ಆಲ್ ಇಸ್ಲಾಂ ಲೈಬ್ರರಿ

70 - The Ascending Stairways - Al-Ma`ārij

:1

:2

ಸತ್ಯನಿಷೇಧಿಗಳಿಗೆ ಸಂಭವಿಸಲಿಕ್ಕಿರುವ ಒಂದು ಶಿಕ್ಷೆಯ ಕುರಿತು ಪ್ರಶ್ನಿಸುವವನೊಬ್ಬನು ಪ್ರಶ್ನಿಸಿದ್ದಾನೆ. (ಸಂಭವಿಸಲಿರುವ) ಅದನ್ನು ತಡೆಯ ಬಲ್ಲವರು ಯಾರೂ ಇಲ್ಲ.

:3

ಆರೋಹಣ ಪಥಗಳ ಒಡೆಯನಾದ ಅಲ್ಲಾಹನ ಕಡೆಯಿಂದ. (ಆ ಶಿಕ್ಷೆ ಸಂಭವಿಸುವುದು)

:4

ದೇವಚರರು ಮತ್ತು ರೂಹ್ ಅವನ ಸಾನಿಧ್ಯಕ್ಕೆ ಏರಿ ಹೋಗುತ್ತಾರೆ. ಐವತ್ತು ಸಾವಿರ ವರುಷಗಳ ಅವಧಿಯುಳ್ಳ ಒಂದು ದಿನದಲ್ಲಿ. (ಆ ಶಿಕ್ಷೆ ಸಂಭವಿಸಲಿದೆ)

:5

ಆದುದರಿಂದ (ಸಂದೇಶವಾಹಕರೇ,) ತಾವು ತಾಳ್ಮೆ ವಹಿಸಿರಿ, ಸುಂದರವಾದ ತಾಳ್ಮೆ.

:6

ಅವರು ಅದನ್ನು ವಿದೂರವಾಗಿ ಕಾಣುತ್ತಾರೆ.

:7

ನಾವು ಅದನ್ನು ಸಮೀಪದಲ್ಲಿ ಕಾಣುತ್ತಿದ್ದೇವೆ.

:8

ಆ ದಿನ ಆಕಾಶವು ಕರಗಿದ ಲೋಹದಂತಾಗುವುದು.

:9

ಮತ್ತು ಪರ್ವತಗಳು ಹಿಂಜಿದ ಉಣ್ಣೆರೋಮದಂತಾಗುವುವು.

:10

ಅಂದು ಯಾವ ಆಪ್ತ ಬಂಧುವೂ ತನ್ನ ಆಪ್ತ ಬಂಧುವಿನಲ್ಲಿ ಏನನ್ನೂ ಕೇಳಲಾರನು.

:11

:12

:13

:14

ಅವರು ಪರಸ್ಪರರಿಗೆ ತೋರಿಸಲ್ಪಡುವರು. (ಆದರೂ ಅವರು ಪರಸ್ಪರ ಕೇಳಲಾರರು) ಅಪರಾಧಿಯು ತನ್ನ ಮಕ್ಕಳನ್ನು, ತನ್ನ ಪತ್ನಿ ಯನ್ನು, ತನ್ನ ಸಹೋದರರನ್ನು, ತನಗೆ ಆಶ್ರಯ ನೀಡುತ್ತಿದ್ದ ತನ್ನ ಅತ್ಯಂತ ಆಪ್ತ ಕುಟುಂಬವನ್ನು ಮತ್ತು ಭೂಮುಖದಲ್ಲಿರುವ ಎಲ್ಲ ಜನರನ್ನೂ ಪ್ರಾಯಶ್ಚಿತ್ತವಾಗಿ ಕೊಟ್ಟು ಆ ದಿನದ ಶಿಕ್ಷೆಯಿಂದ ಪಾರಾಗಬಯಸುವನು.

:15

ಅದು (ಆ ಮೋಹ) ಬೇಡ. ಅದು ಧಗಧಗಿಸುವ ನರಕವಾಗಿರುವುದು.

:16

ತಲೆಯ ಚರ್ಮವನ್ನು ಸುಲಿಯುವ ಅಗ್ನಿ!

:17

:18

ಸತ್ಯದಿಂದ ವಿಮುಖನಾದ, ಬೆನ್ನು ತಿರುಗಿಸಿದ, ಸಂಪತ್ತನ್ನು ಕಲೆ ಹಾಕಿ (ಅದನ್ನು ದಾನ ನೀಡದೆ) ಜೋಪಾನವಾಗಿ ಸಂಗ್ರಹಿಸಿಟ್ಟ ಪ್ರತಿಯೊಬ್ಬನನ್ನೂ ಅದು ತನ್ನ ಕಡೆಗೆ ಕೂಗಿ ಕರೆಯುವುದು.

:19

ಮಾನವನು ಬಹಳ ಅಕ್ಷಮನಾಗಿಯೂ ಅತ್ಯಾ ಗ್ರಹಿಯಾಗಿಯೂ ಸೃಷ್ಟಿಸಲ್ಪಟ್ಟಿದ್ದಾನೆ.

:20

ಅವನಿಗೆ ಸಂಕಷ್ಟ ಬಂದಾಗ ಕಳವಳಗೊಳ್ಳುತ್ತಾನೆ.

:21

ಮತ್ತು ಸುಖ ಬಂದಾಗ (ದಾನ ನೀಡದೆ) ಲೋಭ ತೋರುತ್ತಾನೆ.

:22

ಆದರೆ ನಮಾಝ್ ಮಾಡುವವರ ಹೊರತು.

:23

ಅವರು ತಮ್ಮ ನಮಾಝನ್ನು ತಪ್ಪದೆ ನಿರ್ವಹಿಸುವರು.

:24

ಅವರ ಸಂಪತ್ತುಗಳಲ್ಲಿ ಒಂದು ನಿಶ್ಚಿತ ಹಕ್ಕಿದೆ.

:25

ಬೇಡುವವನಿಗೆ ಮತ್ತು (ಬೇಡದ ಕಾರಣದಿಂದ) ತಡೆಯಲ್ಪಟ್ಟವನಿಗೆ.

:26

ಅವರು ಪ್ರತಿಫಲ ದಿನವನ್ನು ಸತ್ಯವೆಂದು ಒಪ್ಪಿಕೊಳ್ಳುತ್ತಾರೆ.

:27

ಅವರು ತಮ್ಮ ಪ್ರಭುವಿನ ಶಿಕ್ಷೆಯನ್ನು ಭಯಪಡುತ್ತಾರೆ.

:28

ಅವರ ಪ್ರಭುವಿನ ಶಿಕ್ಷೆಯು (ಸಂಭವಿಸದೆಂದು) ನಿರ್ಭೀತಿಯಿಂದಿರುವಂತಹದ್ದಲ್ಲ.

:29

ಅವರು ತಮ್ಮ ಗುಪ್ತಾಂಗಗಳನ್ನು ರಕ್ಷಿಸಿಕೊಳ್ಳುತ್ತಾರೆ.

:30

ತಮ್ಮ ಪತ್ನಿಯರ ಮತ್ತು ತಮ್ಮ ದಾಸಿಯರ ಹೊರತು. ಅದರಿಂದ ಅವರು ಆಕ್ಷೇಪಾರ್ಹರಲ್ಲ.

:31

ಆದರೆ, ಅದಕ್ಕಿಂತ ಆಚೆ ಯಾರಾದರೂ ಬಯಸುತ್ತಾರಾದರೆ ಅವರು ಮೇರೆ ಮೀರಿದವರು.

:32

ಅವರು ತಮ್ಮಲ್ಲಿರಿಸಿದ ಅಮಾನತುಗಳನ್ನು ಮತ್ತು ತಮ್ಮ ವಾಗ್ದಾನಗಳನ್ನು ಪಾಲಿಸುವವರೂ ಆಗಿರುತ್ತಾರೆ.

:33

ಅವರು ತಮ್ಮ ಸಾಕ್ಷ್ಯಗಳನ್ನು ಸರಿಯಾಗಿ ನಿರ್ವಹಿಸುತ್ತಾರೆ.

:34

ಮತ್ತು ತಮ್ಮ ನಮಾಝ್‍ಗಳಲ್ಲಿ ಅವರು ಸೂಕ್ಷ್ಮತೆ ಪಾಲಿಸುತ್ತಾರೆ.

:35

ಇವರು (ಇಂತಹವರು) ಸ್ವರ್ಗೋದ್ಯಾನಗಳಲ್ಲಿ ಸನ್ಮಾನಿಸಲ್ಪಡುವರು.

:36

:37

ಆದುದರಿಂದ (ಸಂದೇಶವಾಹಕರೇ,) ಈ ಸತ್ಯನಿಷೇಧಿಗಳಿಗೆ ಏನಾಗಿದೆ? ಅವರು ನಿಮ್ಮತ್ತ ದೀರ್ಘ ನೋಟ ಬೀರುತ್ತಾರೆ. ತಮ್ಮ ಎಡಬಲಗಳಿಂದ ಗುಂಪುಗುಂಪಾಗಿ ಚದುರುತ್ತಿದ್ದಾರೆ.

:38

ಅವರಲ್ಲಿ ಪ್ರತಿಯೊಬ್ಬನೂ ತಾನು ಸುಖಾನು ಭೂತಿಯ ಸ್ವರ್ಗೋದ್ಯಾನಗಳಲ್ಲಿ ಪ್ರವೇಶ ಗೊಳಿಸಲ್ಪಡುವೆನೆಂದು ಮೋಹಿಸುತ್ತಿರುವನೇ?

:39

ಖಂಡಿತ ಅದು ಬೇಡ. ಅವರು ಬಲ್ಲ ವಸ್ತುವಿನಿಂದಲೇ ನಾವು ಅವರನ್ನು ಸೃಷ್ಟಿಸಿರುತ್ತೇವೆ.

:40

:41

ಉದಯ ಸ್ಥಾನಗಳ ಮತ್ತು ಅಸ್ತಮ ಸ್ಥಾನಗಳ ಒಡೆಯನ ಆಣೆ ಹಾಕುತ್ತೇನೆ. ಖಂಡಿತ ಅವರ ಸ್ಥಾನದಲ್ಲಿ ಅವರಿಗಿಂತ ಉತ್ತಮರನ್ನು ತರಲು ನಮಗೆ ಸಾಮಥ್ರ್ಯವಿದೆ. ನಾವು ಖಂಡಿತ ಪರಾಜಯಗೊಳ್ಳಲಾರೆವು.

:42

ಆದುದರಿಂದ (ಪ್ರವಾದಿಯವರೇ) ಅವರಿಗೆ ತಾಕೀತು ನೀಡಲಾದ ಅವರ ಆ ದಿನಕ್ಕೆ ಹೋಗಿ ಮುಟ್ಟುವವರೆಗೂ ಅವರ ಪಾಪದಲ್ಲಿ ಮುಳುಗಲು ಮತ್ತು ಆಟವಾಡಿಕೊಂಡಿರಲು ಅವರನ್ನು ಬಿಟ್ಟು ಬಿಡಿರಿ.

:43

ಅವರು ಗೋರಿಗಳಿಂದ ಹೊರಬಂದು ಧಾವಿಸುವ ಆ ದಿನ. ಅವರು ಒಂದು ನಾಟೆ ಗುರಿಯತ್ತ ಓಡುತ್ತಿರುವಂತಿರುತ್ತಾರೆ.

:44

ಅವರ ಕಣ್ಣುಗಳು ಭಯವಿಹ್ವಲವಾಗಿರುವುವು. ನಿಂದ್ಯತೆಯು ಅವರನ್ನು ಆವರಿಸಿಕೊಂಡಿರುವುದು. ಅದುವೇ ಅವರಿಗೆ ಮುನ್ನೆಚ್ಚರಿಕೆ ನೀಡಲಾಗುತ್ತಿದ್ದ ದಿನ.