂದ ಬೀಸಿ ಬರುವ, ತದನಂತರ (ಮಳೆಯನ್ನು) ಹರಡುವ ವಾಯುವಿನ ಆಣೆ!. ಬೇರ್ಪಡಿಸಿ ವಿವೇಚಿಸುವ ಹಾಗೂ ನೆಪ ಗಳ ನಿವಾರಣೆಯಾಗಿಯೋ, ಮುನ್ನೆಚ್ಚರಿಕೆಯಾಗಿಯೋ ಸಂದೇಶಗಳನ್ನು ಹಾಕಿಕೊಡುವ (ಮಲಕ್‍ಗಳ) ಆಣೆ!.

:7

ನಿಮಗೆ ತಾಕೀತು ನೀಡಲಾದ ಘಟನೆಯು ಖಂಡಿತ ಸಂಭವಿಸಿಯೇ ತೀರುವುದು.

:8

ನಕ್ಷತ್ರಗಳು (ಅವುಗಳ ಪ್ರಕಾಶವನ್ನು) ಮಾಸಲ್ಪಟ್ಟಾಗ,

:9

ಆಕಾಶವು ಸೀಳಲ್ಪಡುವಾಗ,

:10

ಪರ್ವತಗಳು ಧೂಳೀಪಟಗೊಳಿಸಲ್ಪಟ್ಟಾಗ,

:11

ಮತ್ತು ಪ್ರವಾದಿಗಳಿಗೆ (ಒಟ್ಟು ಸೇರಲ್ಪಡುವ) ಸಮಯವನ್ನು ನಿಗದಿಗೊಳಿಸಲಾದಾಗ,

:12

ಯಾವ ದಿನಕ್ಕಾಗಿ ಅವರಿಗೆ ಅವಧಿ ನಿಶ್ಚಯಿಸಲಾಗಿದೆ?

:13

ತೀರ್ಮಾನದ ದಿನಕ್ಕಾಗಿಯೇ !

:14

ಆ ತೀರ್ಮಾನದ ದಿನದ ಕುರಿತು ತಮಗೇನು ಗೊತ್ತು?

:15

ಅಂದು, ಸುಳ್ಳಾಗಿಸುವವರಿಗೆ ಭೀಕರ ನಾಶವಿದೆ.

:16

ನಾವು ಪೂರ್ವಿಕರನ್ನು ನಾಶಗೊಳಿಸಲಿಲ್ಲವೇ?

:17

ಬಳಿಕ ಅನಂತರದವರನ್ನೂ ನಾವು ಅವರ ಹಿಂದೆಯೇ ಕಳುಹಿಸುವೆವು.

:18

ಅಪರಾಧಿಗಳೊಂದಿಗೆ ನಾವು ಹಾಗೆಯೇ ಮಾಡುವೆವು.

:19

ಸುಳ್ಳಾಗಿಸಿದವರಿಗೆ ಅಂದು ಭಯಂಕರ ನಾಶವಿದೆ!

:20

ನಾವು ನಿಮ್ಮನ್ನು ಒಂದು ದುರ್ಬಲ ದ್ರವದಿಂದ ಸೃಷ್ಟಿಸಲಿಲ್ಲವೇ?

:21

ಆಮೇಲೆ ಅದನ್ನು ನಾವು ಒಂದು ಸುರಕ್ಷಿತ ಸ್ಥಳದಲ್ಲಿ ನಿಕ್ಷೇಪಿಸಲಿಲ್ಲವೇ?

:22

ಒಂದು ನಿಶ್ಚಿತ ಕಾಲಾವಧಿಯವರೆಗೆ.

:23

:24

ನಾವು ಹಾಗೆ (ಎಲ್ಲಾ) ನಿರ್ಣಯಿಸಿದೆವು. (ವ್ಯವಸ್ಥೆ ಗೊಳಿಸಿದೆವು) ಆದುದರಿಂದ ನಾವು ಎಷ್ಟೊಂದು ಒಳ್ಳೆಯ ವ್ಯವಸ್ಥಾಪಕರು. ಸುಳ್ಳಾಗಿಸಿದವರಿಗೆ ಅಂದು ವಿನಾಶ ಕಾದಿದೆ!

:25

ನಾವು ಭೂಮಿಯನ್ನು ಒಳಗೊಳ್ಳುವಂತಾಗಿ ಮಾಡಲಿಲ್ಲವೇ?

:26

ಜೀವಂತವಿರುವವರನ್ನೂ ಮೃತರನ್ನೂ.

:27

ಅದರಲ್ಲಿ ತಳ ಭದ್ರವಾಗಿ ತಲೆಯೆತ್ತಿ ನಿಂತಿರುವ ಪರ್ವತಗಳನ್ನು ನಾವು ಸ್ಥಾಪಿಸಿದೆವು. ಮತ್ತು ನಿಮಗೆ ನಾವು ಸ್ವಚ್ಛವಾದ ನೀರನ್ನು ಕುಡಿಯಲು ಕೊಟ್ಟೆವು.

:28

ಸುಳ್ಳಾಗಿಸಿದವರಿಗೆ ಅಂದು ನಾಶವಿದೆ!

:29

(ಓ ಸತ್ಯನಿಷೇಧಿಗಳೇ,) ನೀವು ಯಾವೊಂದನ್ನು ಸುಳ್ಳೆಂದು ಹೇಳುತ್ತಿದ್ದಿರೋ ನೀವೀಗ ಅದರೆಡೆಗೇ ನಡೆಯಿರಿ (ಎಂದು ಅವರೊಂದಿಗೆ ಹೇಳಲಾಗು ವುದು)

:30

ಅಂದರೆ, ಮೂರು ಕವಲುಗಳುಳ್ಳ ಕರಿ ಧೂಮದ ಇರುಳಿನ ಕಡೆಗೆ ನೀವು ಹೋಗಿ ಬಿಡಿರಿ!

:31

ಅದು (ಬಿಸಿಲಿಗೆ) ನೆರಳು ಕೊಡದು. ಅಗ್ನಿ ಜ್ವಾಲೆಯಿಂದ ರಕ್ಷಿಸದು.

:32

ಅದು (ನರಕ) ಕಟ್ಟಡದಂತಹ ದೊಡ್ಡ ದೊಡ್ಡ ಕಿಡಿಗಳನ್ನು ತೂರಿ ಬಿಡುತ್ತಿರುವುದು!

:33

ಅವು (ಅಗ್ನಿ ಕಿಡಿಗಳು) ಹಳದಿ ಬಣ್ಣದ ಒಂಟೆಗಳಂತೆ ಇರುವುವು.

:34

ಸುಳ್ಳಾಗಿಸಿದವರಿಗೆ ಅಂದು ಮಹಾನಾಶವಿದೆ!

:35

ಇದು, ಅವರು ಮಾತನಾಡದ ದಿನವಾಗಿರುವುದು.

:36

ಅಂದು ಅವರಿಗೆ ಅನುಮತಿಯನ್ನು ನೀಡಲಾಗುವುದಿಲ್ಲ. ಹಾಗಿದ್ದರೆ ಅವರು ನೆಪ - ನೆವನಗಳನ್ನು ಹೇಳುತ್ತಿದ್ದರು.

:37

ಸುಳ್ಳಾಗಿಸಿದವರಿಗೆ ಅಂದು ವಿಪರೀತ ನಾಶವಿದೆ !

:38

ಇಂದು ತೀರ್ಪಿನ ದಿನ, ನಾವು ನಿಮ್ಮನ್ನೂ ನಿಮ್ಮ ಪೂರ್ವಜರನ್ನೂ (ಇಲ್ಲಿ) ಒಟ್ಟುಗೂಡಿಸಿದ್ದೇವೆ.

:39

ಈಗ ನಿಮಗೆ ಏನಾದರೂ ಉಪಾಯ ಸಾಧ್ಯವಿದ್ದರೆ ಅದನ್ನು ನನ್ನ ವಿರುದ್ಧ ಪ್ರಯೋಗಿಸಿ ಕೊಳ್ಳಿರಿ.

:40

ಸುಳ್ಳಾಗಿಸಿದವರಿಗೆ ಅಂದು ಬಹು ದೊಡ್ಡ ನಾಶವಿದೆ.!

:41

(ಅಂದು) ಧರ್ಮನಿಷ್ಠರು ದಟ್ಟ ವೃಕ್ಷಗಳ ನೆರಳುಗಳಲ್ಲೂ ಚಿಲುಮೆಗಳಲ್ಲೂ ಇರುತ್ತಾರೆ.

:42

ಅವರು ಇಷ್ಟಪಡುವ ಹಣ್ಣುಹಂಪಲುಗಳೊಂದಿಗೆ.

:43

ನೀವು ನಿರ್ವಹಿಸುತ್ತಿದ್ದ ಕರ್ಮಗಳ ಪ್ರತಿಫಲವಾಗಿ (ಇಂದು) ಸಂತೋಷದಿಂದ ತಿನ್ನಿರಿ ಮತ್ತು ಕುಡಿ ಯಿರಿ. (ಎಂದು ಅವರೊಂದಿಗೆ ಹೇಳಲಾಗುವುದು)

:44

ನಾವು ಸದ್ವøತ್ತರಿಗೆ ಹೀಗೆಯೇ ಸತ್ಫಲವನ್ನು ಕೊಡುವುದು.

:45

ಸುಳ್ಳಾಗಿಸಿದವರಿಗೆ ಅಂದು ಭಯಾನಕ ನಾಶವಿದೆ!

:46

ಸ್ವಲ್ಪ ಕಾಲ ನೀವು ತಿನ್ನಿರಿ ಮತ್ತು ಸುಖಪಡಿರಿ - ವಾಸ್ತವದಲ್ಲಿ ನೀವು ಅಪರಾಧಿಗಳಾಗಿದ್ದೀರಿ.

:47

ಸುಳ್ಳಾಗಿಸಿದವರಿಗೆ ಅಂದು ವಿನಾಶವಿದೆ.

:48

ಇವರೊಡನೆ ತಲೆಬಾಗಿರಿ ಎಂದಾಗ ಇವರು ತಲೆ ಬಾಗುವುದಿಲ್ಲ.

:49

ಸುಳ್ಳಾಗಿಸಿದವರಿಗೆ ಅಂದು ವಿನಾಶವಿದೆ.

:50

ಇನ್ನು ಇದರ (ಖುರ್‍ಆನ್) ನಂತರ ಇನ್ನಾವ ವೃತ್ತಾಂತದ ಮೇಲೆ ತಾನೇ ಇವರು ವಿಶ್ವಾಸವಿರಿ ಸುವುದು?