ಆಲ್ ಇಸ್ಲಾಂ ಲೈಬ್ರರಿ

54 - The Moon - Al-Qamar

:1

ಅಂತ್ಯ ಸಮಯ ಸನ್ನಿಹಿತವಾಯಿತು ಮತ್ತು ಚಂದ್ರನು ಹೋಳಾದನು.

:2

ಆದರೆ ಯಾವ ದೃಷ್ಟಾಂತವನ್ನು ಕಂಡರೂ ಅವರು ವಿಮುಖರಾಗುತ್ತಾರೆ ಮತ್ತು ಇದೊಂದು ಸ್ಥಾಯೀ ಮಾಟಗಾರಿಕೆ ಎನ್ನುತ್ತಾರೆ.

:3

ಅವರು (ಪ್ರವಾದಿಯವರನ್ನು) ಸುಳ್ಳಾಗಿಸಿದರು ಮತ್ತು ತಮ್ಮ ಸ್ವೇಚ್ಛೆಗಳನ್ನೇ ಅನುಸರಿಸಿದರು. ಎಲ್ಲ ಕಾರ್ಯಗಳು ಸ್ಥಿರ ನಿಶ್ಚಿತವೇ ಆಗಿರುತ್ತದೆ.

:4

(ದೇವ ನಿಷೇಧದಿಂದ) ತಡೆಯಬಲ್ಲಷ್ಟು ಪಾಠವುಳ್ಳ ವಾರ್ತೆಗಳು ಅವರಿಗೆ ಬಂದು ತಲುಪಿವೆ.

:5

ಸಂಪೂರ್ಣವಾದ ತತ್ವ. (ಅವರ ಮುಂದೆ ಬಂದಿವೆ.) ಆದರೆ ಯಾವ ಎಚ್ಚರಿಕೆಯೂ ಅವರ ಮೇಲೆ ಪರಿಣಾಮ ಬೀರುವುದಿಲ್ಲ.

:6

ಆದುದರಿಂದ (ಸಂದೇಶವಾಹಕರೇ,) ಅವರಿಂದ ವಿಮುಖರಾಗಿರಿ. ಕೂಗುವಾತನು ಒಂದು ಅತ್ಯಂತ ಅನಿಷ್ಟಕರ ವಿಚಾರದ ಕಡೆಗೆ ಕೂಗುವಂದು,

:7

ಅವರು ತಲ್ಲಣಗೊಂಡ ದೃಷ್ಟಿಯೊಂದಿಗೆ ಕೂಟ ಚದುರಿದ ಕತ್ತರಿಗಿಳಿಗಳಂತೆ ತಮ್ಮ ಸಮಾಧಿಗಳಿಂದ ಹೊರಬರುವರು.

:8

ಕೂಗುವವನ ಕಡೆಗೆ ಧಾವಿಸುತ್ತಿರುವರು. (ಅದೇ) ಸತ್ಯನಿಷೇಧಿಗಳು ಅಂದು, ಇದು ಕಠಿಣವಾದ ದಿನ ಎಂದು ಹೇಳುವರು.

:9

ಇವರಿಗಿಂತ ಮುಂಚೆ ನೂಹರ ಜನಾಂಗವು (ಸತ್ಯವನ್ನು) ಸುಳ್ಳಾಗಿಸಿದೆ. ಅವರು ನಮ್ಮ ದಾಸನನ್ನು (ನೂಹ್‍ರನ್ನು) ಸುಳ್ಳುಗಾರನೆಂದರು. ಇವನು ಹುಚ್ಚನೆಂದರು. ಮತ್ತು ನೂಹರು ತೀವ್ರವಾಗಿ ಅಟ್ಟಲ್ಪಟ್ಟರು.

:10

ಕೊನೆಗೆ ಅವರು ತನ್ನ ಪ್ರಭುವಿನೊಂದಿಗೆ ನಾನು ಸೋತೆ, ಇನ್ನು ನೀನು ರಕ್ಷಾಕ್ರಮ ಕೈಗೊಳ್ಳು ಎಂದು ಪ್ರಾರ್ಥಿಸಿದರು.

:11

ಆಗ ಧಾರಾಕಾರವಾಗಿ ಸುರಿಯುವ ಮಳೆಯೊಂದಿಗೆ ಆಕಾಶದ ದ್ವಾರಗಳನ್ನು ನಾವು ತೆರೆದು ಬಿಟ್ಟೆವು.

:12

ಭೂಮಿಯನ್ನು ಸೀಳಿ ಚಿಲುಮೆಗಳಾಗಿ ಮಾರ್ಪಡಿಸಿ ಬಿಟ್ಟೆವು ಮತ್ತು ವಿಧಿಸಲ್ಪಟ್ಟಿದ್ದ ಒಂದು ಕಾರ್ಯಕ್ಕಾಗಿ ನೀರು ಸಂಧಿಸಿತು.

:13

ಹಲಗೆ ಹಾಗೂ ಮೊಳೆಗಳಿದ್ದ ಒಂದು ವಸ್ತುವಿನ (ಹಡಗಿನ) ಮೇಲೆ ಅವರನ್ನು (ನೂಹ್‍ರನ್ನು) ನಾವು ಸವಾರಿ ಮಾಡಿಸಿದೆವು.

:14

ಅದು (ಹಡಗು) ನಮ್ಮ ಮೇಲ್ನೋಟದಲ್ಲಿ ಚಲಿಸುತ್ತಿತ್ತು. ಅದು ನಿಷೇಧಿಸಿ ತಳ್ಳಲಾದ ವ್ಯಕ್ತಿಯ (ನೂಹ್‍ರ) ಪರವಾಗಿ ಪ್ರತೀಕಾರವಾಗಿತ್ತು .

:15

ಆ ಹಡಗನ್ನು ನಾವು ಒಂದು ದೃಷ್ಟಾಂತವಾಗಿ ಉಳಿಸಿದೆವು. ಯಾರಿದ್ದಾರೆ ಇದರಿಂದ (ಚಿಂತಿಸಿ) ಉಪದೇಶ ಪಡೆಯುವವರು ?

:16

ಹೇಗಿತ್ತು ನನ್ನ ಶಿಕ್ಷೆ ಮತ್ತು ಎಚ್ಚರಿಕೆಗಳು!

:17

ಖುರ್‍ಆನನ್ನು ಚಿಂತಿಸಲಿಕ್ಕಾಗಿ ನಾವು ಸರಳಗೊಳಿಸಿದ್ದೇವೆ. ಯಾರಿದ್ದಾರೆ ಯೋಚಿಸುವವರು?

:18

ಆದ್ ಜನಾಂಗದವರು (ಸತ್ಯವನ್ನು) ಧಿಕ್ಕರಿಸಿದರು. ಆಗ ನನ್ನ ಶಿಕ್ಷೆ ಮತ್ತು ನನ್ನ ಎಚ್ಚರಿಕೆಗಳು ಹೇಗಾಯಿತೆಂದು ನೋಡಿರಿ.

:19

ಒಂದು ಸ್ಥಿರವಾದ ಅಶುಭ ದಿನದಂದು ಅವರ ವಿರುದ್ಧ ತೀವ್ರ ಝೇಂಕಾರದ ಬಿರುಗಾಳಿಯನ್ನು ನಾವು ಕಳುಹಿಸಿದೆವು.

:20

ಆ ಗಾಳಿಯು ಖರ್ಜೂರದ ಮರಗಳನ್ನು ಬುಡ ಕಳಚಿ ಬೀಳಿಸುವಂತೆ ಜನರನ್ನು ಎತ್ತಿ ಅಪ್ಪಳಿಸಿ ಹಾಕಿತು.

:21

ಹೇಗಿತ್ತು ನನ್ನ ಶಿಕ್ಷೆ ಮತ್ತು ನನ್ನ ಎಚ್ಚರಿಕೆಗಳು!

:22

ಚಿಂತಿಸಲಿಕ್ಕಾಗಿ ಖುರ್‍ಆನನ್ನು ನಾವು ಸರಳ ಗೊಳಿಸಿರುವೆವು. ಯಾರಿದ್ದಾರೆ ಚಿಂತಿಸುವರು?

:23

ಸಮೂದ್ ಜನಾಂಗದವರು ಎಚ್ಚರಿಕೆಗಳನ್ನು ಸುಳ್ಳಾಗಿಸಿದರು.

:24

ನಮ್ಮವನೇ ಆದ ವ್ಯಕ್ತಿಯೊಬ್ಬನನ್ನು ನಾವು ಅನುಸರಿಸುವುದೆ? ಹಾಗಾದರೆ ನಾವು ದಾರಿಗೆಟ್ಟವರೂ ಮರುಳರೂ ಆಗಿಬಿಡುವೆವು.

:25

ನಮ್ಮ ನಡುವೆ ಸಂದೇಶ (`ದಿಕ್ರ್’) ಇಳಿಸಲ್ಪಡಲು ಅವನೊಬ್ಬನೇ ಇರುವುದೇ? (ಅಲ್ಲ) ಅವನು ಮಹಾ ಸುಳ್ಳುಗಾರನೂ, ದುರಹಂಕಾರಿಯೂ ಆಗಿದ್ದಾನೆ ಎಂದು ಅವರು ಹೇಳಿದರು.

:26

ಮಹಾ ಸುಳ್ಳುಗಾರನೂ ದುರಹಂಕಾರಿಯೂ ಯಾರೆಂದು ನಾಳೆ ಅವರಿಗೆ ತಿಳಿಯಲಿದೆ.

:27

ಒಂದು ಒಂಟೆಯನ್ನು ಅವರಿಗೆ ಪರೀಕ್ಷೆಯಾಗಿ ಕಳುಹಿಸುತ್ತಿದ್ದೇವೆ. ಆದ್ದರಿಂದ ಅವರನ್ನು ನಿರೀಕ್ಷಿಸುತ್ತಿರಿ, ಕ್ಷಮೆಗೊಳ್ಳಿರಿ.

:28

ನೀರನ್ನು ಅವರ ನಡುವೆ ಹಂಚಲ್ಪಟ್ಟದ್ದೆಂದೂ ಪ್ರತಿಯೊಬ್ಬರೂ ತನ್ನ ಜಲಪಾನದ ಪಾಳಿಯಂತೆ ಹಾಜರಾಗುವಂತೆಯೂ ಅವರಿಗೆ ತಿಳಿಸಿ. (ಎಂದು ಸಾಲಿಹ್ ನಬಿಗೆ ನಾವು ಹೇಳಿದೆವು).

:29

ಕೊನೆಗೆ ಅವರು ತಮ್ಮ ಸ್ನೇಹಿತನನ್ನು ಕೂಗಿ ಕರೆದರು. ಅವನು ಈ ಕಾರ್ಯದ ಹೊಣೆಹೊತ್ತನು ಮತ್ತು ಅದನ್ನು ಕೊಂದು ಹಾಕಿದನು.

:30

ಅನಂತರ ನೋಡಿರಿ, ಹೇಗಿತ್ತು ನನ್ನ ಶಿಕ್ಷೆ ಮತ್ತು ನನ್ನ ಎಚ್ಚರಿಕೆಗಳು?

:31

ನಾವು ಅವರ ಮೇಲೆ ಒಂದೇ ಒಂದು ಘೋರ ವಾದ ಶಬ್ಧವನ್ನು ಕಳುಹಿಸಿದೆವು. ಆಗ ಅವರು ಹಟ್ಟಿ ಕಟ್ಟುವವನ ತ್ಯಾಜ್ಯದಂತಾದರು.

:32

ಚಿಂತಿಸುವವರಿಗೆ ಈ ಖುರ್‍ಆನನ್ನು ನಾವು ಸುಲಭಗೊಳಿಸಿದ್ದೇವೆ. ಯಾರಿದ್ದಾರೆ ಚಿಂತಿಸುವವರು?

:33

ಲೂಥರ ಜನಾಂಗವು ಎಚ್ಚರಿಕೆಗಳನ್ನು ಸುಳ್ಳಾಗಿಸಿತು.

:34

ನಾವು ಅವರ ಮೇಲೆ ಕಲ್ಲಿನ ಸುಳಿಗಾಳಿಯನ್ನು ಕಳುಹಿಸಿದೆವು. ಲೂಥರ ಕುಟುಂಬವನ್ನು ಅದರಿಂದ ಹೊರತುಪಡಿಸಲಾಗಿತ್ತು. ರಾತ್ರೆಯ ಅಂತಿಮ ಜಾವದಲ್ಲಿ ನಾವು ಅವರನ್ನು ಸಂರಕ್ಷಿಸಿದೆವು.

:35

ನಮ್ಮ ಕಡೆಯಿಂದಿರುವ ಒಂದು ಅನುಗ್ರಹವಾಗಿ. ಕೃತಜ್ಞರಾಗಿರುವವರಿಗೆ ಈ ರೀತಿ ನಾವು ಪ್ರತಿಫಲ ನೀಡುತ್ತೇವೆ.

:36

ಲೂಥರು ತಮ್ಮ ಜನಾಂಗದವರಿಗೆ ನಮ್ಮ ಶಿಕ್ಷೆಯ ಕುರಿತು ಎಚ್ಚರಿಕೆ ನೀಡಿದ್ದರು. ಆದರೆ ಅವರು ಎಲ್ಲ ಎಚ್ಚರಿಕೆಗಳ ಬಗೆಗೆ ಕುತರ್ಕ ಹೂಡಿ ಸುಳ್ಳಾಗಿಸಿದರು.

:37

ತಮ್ಮ (ಲೂಥರ) ಅತಿಥಿಗಳನ್ನು (ದುರ್ಬಳಕೆಗೆ) ಬಿಟ್ಟು ಕೊಡುವಂತೆ ಅವರು ಲೂಥರಲ್ಲಿ ಅಪೇಕ್ಷಿಸಿದರು. ಆಗ ಅವರ ಕಣ್ಣುಗಳನ್ನು ಸವರಿ ಸಮತಟ್ಟು ಮಾಡಿಬಿಟ್ಟೆವು. ನನ್ನ ಶಿಕ್ಷೆ ಹಾಗೂ ಮುನ್ನೆಚ್ಚರಿಕೆಗಳ ಫಲವನ್ನು ಅನುಭವಿಸಿರಿ (ಎಂದು ಹೇಳಿದೆವು).

:38

ಒಂದು ಪ್ರಾತಃಕಾಲದಲ್ಲಿ ಸ್ಥಿರ ಶಿಕ್ಷೆಯು ಅವರನ್ನು ಆವರಿಸಿತು.

:39

ನನ್ನ ಶಿಕ್ಷೆಯ ಮತ್ತು ನನ್ನ ಎಚ್ಚರಿಕೆಗಳ ರುಚಿಯನ್ನು ಸವಿಯಿರಿ (ಎಂದು ಅವರಲ್ಲಿ ಹೇಳ ಲಾಯಿತು).

:40

ನಾವು ಈ ಖುರ್‍ಆನನ್ನು ಚಿಂತಿಸಲಿಕ್ಕಾಗಿ ಸರಳಗೊಳಿಸಿರುವೆವು. ಚಿಂತಿಸುವವರು ಯಾರಾದರೂ ಇದ್ದಾರೆಯೇ?

:41

ಫಿರ್‍ಔನ್‍ನ ಪರಿವಾರಕ್ಕೂ ಎಚ್ಚರಿಕೆಗಳು ಬಂದಿದ್ದುವು.

:42

ಅವರು ನಮ್ಮ ಎಲ್ಲ ದೃಷ್ಟಾಂತಗಳನ್ನು ನಿಷೇಧಿಸಿ ತಳ್ಳಿಹಾಕಿದರು. ಕೊನೆಗೆ ಪ್ರಚಂಡ ಶಕ್ತಿಶಾಲಿಯೊಬ್ಬನು ಹಿಡಿಯುವಂತೆ ಅವರನ್ನು ನಾವು ಹಿಡಿದು ಶಿಕ್ಷಿಸಿದೆವು.

:43

(ಜನರೇ) ನಿಮ್ಮ ಸತ್ಯನಿಷೇಧಿಗಳು ಅವರಿಗಿಂತ (ಆ ಶಿಕ್ಷೆಗೊಳಗಾದವರಿಗಿಂತ) ಉತ್ತಮರೇ? ಅಥವಾ ದಿವ್ಯಗ್ರಂಥಗಳಲ್ಲಿ ನಿಮಗಾಗಿ ಏನಾದರೂ ಶಿಕ್ಷೆಯಿಂದ ವಿನಾಯಿತಿ ಲಿಖಿತವಾಗಿ ದೆಯೇ?

:44

ಅಥವಾ `ನಾವು ಸಹಾಯ ಪ್ರಾಪ್ತರಾದ ಸಂಘ’ ಎಂದವರು ಹೇಳಿಕೊಳ್ಳುತ್ತಿದ್ದಾರೆಯೆ?

:45

ಆದರೆ ಸದ್ಯದಲ್ಲೇ ಈ ಸಂಘವು ಸೋತು ಹೋಗುವುದು ಮತ್ತು ಅವರು ಬೆನ್ನು ತಿರುಗಿಸಿ ಓಡಿ ಹೋಗುವರು.

:46

ಮಾತ್ರವಲ್ಲ, ಅವರಿಗೆ ಶಿಕ್ಷೆಯ ವಾಗ್ದಾನ ಸಮಯವು ಅಂತಿಮ ದಿನವಾಗಿರುತ್ತದೆ. ಆ ದಿನದ ಶಿಕ್ಷೆಯು ಅತ್ಯಂತ ಘೋರವೂ ಅತ್ಯಂತ ಕಹಿಯೂ ಆಗಿರುವುದು.

:47

ನಿಜವಾಗಿಯೂ ಈ ಅಪರಾಧಿಗಳು ವಿನಾಶ ಹಾಗೂ ಘೋರ ಅಗ್ನಿಯಲ್ಲಿರುವರು.

:48

ಅವರು ಅಧೋಮುಖಿಗಳಾಗಿ ನರಕಾಗ್ನಿಯಲ್ಲಿ ಎಳೆಯಲ್ಪಡುವ ದಿನ, ಅವರೊಡನೆ - ಈಗ ನರಕ ಸ್ಪರ್ಶವನ್ನು ಸವಿಯಿರಿ ಎನ್ನಲಾಗುವುದು.

:49

ನಾವು ಪ್ರತಿಯೊಂದು ವಸ್ತುವನ್ನು ಒಂದು ನಿರ್ಣಯ ಪ್ರಕಾರ ಸೃಷ್ಟಿಸಿರುವೆವು .

:50

ನಮ್ಮ ಆಜ್ಞೆಯು ಕೇವಲ ಒಂದೇ ಒಂದು ಆಜ್ಞೆಯಾಗಿರುತ್ತದೆ. ಕಣ್ಣಿನ ರೆಪ್ಪೆ ಬಡಿಯುವಷ್ಟು (ವೇಗದಲ್ಲಿ ಉದ್ದೇಶಿತ ಕಾರ್ಯ ಜರುಗುವುದು).

:51

(ಸತ್ಯನಿಷೇಧಿಗಳೇ!) ನಿಮ್ಮಂತಹ ಅನೇಕ ಪಂಗಡಗಳನ್ನು ನಾವು ನಾಶಗೊಳಿಸಿರುತ್ತೇವೆ. ಹೀಗಿರುತ್ತ, ಚಿಂತಿಸಲು ಸಿದ್ಧರುಳ್ಳ ಯಾರಾದರೂ ಇದ್ದಾರೆಯೇ?

:52

ಅವರು ಮಾಡಿರುವುದೆಲ್ಲವೂ ದಾಖಲೆಗಳಲ್ಲಿ ಲಿಖಿತವಿದೆ.

:53

ಪ್ರತಿಯೊಂದು ಚಿಕ್ಕ ಮತ್ತು ದೊಡ್ಡ ವಿಷಯವನ್ನೂ ಬರೆದಿಡಲಾಗಿದೆ.

:54

ಖಂಡಿತವಾಗಿಯೂ ಭಕ್ತರು ಸ್ವರ್ಗೋದ್ಯಾನಗಳಲ್ಲಿ ಮತ್ತು ಕಾಲುವೆಗಳಲ್ಲಿ ಇರುವರು.

:55

ನೈಜತೆಯ ಸೋಪಾನದಲ್ಲಿ ಪರಮ ಶಕ್ತ ಸಾಮ್ರಾಟನ ಸನ್ನಿಧಿಯಲ್ಲಿ.