ಆಲ್ ಇಸ್ಲಾಂ ಲೈಬ್ರರಿ

68 - The Pen - Al-Qalam

:1

ನೂನ್-ಲೇಖನಿಯ ಆಣೆ ಹಾಗೂ ಅವರು ಬರೆದಿಡುತ್ತಿರುವುದರಾಣೆ.

:2

ತಮ್ಮ ಪ್ರಭುವಿನ ಅನುಗ್ರಹದಿಂದ ತಾವು ಹುಚ್ಚರಲ್ಲ.

:3

ಖಂಡಿತವಾಗಿಯೂ ತಮಗೆ ಎಂದಿಗೂ ಮುಗಿದು ಹೋಗದಂತಹ ಸತ್ಫಲವಿದೆ.

:4

ನಿಶ್ಚಯವಾಗಿಯೂ ತಾವು ಸತ್‍ಸ್ವಭಾವದ ಅತ್ಯುನ್ನತ ಮಟ್ಟದಲ್ಲಿದ್ದೀರಿ.

:5

ಸದ್ಯದಲ್ಲೇ ತಾವೂ ನೋಡಿ ತಿಳಿಯುವಿರಿ ಮತ್ತು ಅವರೂ ಕಂಡರಿಯುವರು.

:6

ನಿಮ್ಮ ಪೈಕಿ ಯಾರು ಪೀಡೆಗೊಳಗಾದವರು?’ ಎಂಬುದನ್ನು.

:7

ತಮ್ಮ ಪ್ರಭುವು ಅವನ ಮಾರ್ಗದಿಂದ ತಪ್ಪಿ ಹೋದವರ ಬಗ್ಗೆ ಚೆನ್ನಾಗಿ ಅರಿತಿರುತ್ತಾನೆ ಮತ್ತು ಸನ್ಮಾರ್ಗ ಪ್ರಾಪ್ತರ ಬಗೆಗೂ ಅವನು ಚೆನ್ನಾಗಿ ಬಲ್ಲವನಾಗಿದ್ದಾನೆ.

:8

ಆದುದರಿಂದ ಸುಳ್ಳಾಗಿಸುವವರನ್ನು ತಾವು ಅನುಸರಿಸಬೇಡಿರಿ.

:9

ತಾವು ಸಡಿಲು ತೋರಿದರೆ ಒಳ್ಳೆಯದಿತ್ತೆಂದು ಅವರು ಆಗ್ರಹಿಸುತ್ತಾರೆ. ಆಗ ಅವರು ಕೂಡಾ ಸಡಿಲು ತೋರುವರು.

:10

:11

:12

:13

ಅತ್ಯಧಿಕ ಆಣೆ ಹಾಕುವವನೂ, ನೀಚನೂ ಚುಚ್ಚು ಮಾತು ಹೇಳುವವನೂ ಚಾಡಿ ಹೇಳುತ್ತಾ ತಿರುಗುವವನೂ ಸತ್ಕಾರ್ಯಗಳನ್ನು ಮಾಡದಂತೆ ತಡೆಯುವವನೂ ದುಷ್ಕರ್ಮಿಯೂ ಮಹಾಪಾಪಿಯೂ ಕ್ರೂರನೂ ಮತ್ತು ಇದೆಲ್ಲದರ ಜೊತೆಗೆ ಕುಲಗೆಟ್ಟವನೂ ಆಗಿರುವ ಯಾವನನ್ನೂ ತಾವು ಅನುಸರಿಸಬೇಡಿರಿ.

:14

ಅವನು ಬಹಳಷ್ಟು ಸಂಪತ್ತು ಮತ್ತು ಸಂತಾನವು ಳ್ಳವನೆಂಬ ನೆಲೆಯಲ್ಲಿ ಹೀಗಾಗಿದ್ದಾನೆ.

:15

ಅವನಿಗೆ ನಮ್ಮ ಸೂಕ್ತಗಳನ್ನು ಓದಿ ಕೇಳಿಸಿದಾಗ ಇವೆಲ್ಲ ಪೂರ್ವಿಕರ ಕಟ್ಟುಕತೆಗಳು ಎಂದು ಹೇಳುತ್ತಾನೆ.

:16

ಶೀಘ್ರವೇ ನಾವು ಅವನ ಸೊಂಡಿಲಿಗೆ (ನೀಳ ಮೂಗಿಗೆ) ಬರೆ ಗುರುತು ಎಳೆಯಲಿದ್ದೇವೆ.

:17

ಒಂದು ತೋಟದವರನ್ನು ನಾವು ಪರೀಕ್ಷೆಗೆ ಒಳಪಡಿಸಿದ್ದಂತೆಯೇ ಇವರನ್ನು ಪರೀಕ್ಷೆ ಗೊಳಪಡಿಸಿರುತ್ತೇವೆ. ಆ ತೋಟದ ಫಲಗಳನ್ನು ನಸುಕಿನ ವೇಳೆ ಕೊಯ್ಯುವುದಾಗಿ ಅವರು ಶಪಥ ಹಾಕಿದ ಸಂದರ್ಭ.

:18

ಅವರು ಏನನ್ನೂ ಹೊರತುಪಡಿಸಿ ಹೇಳಿರಲಿಲ್ಲ.

:19

ಆಮೇಲೆ ಇರುಳಲ್ಲಿ ಅವರು ನಿದ್ರಿಸುತ್ತಿದ್ದಾಗ ತಮ್ಮ ಪ್ರಭುವಿನ ಕಡೆಯಿಂದ ಆ ತೋಟಕ್ಕೆ ವಿಪತ್ತೊಂದು ಎರಗಿತು.

:20

ಆಮೇಲೆ ಇರುಳಲ್ಲಿ ಅವರು ನಿದ್ರಿಸುತ್ತಿದ್ದಾಗ ತಮ್ಮ ಪ್ರಭುವಿನ ಕಡೆಯಿಂದ ಆ ತೋಟಕ್ಕೆ ವಿಪತ್ತೊಂದು ಎರಗಿತು.

:21

ಅನಂತರ ಪ್ರಭಾತದಲ್ಲಿ ಅವರು - ಪರಸ್ಪರ ಕೂಗಿ ಹೇಳಿದರು.

:22

``ನೀವು ಫಲಗಳನ್ನು ಕೊಯ್ಯಬೇಕೆಂದು ಉದ್ದೇಶಿಸುತ್ತೀರೆಂದಾದರೆ ನಸುಕಿನಲ್ಲೇ ನಿಮ್ಮ ಹೊಲಗಳ ಕಡೆಗೆ ಹೊರಡಿರಿ’’.

:23

:24

‘ಇಂದು ಬಡವನಾರೂ ನಿಮ್ಮ ಹತ್ತಿರ ತೋಟಕ್ಕೆ ಬಾರದಂತೆ ನೋಡಿಕೊಳ್ಳಬೇಕು’ ಎಂದು ಅವರು ಪರಸ್ಪರ ಪಿಸುಗುಟ್ಟುತ್ತ ತೆರಳಿದರು.

:25

(ಬಡವರನ್ನು) ತಡೆಯಲು ನಾವು ಶಕ್ತರು ಅಂದು ಕೊಳ್ಳುತ್ತಾ ನಸುಕಿನಲ್ಲೇ ಅಲ್ಲಿಗೆ ಹೋದರು.

:26

ಆದರೆ ತೋಟವನ್ನು ಕಂಡಾಗ ಅವರು ಹೇಳಿ ದರು, ‘ನಾವು ದಾರಿ ತಪ್ಪಿದವರೇ ಆಗಿದ್ದೇವೆ.’

:27

ಅಲ್ಲ, ನಿಜವಾಗಿ ನಾವು (ಉಪಜೀವನಮಾರ್ಗ) ತಡೆಯಲ್ಪಟ್ಟವರಾಗಿದ್ದೇವೆ.

:28

ಅವರ ಪೈಕಿ ಮಧ್ಯಮ ಧೋರಣೆಯವನು; ‘ನೀವೇಕೆ ಅಲ್ಲಾಹನ ಮಹತ್ವವನ್ನು ಒಪ್ಪದೇ ಹೋದಿರಿ? ಎಂದು ನಾನು ನಿಮ್ಮೊಡನೆ ಹೇಳಿರಲಿ ಲ್ಲವೇ?’ ಎಂದನು.

:29

`ಆಗ ಅವರು, ‘ನಮ್ಮ ಪ್ರಭು ಪರಮ ಪಾವನನು, ನಿಜಕ್ಕೂ ನಾವು ಅಕ್ರಮಿಗಳಾಗಿದ್ದೆವು’ ಎಂದರು.

:30

ತರುವಾಯ ಅವರಲ್ಲಿ ಪ್ರತಿಯೊಬ್ಬರೂ ಪರಸ್ಪರ ತೆಗಳುತ್ತ ಎದುರುಗೊಂಡರು.

:31

ಕೊನೆಗೆ ಅವರು, ‘ಅಯ್ಯೋ ನಮ್ಮ ನಾಶವೇ! ನಿಜಕ್ಕೂ ನಾವು ಅತಿಕ್ರಮಿಗಳಾಗಿಬಿಟ್ಟಿದ್ದೆವು’ ಎಂದರು.

:32

ನಮ್ಮ ಪ್ರಭು ಇದಕ್ಕೆ ಬದಲಾಗಿ ಇದಕ್ಕಿಂತಲೂ ಉತ್ತಮ ತೋಟ ದಯಪಾಲಿಸಲೂಬಹುದು. ನಾವು ನಮ್ಮ ಪ್ರಭುವಿನ ಕಡೆಗೆ ಆಗ್ರಹ ಸಮರ್ಪಿ ಸುವವರಾಗಿದ್ದೇವೆ’ ಎಂದರು.

:33

ಶಿಕ್ಷೆಯು ಹೀಗಿರುತ್ತದೆ. ಮತ್ತು ಪರಲೋಕದ ಶಿಕ್ಷೆಯು ಇದಕ್ಕಿಂತಲೂ ದೊಡ್ಡದಾಗಿದೆ. ಇದನ್ನು ಅವರು ತಿಳಿದಿರುತ್ತಿದ್ದರೆ!

:34

ಖಂಡಿತವಾಗಿಯೂ, ದೇವಭಯವುಳ್ಳವರಿಗೆ ಅವರ ಪ್ರಭುವಿನ ಬಳಿ ಅನುಗ್ರಹೀತ ಸ್ವರ್ಗೋ ದ್ಯಾನಗಳಿವೆ.

:35

ಮುಸ್ಲಿಮರನ್ನು ನಾವು ಅಪರಾಧಿಗಳಂತೆ ಮಾಡುವೆವೇನು?

:36

ನಿಮಗೇನಾಗಿದೆ? ನೀವು ಹೇಗೆ ತೀರ್ಮಾನ ಮಾಡುತ್ತಿರುವಿರಿ?

:37

ಅದಲ್ಲ, ನಿಮ್ಮ ಬಳಿ ಗ್ರಂಥವಿದ್ದು, ನೀವು ಅದರಲ್ಲಿ ಅಧ್ಯಯನ ನಡೆಸುತ್ತಿರುವಿರಾ?

:38

ನೀವು (ಯಥೇಷ್ಟ) ಆಯ್ಕೆ ಮಾಡುವ ವಿಷಯಗಳು ನಿಮಗೆ ಆ ಗ್ರಂಥದಲ್ಲಿ ಬಂದಿದೆಯೇನು?

:39

ಅಥವಾ ಪುನರುತ್ಥಾನದ ದಿನದ ವರೆಗೆ ದೀರ್ಘಾ ವಧಿಯುಳ್ಳ ವಾಗ್ದಾನವನ್ನು ನಮ್ಮಿಂದ ಪಡೆದಿ ರುವಿರೇನು? ನೀವು ತೀರ್ಮಾನಿಸುವುದೆಲ್ಲವೂ ನಿಮಗಿದೆ ಎಂಬ ಬಗ್ಗೆ!

:40

ಅವರ ಪೈಕಿ ಅದರ ಕುರಿತು ಜವಾಬ್ದಾರಿ ವಹಿಸಿ ಕೊಳ್ಳುವವರು ಯಾರು? ಎಂದು ಅವರೊಡನೆ ಕೇಳಿ ನೋಡಿರಿ.

:41

ಅಥವಾ ಅವರಿಗೆ ಸಹಭಾಗಿಗಳು ಯಾರಾದರೂ ಇದ್ದಾರೆಯೇ? ಅವರು ಸತ್ಯವಂತರಾಗಿದ್ದರೆ ತಮ್ಮ ಸಹಭಾಗಿಗಳನ್ನು ತರಲಿ.

:42

ಕಣೆಗಾಲು ತೆರೆಯಲ್ಪಡುವ (ಭಯಂಕರವಾದ) ಒಂದು ದಿನವನ್ನು (ತಾವು ನೆನೆಯಿರಿ). ಅಂದು ಸಾಷ್ಟಾಂಗವೆರಗಲಿಕ್ಕಾಗಿ ಅವರನ್ನು ಕರೆಯು ವಾಗ ಅವರಿಗೆ ಅದು ಸಾಧ್ಯವಾಗದು.

:43

ಅವರ ದೃಷ್ಟಿಗಳು ದೈನ್ಯತೆಯಿಂದ ಕೂಡಿದ್ದು ಅಪಮಾನವು ಅವರನ್ನು ಆವರಿಸಿಕೊಂಡಿ ರುವುದು. ಅವರು ಸುರಕ್ಷಿತರಾಗಿದ್ದಾಗ ಇವರನ್ನು ಸಾಷ್ಟಾಂಗವೆರಗಲಿಕ್ಕಾಗಿ ಕರೆಯಲಾಗುತ್ತಿತ್ತು. (ಆದರೆ ಅವರಂದು ನಿರ್ವಹಿಸಲಿಲ್ಲ)

:44

ಆದುದರಿಂದ ಸಂದೇಶವಾಹಕರೇ, ತಾವು ನನ್ನನ್ನು ಮತ್ತು ಈ ವೃತ್ತಾಂತವನ್ನು ತಿರಸ್ಕರಿಸು ವವರನ್ನು ಬಿಟ್ಟುಬಿಡಿರಿ. ಅವರು ಅರಿಯದ ಭಾಗದಿಂದ ನಾವು ಅವರನ್ನು ಹಂತಹಂತವಾಗಿ ಹಿಡಿದು ಕೊಳ್ಳುವೆವು.

:45

ನಾನು ಅವರಿಗೆ ಸಾವಕಾಶ ನೀಡುತ್ತೇನೆ. ನನ್ನ ತಂತ್ರವು ಅತ್ಯಂತ ಪ್ರಚಂಡವಾಗಿದೆ.

:46

ತಾವು ಅವರಿಂದ ಏನಾದರೂ ಪ್ರತಿಫಲ ಕೇಳು ತ್ತಿರುವಿರಾ? ಅದರ ಭಾರ ಅವರಿಗೆ ಹೊರೆಯಾ ಗುವ ಸ್ಥಿತಿಯಲ್ಲಿ?

:47

ಅಥವಾ ಪರೋಕ್ಷವು ಅವರ ಬಳಿ ಇದೆಯೆ? ಅದ ರಿಂದ ಅವರು ಬರೆದುಕೊಳ್ಳುತ್ತಿರುವರೇನು?

:48

ಸರಿ, ತಾವು ತಮ್ಮ ಪ್ರಭುವಿನ (ಅವರ ವಿಷಯ ದಲ್ಲಿ) ತೀರ್ಪಿಗಾಗಿ ತಾಳ್ಮೆ ವಹಿಸಿರಿ ಮತ್ತು ಮತ್ಸ್ಯ ದ ವ್ಯಕ್ತಿಯಂತೆ (ಯೂನುಸ್ ನಬಿಯರಂತೆ) ಆಗಬೇಡಿರಿ. ಅವರು ವ್ಯಸನ ಚಿತ್ತರಾಗಿ ಪ್ರಾರ್ಥಿ ಸಿದ ಸಂದರ್ಭ!

:49

ಅವರ ಪ್ರಭುವಿನ ಒಂದು ಅನುಗ್ರಹವು ಅವರಿಗೆ ಸಿಗದೆ ಇರುತ್ತಿದ್ದರೆ, ಅವರು ಆಕ್ಷೇಪಾರ್ಹರಾಗಿ ಬಟ್ಟ ಮರುಭೂಮಿಯಲ್ಲಿ ಹೊರ ಎಸೆಯಲ್ಪಡು ತ್ತಿದ್ದರು.

:50

ಕೊನೆಗೆ ಅವರ ಪ್ರಭು ಅವರನ್ನು ಆರಿಸಿಕೊಂ ಡನು ಮತ್ತು ಅವರನ್ನು ಸಜ್ಜನರ ಸಾಲಿಗೆ ಸೇರಿ ಸಿಕೊಂಡನು.

:51

ಸತ್ಯನಿಷೇಧಿಗಳು, ಈ ಉಪದೇಶವನ್ನು ಕೇಳಿ ದಾಗ ಅವರ ಕಣ್ಣುಗಳಿಂದ ದುರುಗುಟ್ಟಿ ನೋ ಡುತ್ತ ತಮ್ಮನ್ನು ಜಾರಿ ಬೀಳಿಸಲು ಹೆಣಗುತ್ತಾರೆ. ಮತ್ತು ಇವನು ಖಂಡಿತ ಹುಚ್ಚ ಎಂದು ಹೇಳು ತ್ತಾರೆ .

:52

ಇದು ಲೋಕದ ಜನತೆಗಿರುವ ಒಂದು ಉದ್ಬೋಧನೆಯಲ್ಲದೆ ಇನ್ನೇನೂ ಅಲ್ಲ.