ಆಲ್ ಇಸ್ಲಾಂ ಲೈಬ್ರರಿ

76 - The Man - Al-'Insān

:1

ಪ್ರಸ್ತಾಪಿಸತಕ್ಕ ಒಂದು ವಸ್ತುವೇ ಆಗಿರದಂತಹ ಕಾಲವೊಂದು ಮಾನವನ ಮೇಲೆ ಕಳೆದಿಲ್ಲವೇ?

:2

ನಾವು ಮಾನವನನ್ನು ಒಂದು ಸಮ್ಮಿಶ್ರ ಶುಕ್ಲ ಬಿಂದುವಿನಿಂದ ಸೃಷ್ಟಿಸಿದೆವು. ಅವನನ್ನು ನಾವು ಪರೀಕ್ಷಿಸಲಿದ್ದೇವೆ. (ಈ ಉದ್ದೇಶದಿಂದ) ನಾವು ಅವನನ್ನು ಆಲಿಸುವವನಾಗಿಯೂ, ಕಾಣುವವನಾಗಿಯೂ ಮಾಡಿದೆವು.

:3

ನಾವು ಅವನಿಗೆ ಮಾರ್ಗದರ್ಶನ ಮಾಡಿದೆವು. ಒಂದೋ ಅವನು ಕೃತಜ್ಞತೆ ಸಲ್ಲಿಸುವವನಾಗಿರ ಬಹುದು ಅಥವಾ ಕೃತಘ್ನನಾಗಬಹುದು.

:4

ಸತ್ಯನಿಷೇಧಿಗಳಿಗೆ ನಾವು ಕೆಲವು ಸಂಕೋಲೆಗಳನ್ನೂ ಕೋಳಗಳನ್ನೂ ಹೊತ್ತಿ ಉರಿಯುವ ನರಕವನ್ನೂ ಸಿದ್ಧಗೊಳಿಸಿಟ್ಟಿದ್ದೇವೆ.

:5

ಪುಣ್ಯವಂತರು (ಸುರೆ ತುಂಬಿದ) ಪಾನಪಾತ್ರೆಯಿಂದ ಕುಡಿಯುತ್ತಿರುವರು. ಅದರ ಮಿಶ್ರಿತವು ಕರ್ಪೂರವಾಗಿದೆ.

:6

ಅಲ್ಲಾಹನ ದಾಸರು ಪಾನ ಮಾಡುವ ಒಂದು ಚಿಲುಮೆಯ ನೀರು ಅದು. ಮತ್ತು (ತಾವಿಚ್ಛಿಸಿ ದೆಡೆಗೆ) ಅವರು ಅದನ್ನು ಚಿಮ್ಮಿಸಿ ಹರಿಸಿ ಬಿಡುವರು.

:7

ಅವರು ಹರಕೆಯನ್ನು ಪೂರ್ತಿಗೊಳಿಸುತ್ತಾರೆ. ಎಲ್ಲೆಲ್ಲೂ ಸಂಕಷ್ಟಗಳೇ ವ್ಯಾಪಕವಾಗಿರುವ ಒಂದು ದಿನವನ್ನು ಅವರು ಭಯಪಡುತ್ತಾರೆ.

:8

ಆಹಾರ ತಮಗೆ ಅಗತ್ಯವಿದ್ದೂ ಕೂಡಾ ಅವರು ಅಲ್ಲಾಹನಲ್ಲಿರುವ ಒಲವಿನಿಂದ ಬಡವರಿಗೂ ಅನಾಥರಿಗೂ ಸೆರೆಯಾಳುಗಳಿಗೂ ಉಣ ಬಡಿಸುತ್ತಾರೆ.

:9

ನಾವು ನಿಮಗೆ ಕೇವಲ ಅಲ್ಲಾಹನ ಪ್ರೀತಿಗಾಗಿ (ಅವನ ತೃಪ್ತಿಯನ್ನು ಬಯಸಿ) ಉಣಿಸುತ್ತಿದ್ದೇವೆ. ನಾವು ನಿಮ್ಮಿಂದ ಯಾವುದೇ ಪ್ರತಿಫಲವನ್ನೋ, ಕೃತಜ್ಞತೆಯನ್ನೋ ಬಯಸುವುದಿಲ್ಲ (ಎಂದವರು ಹೇಳುವರು).

:10

(ಕಳೆಗುಂದುವ) ಮುಖ ಸುರುಟಿ ಹೋಗುವ, ಅತ್ಯಂತ ಕಾಠಿಣ್ಯದ ಸುದೀರ್ಘ ದಿನವನ್ನು ನಮ್ಮ ಪ್ರಭುವಿನಿಂದ (ಖಂಡಿತ ನಾವು) ಭಯಪಡುತ್ತೇವೆ.

:11

ಆದುದರಿಂದ ಅಲ್ಲಾಹನು ಅವರನ್ನು ಆ ದಿನದ ಕೇಡಿನಿಂದ ರಕ್ಷಿಸುವನು ಮತ್ತು ಅವರಿಗೆ ಪ್ರಸನ್ನತೆಯನ್ನೂ ಸಂತೋಷವನ್ನೂ ನೀಡುವನು.

:12

ಅವರು ಸಹಿಸಿದ ಸಹನೆಯ ಪ್ರತಿಫಲವಾಗಿ ಅವರಿಗೆ ಸ್ವರ್ಗೋದ್ಯಾನವನ್ನೂ ರೇಶ್ಮೆಯ ಉಡುಪನ್ನೂ ದಯಪಾಲಿಸುವನು.

:13

ಅಲ್ಲಿ ಅವರು ಆರಾಮ ಮಂಚಗಳ ಮೇಲೆ ಒರಗಿ ಸುಖಿಸುವರು. ಅಲ್ಲಿ ಅವರಿಗೆ ಬಿಸಿಲಿನ ಧಗೆಯಾಗಲಿ, ಚಳಿಯ ತೀವ್ರತೆಯಾಗಲಿ ಬಾಧಿಸಲಾರದು.

:14

ಅದರ (ಸ್ವರ್ಗದ ಮರಗಳ) ನೆರಳು ಅವರಿಗೆ ನಿಕಟವಿರುವುದು. ಮತ್ತು ಅದರ ಹಣ್ಣು ಗೊನೆಗಳು (ಯಾವಾಗ ಕೊಯ್ಯಲೂ) ಅವರಿಗೆ ಅನುಕೂಲ ಗೊಳಿಸಲ್ಪಟ್ಟಿರುವುವು.

:15

ಬೆಳ್ಳಿಯ ಪಾತ್ರೆಗಳನ್ನೂ ನುಣುಪಿನಿಂದ ಸ್ಫಟಿಕ ದಂತಾದ ಬೆಳ್ಳಿಯ ಹೂಜಿಗಳನ್ನೂ ಅವರ ಸುತ್ತ ತರಲಾಗುವುದು.

:16

ಅವು ಬೆಳ್ಳಿಯಿಂದಲೇ ನಿರ್ಮಿತವಾದ ಸ್ಫಟಿಕ ಪಾತ್ರೆಗಳು. ಅವರು (ಸೇವಕರು) ಅವುಗಳನ್ನು ಸರಿಯಾದ ಪ್ರಮಾಣದಲ್ಲಿ ನಿರ್ಣಯಿಸಿರುವರು.

:17

ಅಲ್ಲಿ ಅವರಿಗೆ ಸುರೆ ತುಂಬಿದ ಪಾತ್ರೆಗಳಿಂದ ಕುಡಿಸಲಾಗುವುದು. ಅದು ಶುಂಠಿ ಬೆರೆತಿರುವಂತಹ ಮದಿರೆಯಾಗಿರುತ್ತದೆ.

:18

ಅದು ಸಲ್‍ಸಬೀಲ್ ಎಂಬ ಹೆಸರಿನ ಒಂದು ಚಿಲುಮೆಯಾಗಿದೆ.

:19

ಅವರ (ಸ್ವರ್ಗವಾಸಿಗಳ) ಮಧ್ಯೆ ಚಿರಕುಮಾರ ರಾದ ಕೆಲವು ಬಾಲಕರು ಸುತ್ತಾಡುತ್ತಿರುವರು. ತಾವು ಅವರನ್ನು ಕಂಡರೆ ಹರಡಿದ ಮುತ್ತುಗಳೆಂದೇ ಭಾವಿಸುವಿರಿ.

:20

ಅಲ್ಲಿ ತಾವು ಎತ್ತ ನೋಡಿದರೂ ಅನುಗ್ರಹಗಳನ್ನೂ ಒಂದು ಬೃಹತ್ ಸಾಮ್ರಾಜ್ಯವನ್ನೂ ಕಾಣುವಿರಿ.

:21

ಹಸಿರು ಬಣ್ಣದ ತೆಳು ರೇಶ್ಮೆ ಹಾಗೂ ದಪ್ಪ ರೇಷ್ಮೆಯ ಉಡುಪುಗಳು ಅವರ ಮೇಲಿರುವುದು. ಅವರಿಗೆ ಬೆಳ್ಳಿಯ ಬಳೆಗಳನ್ನು ತೊಡಿಸಲಾಗುವುದು ಮತ್ತು ಅವರ ಪ್ರಭು ಅವರಿಗೆ ನಿರ್ಮಲವಾದ ಪಾನೀಯವನ್ನು ಕುಡಿಸುವನು.

:22

(ಓ ಪುಣ್ಯವಂತರೇ!) ನಿಮಗಿರುವ ಪ್ರತಿ ಫಲವಿದು, ನಿಮ್ಮ ಪರಿಶ್ರಮವನ್ನು ಕೃತಜ್ಞತಾ ಪೂರ್ವಕ ಸ್ವೀಕರಿಸಲಾಗಿತ್ತು. (ಎಂದು ಅವರೊಂದಿಗೆ ಹೇಳಲಾಗುವುದು.)

:23

(ಸಂದೇಶವಾಹಕರೇ,) ನಾವೇ ಈ ಖುರ್‍ಆನನ್ನು ತಮ್ಮ ಮೇಲೆ ಸ್ವಲ್ಪ ಸ್ವಲ್ಪವಾಗಿ ಅವತೀರ್ಣ ಗೊಳಿಸಿದ್ದೇವೆ.

:24

ಆದುದರಿಂದ ತಾವು ತಮ್ಮ ಪ್ರಭುವಿನ ತೀರ್ಪಿಗಾಗಿ ತಾಳ್ಮೆವಹಿಸಿರಿ. ಅವರ ಪೈಕಿ ಯಾವುದೇ ಪಾಪಿಯನ್ನಾಗಲಿ, ಕೃತಘ್ನನನ್ನಾಗಲಿ ತಾವು ಅನುಸರಿಸಬೇಡಿರಿ.

:25

ತಾವು ಸಂಜೆ - ಮುಂಜಾನೆಗಳಲ್ಲಿ ತಮ್ಮ ಪ್ರಭುವಿನ ನಾಮವನ್ನು ಸ್ಮರಿಸಿರಿ.

:26

ರಾತ್ರಿಯಲ್ಲಿ (ಸ್ವಲ್ಪ ಸಮಯ) ಅವನಿಗೆ ಸಾಷ್ಟಾಂಗವೆರಗಿರಿ. ರಾತ್ರೆಯ ದೀರ್ಘ ಸಮಯ ಅವನನ್ನು ಪ್ರಕೀರ್ತಿಸಿರಿ.

:27

ಅವರು ಕ್ಷಣಿಕವಾದ (ಶೀಘ್ರ ಪ್ರಾಪ್ತವಾಗುವ) ಐಹಿಕ ಜೀವನವನ್ನು ಪ್ರೀತಿಸುತ್ತಾರೆ ಮತ್ತು ಭಾರವೇರಿದ ಒಂದು ದಿನವನ್ನು ಅವರು ಉಪೇ ಕ್ಷಿಸುತ್ತಾರೆ.

:28

ನಾವೇ ಅವರನ್ನು ಸೃಷ್ಟಿಸಿರುತ್ತೇವೆ ಮತ್ತು ಅವರ ಶರೀರ ಘಟನೆಯನ್ನು ಬಲಾಢ್ಯಗೊಳಿಸಿದ್ದೇವೆ. ನಾವಿಚ್ಛಿಸಿದರೆ ಅವರಂಥವರನ್ನು ಖಂಡಿತ ಬದಲಿಸಿ ತರಬಲ್ಲೆವು.

:29

ಇದೊಂದು ಉದ್ಭೋಧನೆಯಾಗಿದೆ. ಆದುದರಿಂದ ಇಚ್ಛೆಯುಳ್ಳವನು ತನ್ನ ಪ್ರಭುವಿನ ಕಡೆಗೆ ಮಾರ್ಗ ವನ್ನು ಮಾಡಿಕೊಳ್ಳಲಿ.

:30

ಅಲ್ಲಾಹನು ಇಚ್ಛಿಸದೆ ನೀವು ಇಚ್ಛಿಸಲಾರಿರಿ. ಖಂಡಿತವಾಗಿಯೂ ಅಲ್ಲಾಹನು ಸರ್ವಜ್ಞನೂ, ಯುಕ್ತಿವಂತನೂ ಆಗಿರುತ್ತಾನೆ.

:31

ಅವನು ತಾನಿಚ್ಛಿಸಿದವರನ್ನು ತನ್ನ ಕಾರುಣ್ಯದಲ್ಲಿ ಪ್ರವೇಶಗೊಳಿಸುತ್ತಾನೆ. ಅಕ್ರಮಿಗಳಿಗಾಗಿ ವೇದ ನಾಜನಕವಾದ ಶಿಕ್ಷೆಯನ್ನು ಅವನು ಸಜ್ಜು ಗೊಳಿಸಿದ್ದಾನೆ.