ಆಲ್ ಇಸ್ಲಾಂ ಲೈಬ್ರರಿ

69 - The Reality - Al-Ĥāqqah

:1

ಖಚಿತವಾದ ಆ ಮಹಾ ಘಟನೆ!

:2

ಆ ಮಹಾ ಘಟನೆ ಏನದು?

:3

ಆ ಖಚಿತವಾದ ಮಹಾ ಸಂಭವ ಏನೆಂಬುದು ತಮಗೆ ಗೊತ್ತೆ?

:4

ಸಮೂದ್ ಮತ್ತು ಆದ್ ಸಮುದಾಯವು ಆ ಭಯಾನಕ ಘಟನೆಯನ್ನು ನಿರಾಕರಿಸಿಬಿಟ್ಟವು!

:5

ಸಮೂದ್ ಸಮುದಾಯ ಒಂದು ಭೀಕರ ಶಿಕ್ಷೆಯ ಮೂಲಕ ನಾಶಗೊಳಿಸಲ್ಪಟ್ಟರು.

:6

ಆದ್ ಜನಾಂಗದವರು ರುದ್ರನಾದದ ಒಂದು ಪ್ರಚಂಡ ಚಂಡಮಾರುತದಿಂದ ನಾಶವಾದರು.

:7

ಅವನು (ಅಲ್ಲಾಹನು) ಅದನ್ನು ನಿರಂತರ ಏಳು ರಾತ್ರೆ ಮತ್ತು ಎಂಟು ಹಗಲುಗಳ ಕಾಲ ಅವರ ಮೇಲೆ ಛೂ ಬಿಟ್ಟನು. ಅದರಿಂದಾಗಿ ಆ ಜನಾಂಗ ಖರ್ಜೂರದ ವೃಕ್ಷಗಳು ಬುಡಕಳಚಿ ಬಿದ್ದಂತೆ ಬಿದ್ದು ಕೊಂಡಿರುವುದನ್ನು ನಿನಗೆ ಕಾಣಬಹುದಾಗಿತ್ತು!

:8

ಇನ್ನು ಅವರಿಗೆ ಏನಾದರೂ ಉಳಿದಿರುವುದು ತಮಗೆ ಕಾಣಿಸುತ್ತಿದೆಯೇ?

:9

ಫಿರ್‍ಔನ್ ಮತ್ತು ಅವನಿಗಿಂತ ಹಿಂದಿನವರು ಮತ್ತು ಬುಡಮೇಲಾದ ನಾಡುಗಳ ಜನರು ಮಹಾಪರಾಧವನ್ನು ಎಸಗಿದ್ದರು.

:10

ಅವರೆಲ್ಲರೂ ತಮ್ಮ ಪ್ರಭುವಿನ ದೂತರನ್ನು ಧಿಕ್ಕರಿಸಿದರು. ಆಗ ಅವನು ಅವರನ್ನು ಅತ್ಯು ಗ್ರವಾಗಿ ಹಿಡಿದನು.

:11

ಜಲವು ಮಿತಿಮೀರಿದಾಗ ನಾವು ನಿಮ್ಮನ್ನು ಹಡಗಿಗೆ ಹತ್ತಿಸಿ ರಕ್ಷಿಸಿದ್ದೆವು .

:12

ಅದನ್ನು ನಿಮ್ಮ ಪಾಲಿಗೆ ಒಂದು ಪಾಠ ಬೋಧಕ ಸ್ಮರಣೆಯಾಗಿ ಮಾಡಲು ಮತ್ತು ಕಿವಿಗೊಟ್ಟು ಆಲಿಸುವ ಕಿವಿಗಳು ಇದರ ನೆನಪನ್ನು ಅಚ್ಚಳಿಯದೆ ಉಳಿಸಲು.

:13

ಮುಂದೆ ಒಂದೇ ಒಂದು ಬಾರಿ ಕಹಳೆಯನ್ನೂದಿದಾಗ!

:14

ಹಾಗೂ ಭೂಮಿ ಮತ್ತು ಪರ್ವತಗಳನ್ನೆತ್ತಿ ಒಂದೇ ಏಟಿಗೆ ನುಚ್ಚುನೂರು ಮಾಡಲಾದಾಗ.

:15

ಅಂದು, ಆ ಘಟನೆಯು ಸಂಭವಿಸಿ ಬಿಡುವುದು.

:16

ಆಕಾಶವು ಬಿರಿಯುವುದು. ಅಂದು ಅದು ದುರ್ಬಲವಾಗಿರುವುದು.

:17

ದೇವಚರರು ಅದರ ನಾನಾ ಅಂಚುಗಳಲ್ಲಿರುವರು. ಮತ್ತು ಅವರ ಮೇಲಕ್ಕೆ ತಮ್ಮ ಪ್ರಭುವಿನ ಅರ್ಶ್‍ನ್ನು ಎಂಟು ಮಲಕ್‍ಗಳು ಹೊತ್ತಿರುವರು.

:18

ಅದು ನಿಮ್ಮನ್ನು (ಅಲ್ಲಾಹನ ಸನ್ನಿಧಿಯಲ್ಲಿ) ಪ್ರದರ್ಶಿಸಲ್ಪಡುವ ದಿನವಾಗಿರುವುದು. ಯಾವ ರಹಸ್ಯವೂ ನಿಮ್ಮಿಂದ ಅಡಗಿರಲಾರದು.

:19

ಅಂದು ಯಾವನ ಕರ್ಮಗ್ರಂಥವನ್ನು ಅವನ ಬಲಗೈಯಲ್ಲಿ ಕೊಡಲಾಗುವುದೋ ಅವನು ಹೇಳುವನು; `ಇದೋ ನನ್ನ ಕರ್ಮಗ್ರಂಥ. ಒಮ್ಮೆ ಹಿಡಿದುಕೊಂಡು ಓದಿ ನೋಡಿರಿ.

:20

ನನಗೆ ವಿಚಾರಣೆಯನ್ನು ಎದುರಿಸಲಿಕ್ಕಿದೆ ಎಂದು ನಾನು ಮೊದಲೇ ನಂಬಿಕೊಂಡಿದ್ದೆ.

:21

ಆಗ ಅವನು ಸಂತೃಪ್ತಿಯ ಜೀವನದಲ್ಲಿರುವನು.

:22

ಅಂದರೆ, ಅತ್ಯುನ್ನತ ಸ್ವರ್ಗೋದ್ಯಾನದಲ್ಲಿ.

:23

ಅದರ ಹಣ್ಣುಗಳ ಗೊಂಚಲುಗಳು (ಕೊಯ್ದು ತೆಗೆಯಲು ಸುಲಭವಾಗುವಂತೆ) ಅವರಿಗೆ ನಿಕಟವಾಗಿರುವುವು.

:24

ಕಳೆದು ಹೋದ ದಿನಗಳಲ್ಲಿ ನೀವು ಮಾಡಿರುವ ಸತ್ಕರ್ಮಗಳ ಪ್ರತಿಫಲವಾಗಿ ಸಂತೋಷದಿಂದ ತಿನ್ನಿರಿ ಮತ್ತು ಕುಡಿಯಿರಿ. (ಎಂದು ಅವರೊಂದಿಗೆ ಹೇಳಲಾಗುವುದು.)

:25

ಯಾವನ ಕರ್ಮಗ್ರಂಥವನ್ನು ಅವನ ಎಡಗೈಯಲ್ಲಿ ಕೊಡಲಾಗುವುದೋ ಅವನು ಹೇಳುವನು, ‘ಅಯ್ಯೋ! ನನ್ನ ಕರ್ಮಗ್ರಂಥವನ್ನು ನನಗೆ ಕೊಡದೆ ಇರುತ್ತಿದ್ದರೆ !

:26

ಮತ್ತು ನನ್ನ ವಿಚಾರಣಾ ಫಲವೇನೆಂದು ನನಗೆ ತಿಳಿಯದೆ ಇರುತ್ತಿದ್ದರೆ ಉತ್ತಮವಿತ್ತು.

:27

ಅಯ್ಯೋ ನನ್ನ ಮರಣವೇ ಅಂತಿಮವಾಗಿರುತ್ತಿದ್ದರೆ (ಉತ್ತಮವಿತ್ತು.)

:28

ನನ್ನ ಸಂಪತ್ತು (ಇಂದು) ನನಗೇನೂ ಪ್ರಯೋಜನ ಕೊಡಲಿಲ್ಲ.

:29

ನನ್ನ ಅಧಿಕಾರವೆಲ್ಲವೂ ನನಗೆ ನಷ್ಟಗೊಂಡಿತು.

:30

(ದೇವಚರರೊಂದಿಗೆ ಅಲ್ಲಾಹು ಹೇಳುವನು) ಅವನನ್ನು ಹಿಡಿಯಿರಿ ಮತ್ತು ಅವನಿಗೆ (ಕೈ, ಕೊರಳಿಗೆ) ಬೇಡಿ ತೊಡಿಸಿರಿ.

:31

ಅನಂತರ ಅವನನ್ನು ನರಕದೊಳಕ್ಕೆ ಪೂರ್ಣವಾಗಿ ಮುಳುಗಿಸಿರಿ.

:32

ಆ ಬಳಿಕ ಅವನನ್ನು ಎಪ್ಪತ್ತು ಮೊಳ ಉದ್ದದ ಸಂಕೋಲೆಯೊಳಕ್ಕೆ ಬಿಗಿಯಿರಿ.

:33

ಅವನು ಮಹಾನನಾದ ಅಲ್ಲಾಹನ ಮೇಲೆ ವಿಶ್ವಾ ಸವಿರಿಸುತ್ತಿರಲಿಲ್ಲ.

:34

ಮತ್ತು ಬಡವರಿಗೆ (ಮಿಸ್ಕೀನರಿಗೆ) ಆಹಾರ ಕೊಡಲು ಪ್ರೇರೇಪಿಸುತ್ತಲೂ ಇರಲಿಲ್ಲ.

:35

ಆದುದರಿಂದ ಇಂದು ಅವನಿಗೆ ಇಲ್ಲಿ ಬಂಧುಗಳು ಯಾರೂ ಇಲ್ಲ.

:36

ಗಿಸ್ಲೀನ್ (ನರಕದಲ್ಲಿ ಮಡುಗಟ್ಟುವ ರಕ್ತ, ಕೀವು, ಕೊಳಚೆ ನೀರುಗಳ ಸಂಗ್ರಹ) ಹೊರತು ಅವನಿಗೆ ಬೇರೆ ಯಾವ ಆಹಾರವೂ ಇಲ್ಲ.

:37

ಅದನ್ನು ಪಾಪಿಗಳ ಹೊರತು ಇನ್ನಾರೂ ತಿನ್ನುವುದಿಲ್ಲ.

:38

:39

ನೀವು ಕಾಣುವ ವಸ್ತುಗಳ ಮತ್ತು ಕಾಣದ ವಸ್ತುಗಳ ಆಣೆ ಹಾಕುತ್ತೇನೆ!

:40

ಇದು (ಖುರ್‍ಆನ್) ಓರ್ವ ಗೌರವಾನ್ವಿತ ದೂತರ ಮಾತಾಗಿದೆ.

:41

(ಇದು) ಯಾವುದೇ ಒಂದು ಕವಿಯ ಮಾತಲ್ಲ. ನೀವು ಸ್ವಲ್ಪ ಮಾತ್ರವೇ ವಿಶ್ವಾಸ ಹೊಂದಿರುತ್ತೀರಿ.

:42

ಇದೊಂದು ಜ್ಯೋತಿಷಿಯ ಮಾತೂ ಅಲ್ಲ. ನೀವು ಅತ್ಯಲ್ಪವೇ ಯೋಚಿಸಿ ಅರ್ಥ ಮಾಡಿಕೊಳ್ಳುತ್ತೀರಿ.

:43

ಇದು ಸರ್ವಲೋಕ ಪಾಲಕ ಪ್ರಭುವಿನ ಕಡೆಯಿಂದ ಅವತೀರ್ಣಗೊಂಡಿದೆ.

:44

ಪ್ರವಾದಿಯು ನಮ್ಮ ಮೇಲೆ (ನಾವು ಹೇಳದ) ಯಾವುದೇ ಮಾತುಗಳನ್ನು ಸ್ವಂತದ್ದಾಗಿ ರಚಿಸಿ ಹೇಳಿರುತ್ತಿದ್ದರೆ,

:45

ಖಂಡಿತ ನಾವು ನಮ್ಮ ಬಲದಿಂದ ಅವರಿಗೆ ಶಿಕ್ಷೆ ಯನ್ನು ಕೊಡುತ್ತಿದ್ದೆವು.

:46

ಮತ್ತು ಅವರ ಹೃದಯದ ಜೀವನಾಡಿಯನ್ನು ಕತ್ತರಿಸಿ ಹಾಕುತ್ತಿದ್ದೆವು.

:47

ಆಗ, ನಿಮ್ಮ ಪೈಕಿ ಯಾರಿಗೂ ಅವರಿಂದ ನನ್ನ ಶಿಕ್ಷೆಯನ್ನು ತಡೆಯಲು ಸಾಧ್ಯವಿರುತ್ತಿರಲಿಲ್ಲ.

:48

ಇದು (ಖುರ್‍ಆನ್) ದೇವಭಯವುಳ್ಳವರಿ ಗೊಂದು ಉಪದೇಶವಾಗಿದೆ.

:49

ನಿಮ್ಮ ಪೈಕಿ ಇದನ್ನು (ಖುರ್‍ಆನನ್ನು) ನಿಷೇಧಿಸಿ ತಳ್ಳುವವರಿದ್ದಾರೆಂಬುದನ್ನು ನಾವು ಬಲ್ಲೆವು.

:50

ಸತ್ಯನಿಷೇಧಿಗಳಿಗೆ ಖಂಡಿತವಾಗಿಯೂ ಇದು ಖೇದವೇ ಆಗಿರುತ್ತದೆ.

:51

ಖಂಡಿತ ಇದು ಅತ್ಯಂತ ಖಚಿತವಾದ ಸತ್ಯವಾಗಿದೆ.

:52

ಆದುದರಿಂದ (ಸಂದೇಶವಾಹಕರೇ,) ತಾವು ತಮ್ಮ ಮಹೋನ್ನತ ಪ್ರಭುವಿನ ನಾಮವನ್ನು ಕೊಂಡಾಡಿರಿ.