ಆಲ್ ಇಸ್ಲಾಂ ಲೈಬ್ರರಿ

74 - The Cloaked One - Al-Muddaththir

:1

ಓ ಹೊದ್ದು ಕೊಂಡವರೇ ! (ಪ್ರವಾದಿಯರೇ!)

:2

ಎದ್ದೇಳಿರಿ ಮತ್ತು (ಜನರನ್ನು) ಎಚ್ಚರಿಸಿರಿ.

:3

ತಮ್ಮ ಪ್ರಭುವಿನ ಹಿರಿಮೆಯನ್ನು ಪ್ರಕೀರ್ತಿಸಿರಿ.

:4

ತಮ್ಮ ವಸ್ತ್ರಗಳನ್ನು ಶುಚಿಗೊಳಿಸಿರಿ.

:5

ಮತ್ತು ಪಾಪ ಮಾಲಿನ್ಯವನ್ನು ವರ್ಜಿಸಿರಿ.

:6

ಅಧಿಕ ಲಭಿಸುವ ಆಗ್ರಹದಿಂದ ಔದಾರ್ಯ ತೋರಬೇಡಿರಿ .

:7

ಮತ್ತು ತಮ್ಮ ಪ್ರಭುವಿಗಾಗಿ ತಾಳ್ಮೆವಹಿಸಿರಿ.

:8

ಕಹಳೆಯಲ್ಲಿ ಮೊಳಗಿಸಲ್ಪಟ್ಟಾಗ,

:9

ಆ ದಿನವು ಅತ್ಯಂತ ಪ್ರಯಾಸಕರ ದಿನವಾಗಿರುವುದು.

:10

ಸತ್ಯನಿಷೇಧಿಗಳಿಗೆ ಅದು ಅನಾಯಾಸವಲ್ಲದ ದಿನವಾಗಿದೆ.

:11

ನನ್ನನ್ನು ಮತ್ತು ಏಕನಾದ ಸ್ಥಿತಿಯಲ್ಲಿ ನನ್ನಿಂದ ಸೃಷ್ಠಿಯಾಗಿರುವ ಒಬ್ಬನನ್ನು ನಮ್ಮಿಬ್ಬರ ಪಾಡಿಗೆ ಬಿಡು.

:12

ಅವನಿಗೆ ನಾನು ಹೇರಳ ಸಂಪತ್ತನ್ನು ಕೊಟ್ಟೆನು.

:13

ಉಪಸ್ಥಿತರಾದ ಪುತ್ರರನ್ನೂ ಕೊಟ್ಟೆನು.

:14

ಮತ್ತು ಅವನ ಪಾಲಿಗೆ ಬೇಕಾದ ಸೌಕರ್ಯಗಳನ್ನು ನಾನು ಏರ್ಪಡಿಸಿಕೊಟ್ಟೆನು.

:15

ಇಷ್ಟಿದ್ದೂ ನಾನು ಅವನಿಗೆ ಇನ್ನಷ್ಟು ಕೊಡ ಬೇಕೆಂದು ಅವನು ಹಂಬಲಿಸುತ್ತಿರುವನು.

:16

ಖಂಡಿತ ಇಲ್ಲ. ಅವನು ನಮ್ಮ ದೃಷ್ಟಾಂತಗಳಿಗೆ ಪ್ರತಿಸ್ಪರ್ಧಿಯಾಗಿರುವನು.

:17

ಅವನನ್ನು ನಾನು ಒಂದು ಕಠಿಣವಾದ ಯಾತನೆಯನ್ನು ಅನುಭವಿಸಲು ಶೀಘ್ರವೇ ನಿರ್ಬಂಧಿಸುವೆನು.

:18

ಅವನು ಯೋಚಿಸಿದನು ಮತ್ತು (ಒಂದು ನಿರ್ಧಾರ) ನಿರ್ಣಯಿಸಿಕೊಂಡನು.

:19

ಅದರಿಂದಾಗಿ ಅವನು ನಾಶವಾಗಲಿ. ಅವನು ಹೇಗೆ ನಿರ್ಣಯಿಸಿಕೊಂಡನು?

:20

ಪುನಃ ಅವನು ನಾಶವಾಗಲಿ! ಅವನು ಹೇಗೆ ನಿರ್ಣಯಿಸಿಕೊಂಡನು?

:21

ಪುನಃ ಅವನು (ಸಭಿಕರ ಮುಖಕ್ಕೆ) ನೋಡಿದನು.

:22

ತರುವಾಯ ಮುಖ ಸಿಂಡರಿಸಿದನು ಮತ್ತು ಮುಖ ಮುರಿದುಕೊಂಡನು.

:23

ಅನಂತರ (ಸತ್ಯದಿಂದ) ಹಿಂದಕ್ಕೆ ಮರಳಿದನು ಮತ್ತು ಅಹಂಭಾವ ತೋರಿದನು.

:24

ಕೊನೆಗೆ ಹೀಗೆಂದನು, ಇದು (ಖುರ್‍ಆನ್) (ಯಾರಿಂದಲೋ) ಬಿತ್ತರಿಸಲ್ಪಡುವ ಮಾಂತ್ರಿಕತೆಯಲ್ಲದೆ ಇನ್ನೇನೂ ಅಲ್ಲ.

:25

ಇದೊಂದು ಮನುಷ್ಯನ ಮಾತಲ್ಲದೆ ಬೇರೇನೂ ಅಲ್ಲ.

:26

ನಾನು ಸದ್ಯವೇ ಅವನನ್ನು ಸಖರಿಗೆ (ನರಕಕ್ಕೆ) ತಳ್ಳಿಬಿಡುವೆನು.

:27

``ಸಖರ್’’ನ ಕುರಿತು ತಮಗೆ ಗೊತ್ತಾ?

:28

. ಅದು ಯಾವುದನ್ನೂ ಬಾಕಿ ಬಿಡುವುದೋ ಉಳಿಸುವುದೋ ಇಲ್ಲ.

:29

ಅದು ಚರ್ಮವನ್ನು ಸುಟ್ಟು ಕರಕಲು ಮಾಡುವುದು.

:30

ಆ ನರಕದ ಮೇಲೆ ಹತ್ತೊಂಬತ್ತು ಕಿಂಕರರಿದ್ದಾರೆ.

:31

ನಾವು ನರಕದ ಕಾರ್ಯಕರ್ತರನ್ನಾಗಿ ನೇಮಿಸಿರುವುದು ದೇವಚರರನ್ನು ಮಾತ್ರವಾಗಿದೆ . ಅವರ ಸಂಖ್ಯೆಯನ್ನು ಸತ್ಯನಿಷೇಧಿಗಳ ಪಾಲಿಗೆ ಒಂದು ಪರೀಕ್ಷಾ ಸಾಧನವಾಗಿ ಮಾಡಿದ್ದೇವೆ. ಗ್ರಂಥ ನೀಡಲ್ಪಟ್ಟವರಿಗೆ ದೃಢನಂಬಿಕೆ ಉಂಟಾಗಲಿಕ್ಕಾಗಿ, ಸತ್ಯವಿಶ್ವಾಸಿಗಳ ವಿಶ್ವಾಸವು ವರ್ಧಿಸಲಿಕ್ಕಾಗಿ, ಗ್ರಂಥ ನೀಡಲ್ಪಟ್ಟವರು ಮತ್ತು ವಿಶ್ವಾಸಿಗಳು ಸಂಶಯದಲ್ಲಿ ಬೀಳದಿರಲಿಕ್ಕಾಗಿ ಮತ್ತು ಮನಸ್ಸಿನಲ್ಲಿ ರೋಗವಿರುವವರು ಹಾಗೂ ಸತ್ಯ ನಿಷೇಧಿಗಳು ಈ ಉದಾಹರಣೆಯ ಮೂಲಕ ಅಲ್ಲಾಹನು ಉದ್ದೇಶಿಸುವುದಾದರೂ ಏನನ್ನು? ಎಂದು ಹೇಳುವಂತಾಗಲು. ಈ ರೀತಿ ಅಲ್ಲಾಹನು ತಾನಿಚ್ಛಿಸಿದವರನ್ನು ದಾರಿ ತಪ್ಪಿಸುತ್ತಾನೆ ಮತ್ತು ತಾನಿಚ್ಛಿಸಿದವರಿಗೆ ನೇರ ದಾರಿ ತೋರುತ್ತಾನೆ. ತಮ್ಮ ಪ್ರಭುವಿನ ಸೇನೆಗಳನ್ನು ಸ್ವತಃ ಅವನ ಹೊರತು ಇನ್ನಾರೂ ಅರಿತಿಲ್ಲ. ಇದು ಮನುಷ್ಯರಿಗೆ ಒಂದು ಉದ್ಭೋಧನೆಯಲ್ಲದೆ ಇನ್ನೇನೂ ಅಲ್ಲ.

:32

ನಿಸ್ಸಂದೇಹ! ಚಂದ್ರನಾಣೆ!

:33

ಮತ್ತು ರಾತ್ರಿಯಾಣೆ. ಅದು ಮರಳುವಾಗ,

:34

ಮತ್ತು ಮುಂಜಾವಿನಾಣೆ ! ಅದು ಬೆಳಗುವಾಗ,

:35

ಖಂಡಿತವಾಗಿಯೂ ಸಕರ್ ನರಕವು ಗಂಭೀರ ವಿನಾಶಗಳ ಪೈಕಿ ಒಂದಾಗಿದೆ.

:36

ಮಾನವರ ಪಾಲಿಗೆ ಒಂದು ಎಚ್ಚರಿಕೆ ಎಂಬ ನೆಲೆಯಲ್ಲಿ.

:37

ಅಂದರೆ ನಿಮ್ಮ ಪೈಕಿ ಮುಂದುವರಿಯಲು ಅಥವಾ ಹಿಂದುಳಿಯಲು ಇಚ್ಛಿಸುವವರಿಗೆ (ಅದೊಂದು ಎಚ್ಚರಿಕೆಯಾಗಿದೆ).

:38

ಪ್ರತಿಯೊಂದು ಶರೀರವೂ ಅದರ ಪ್ರವೃತ್ತಿ ಯೊಂದಿಗೆ ಅಡವಿಡಲ್ಪಟ್ಟಿದೆ.

:39

ಬಲಗಡೆಯವರ ಹೊರತು.

:40

(ಅವರು)ಸ್ವರ್ಗೋದ್ಯಾನಗಳಲ್ಲಿರುವರು.

:41

ಅವರು ಅಪರಾಧಿಗಳೊಡನೆ ಕೇಳುವರು;

:42

``ನಿಮ್ಮನ್ನು ನರಕಕ್ಕೆ ಒಯ್ದುದು ಯಾವುದು?’’

:43

ಅವರು ಹೇಳುವರು; ``ನಾವು ನಮಾಝ್ ಮಾಡುವವರಲ್ಲಿ ಸೇರಿದವರಾಗಿರಲಿಲ್ಲ’’.

:44

ನಾವು ಬಡವರಿಗೆ ಆಹಾರ ಉಣಿಸುತ್ತಿರಲಿಲ್ಲ.

:45

ದುರ್ವೃತ್ತಿಗಳಲ್ಲಿ ನಿರತರಾದವರೊಂದಿಗೆ ಸೇರಿ ನಾವು ಅದರಲ್ಲಿ ನಿರತರಾಗಿದ್ದೆವು.

:46

ಮತ್ತು ನಾವು ಪ್ರತಿಫಲದ ದಿನವನ್ನು ಸುಳ್ಳಾಗಿಸುತ್ತಿದ್ದೆವು.

:47

ಕೊನೆಗೆ ಖಚಿತವಾದುದು (ಮರಣ) ನಮಗೆ ಬಂದೇ ಬಿಟ್ಟಿತು.

:48

(ಅಂದು) ಶಿಫಾರಸು ಮಾಡುವವರ ಶಿಫಾರಸು ಅವರಿಗೆ ಯಾವುದೇ ಪ್ರಯೋಜನ ನೀಡದು.

:49

ಅವರು ಉಪದೇಶದಿಂದ ವಿಮುಖರಾಗಲು ಅವರಿಗೆ ಸಂಭವಿಸಿರುವುದಾದರೂ ಏನು?

:50

:51

.ಅವರ ಅವಸ್ಥೆಯು ಸಿಂಹದಿಂದ ಓಡಿ ಪಾರಾಗುವ ಅಂಜಿ ತತ್ತರಿಸಿದ ಕಾಡು ಕತ್ತೆಗಳಂತೆ ಆಗಿದೆ.

:52

ಅಲ್ಲ, ಅವರ ಪೈಕಿ ಪ್ರತಿಯೊಬ್ಬನೂ, ತನಗೆ ಅಲ್ಲಾಹನಿಂದ ತೆರೆದಿಡಲ್ಪಟ್ಟ ಗ್ರಂಥಗಳನ್ನು ಕೊಡಲ್ಪ ಡಬೇಕೆಂದು ಬಯಸುವನು.

:53

ಖಂಡಿತ ಇಲ್ಲ. ಆದರೆ ಅವರು ಪರಲೋಕವನ್ನು ಭಯಪಡುವುದಿಲ್ಲ.

:54

ಖಂಡಿತವಾಗಿಯೂ ಇದು (ಖುರ್‍ಆನ್) ಒಂದು ನೀತಿಪಾಠವಾಗಿದೆ.

:55

ಆದುದರಿಂದ ಇಷ್ಟವುಳ್ಳವರು ಇದರಿಂದ ಓದಿ ಉಪದೇಶ ಪಡೆದುಕೊಳ್ಳಲಿ.

:56

ಅಲ್ಲಾಹನು ಇಚ್ಛಿಸದೇ ಅವರು ಯಾರೂ ಪಠಿಸಿ ಓದಿ ಉಪದೇಶ ಪಡಕೊಳ್ಳಲಾರರು. ಅವನು ಭಯಭಕ್ತಿಗೆ ಅರ್ಹನೂ ಪಾಪ ಮುಕ್ತಿಗೆ ಅರ್ಹನೂ ಆಗಿರುತ್ತಾನೆ.