ಆಲ್ ಇಸ್ಲಾಂ ಲೈಬ್ರರಿ

50 - The Letter "Qaf" - Qāf

:1

ಕ್ವಾಫ್, ಘನವೆತ್ತ ಕುರ್‍ಆನಿನಾಣೆ

:2

ಆದರೆ ಅವರಿಂದಲೇ ಇರುವ ಓರ್ವ ಮುನ್ನೆಚ್ಚರಿಕೆ ನೀಡುವವನು ಅವರ ಬಳಿಗೆ ಬಂದುದು ಇವರಿಗೆ ಅದ್ಭುತವೆನಿಸಿತು. ತರುವಾಯ ಸತ್ಯನಿಷೇಧಿಗಳು ಹೇಳಿದರು; `ಇದು ಸೋಜಿಗದ ವಿಷಯ’.

:3

ನಾವು ಸತ್ತು ಮಣ್ಣಾಗಿ ಹೋದ ಬಳಿಕ (ಒಂದು ಪುನರ್ಜನ್ಮವೇ?) ಅದು ರೂಢಿಗೆ ವಿದೂರವಾದ ವಾಪಾಸಾತಿಯೇ ಸರಿ.

:4

ಭೂಮಿಯು ಅವರ ಶರೀರದಿಂದ ಕುಂದಿಸಿ ಬಿಡುವುದನ್ನು ಖಂಡಿತ ನಾವು ಬಲ್ಲೆವು. ನಮ್ಮ ಬಳಿಯಲ್ಲೊಂದು ಸುರಕ್ಷಿತ ಗ್ರಂಥವಿದೆ.

:5

ಆದರೆ ಸತ್ಯವು ಅವರ ಬಳಿಗೆ ಬಂದು ತಲುಪಿದಾಗ ಅವರು ಅದನ್ನು ಸ್ಪಷ್ಟವಾಗಿ ನಿಷೇಧಿಸಿಬಿಟ್ಟರು. ಆದ್ದರಿಂದಲೇ ಅವರು ಚಂಚಲದಲ್ಲಿದ್ದಾರೆ.

:6

ಅವರು ತಮ್ಮ ಮೇಲಿರುವ ಆಕಾಶದ ಕಡೆಗೆ ನೋಡಿಲ್ಲವೇ? ನಾವು ಅದನ್ನು ಹೇಗೆ ನಿರ್ಮಿಸಿದೆವು ಮತ್ತು ಅಲಂಕರಿದೆವು. ಅದರಲ್ಲಿ ಎಲ್ಲೂ ಬಿರುಕಿಲ್ಲ.

:7

ಭೂಮಿಯನ್ನು ನಾವು ಹರಡಿದೆವು, ಅದರಲ್ಲಿ ಊರಿನಿಂತ ಪರ್ವತಗಳನ್ನು ನಾಟಿದೆವು ಮತ್ತು ಅದರಲ್ಲಿ ಸೊಗಸಾದ ಸಸ್ಯ ಜೋಡಿಗಳನ್ನು ಬೆಳೆಸಿದೆವು.

:8

(ಅಲ್ಲಾಹನ ಬಳಿಗೆ) ವಿಧೇಯತ್ವವಿರುವ ಪ್ರತಿಯೊಬ್ಬ ದಾಸನು ಕಂಡು ತಿಳಿಯಲು ಮತ್ತು ಅವನಿಗೆ ಪಾಠ ಲಭಿಸಲು (ಹೀಗೆ ಮಾಡಿರುವುದು).

:9

ನಾವು ಆಕಾಶದಿಂದ ಅನುಗ್ರಹೀತ ನೀರನ್ನಿಳಿಸಿದೆವು, ತರುವಾಯ ಅದರಿಂದ ತೋಟಗಳನ್ನೂ ಕೊಯ್ದು ತೆಗೆಯುವ ಧಾನ್ಯಗಳನ್ನೂ ನಾವು ಉತ್ಪಾದಿಸಿದೆವು.

:10

ದಟ್ಟ ಗೊಂಚಲುಗಳುಳ್ಳ ಎತ್ತರದ ಖರ್ಜೂರದ ಮರಗಳನ್ನೂ ಸೃಷ್ಟಿಸಿದೆವು.

:11

(ಇದು, ನಮ್ಮ) ದಾಸರಿಗೆ ಉಪಜೀವನವಾಗಿ. ಆ ನೀರಿನ ಮೂಲಕ ನಿರ್ಜೀವ ನಾಡನ್ನು ನಾವು ಸಜೀವಗೊಳಿಸುತ್ತೇವೆ. (ಸಮಾಧಿಯಿಂದ) ಹೊರ ಬರುವುದೂ ಹೀಗೆಯೇ.

:12

ಇವರಿಗಿಂತ ಮುಂಚೆ ನೂಹರ ಜನಾಂಗವೂ ರಸ್ಸ್‍ನವರೂ ಸಮೂದ್ ಗೋತ್ರದವರೂ ಸತ್ಯವನ್ನು ನಿಷೇಧಿಸಿದ್ದರು.

:13

:14

ಆದ್ ಸಮುದಾಯವೂ ಫಿರ್‍ಔನನೂ `ಲೂಥ’ ರ ಸಹೋದರರೂ, ಐಕದವರೂ, ತುಬ್ಬಅï ಜನಾಂಗದವರೂ ಕೂಡಾ. ಅವರೆಲ್ಲರೂ ದೇವ ದೂತರನ್ನು ಸುಳ್ಳಾಗಿದರು. ಕೊನೆಗೆ ನನ್ನ ಎಚ್ಚರಿಕೆಯು ಅವರಿಗೆ ನಿಜವಾಗಿ ಪರಿಣಮಿಸಿತು.

:15

ಪ್ರಥಮ ಬಾರಿಯ ಸೃಷ್ಟಿಯಿಂದ ನಾವೇನು ಬಳಲಿದ್ದೇವೆಯೇ? (ಇಲ್ಲ) ಆದರೂ ಅವರು ಹೊಸ ಸೃಷ್ಟಿಯ ಬಗ್ಗೆ ಸಂಶಯಗ್ರಸ್ಥರಾಗಿದ್ದಾರೆ.

:16

ನಿಶ್ಚಯ ನಾವು ಮಾನವನನ್ನು ಸೃಷ್ಟಿಸಿದೆವು. ಅವನ ಮನಸ್ಸನ್ನು ಚಂಚಲಗೊಳಿಸುತ್ತಿರುವ ದುರ್ಭಾವನೆಗಳನ್ನೂ ನಾವು ಬಲ್ಲೆವು. ನಾವು ಅವನಿಗೆ ಅವನ ಕಂಠನಾಡಿಗಿಂತಲೂ ಹೆಚ್ಚು ಸಮೀಪವಿದ್ದೇವೆ .

:17

ಬಲ ಹಾಗೂ ಎಡಭಾಗಗಳಲ್ಲಿ ಕುಳಿತು ಸ್ವೀಕರಿಸುವ (ದಾಖಲಿಸುವ) ಇಬ್ಬರು (ದೇವಚರರು) ಸ್ವೀಕರಿಸುವ ಸಂದರ್ಭ.

:18

:19

ನಿರೀಕ್ಷಕ, ಉಪಸ್ಥಿತರ (ರಖೀಬ್ - ಅತೀದ್ ಎಂಬ ದೇವಚರರ) ನಿಗಾಕ್ಕೊಳಪಡದೆ ಮನುಷ್ಯ ಒಂದು ಮಾತನ್ನೂ ಉಚ್ಛರಿಸಲಾರ. ಮರಣದ ಕಠಿಣ ಸಂಕಟವು ಸತ್ಯವನ್ನು ತಂದಿದೆ. ನೀನು ಯಾವುದರಿಂದ ತಪ್ಪಿಸಿಕೊಂಡು ಓಡುತ್ತಿದ್ದೀಯೋ ಅದುವೇ ಇದು. (ಎಂದು ಹೇಳಲಾಗುವುದು)

:20

ಸೂರ್ (ಕಹಳೆಯಿಂದ) ಊದಲ್ಪಟ್ಟಿತು. ಅದುವೇ ತಾಕೀತು ನೀಡಲ್ಪಟ್ಟ ದಿನ.

:21

ಪ್ರತಿಯೊಂದು ಶರೀರವು (ಅಂದು - ಮಹ್‍ಶರ ದಲ್ಲಿ) ಬರುವುದು. ಅಟ್ಟಿಕೊಂಡು ಬರುವ ಒಬ್ಬನೂ ಓರ್ವ ಸಾಕ್ಷಿಯೂ ಅವನ ಜೊತೆಗಿರುವರು.

:22

ನೀನು ಇದರ ಬಗ್ಗೆ ಅಲಕ್ಷ್ಯನಾಗಿದ್ದೆ. ಇದೀಗ ನಾವು ನಿನ್ನ ಮುಂದಿದ್ದ ತೆರೆಯನ್ನು ಸರಿಸಿ ಬಿಟ್ಟಿದ್ದೇವೆ. ಆದ್ದರಿಂದ ಇಂದು ನಿನ್ನ ದೃಷ್ಟಿಯು ಬಹಳ ತೀಕ್ಷ್ಣವಿದೆ (ಎಂದು ಸತ್ಯನಿಷೇಧಿಗೆ ಹೇಳಲಾಗುವುದು).

:23

ಇದು ನನ್ನ ಬಳಿ ಸಿದ್ಧಗೊಂಡ ದಾಖಲೆ ಎಂದು ಅವನ ಜೊತೆಗಾರ (ಮಲಕ್) ಹೇಳುವನು.

:24

:25

ಪ್ರತಿಸ್ಪರ್ಧಿ, ಒಳಿತಿಗೆ ವಿಘ್ನಕಾರಿ, ದುಷ್ಕರ್ಮಿ ಹಾಗೂ ಸಂಶಯಗ್ರಸ್ತನಾದ ಎಲ್ಲ ಸತ್ಯನಿಷೇಧಿ ಯನ್ನೂ ನರಕಕ್ಕೆ ತಳ್ಳಿ ಬಿಡು, (ಎಂದು ನರಕ ಪಾಲಕ ರಾದ ಮಲಕ್ - ಮಾಲಿಕರಿಗೆ ಆಜ್ಞೆ ಬರುವುದು)

:26

ಅವನು ಅಲ್ಲಾಹನೊಂದಿಗೆ ಇತರರನ್ನು ದೇವ ರಾಗಿ ಮಾಡಿಕೊಂಡಿದ್ದನು. ಆದ್ದರಿಂದ ಅವನನ್ನು ಘೋರ ಶಿಕ್ಷೆಗೆ ಹಾಕಿಬಿಡು.

:27

ಅವನ ಜೊತೆಗಾರನು (ಶೈತಾನ) ಹೇಳುವನು; ನಮ್ಮ ಪ್ರಭೂ, ನಾನು ಇವನನ್ನು ದಾರಿತಪ್ಪಿಸಲಿಲ್ಲ. ಅವನೇ ಅತ್ಯಂತ ಅಸಹಜವಾದ ಪಥಭೃಷ್ಟತೆಯಲ್ಲಿದ್ದನು.

:28

ಅವನು (ಅಲ್ಲಾಹು) ಹೇಳಿದನು; ನೀವು ನನ್ನ ಸಮ್ಮುಖದಲ್ಲಿ ತರ್ಕಿಸಬೇಡಿರಿ. ನಾನು ನಿಮಗೆ (ಶಿಕ್ಷೆಯ ಬಗ್ಗೆ) ಮೊದಲೇ ಎಚ್ಚರಿಸಿದ್ದೆ.

:29

ನನ್ನಲ್ಲಿ ಮಾತು ಬದಲಾಯಿಸಲಾಗುವುದಿಲ್ಲ. ಮತ್ತು ನಾನು ನನ್ನ ದಾಸರ ಮೇಲೆ ಅಕ್ರಮವೆ ಸಗುವವನಲ್ಲ.

:30

ಅಂದು ನಾವು ನರಕದೊಡನೆ - ನೀನು ತುಂಬಿ ಕೊಂಡೆಯಾ? ಎಂದು ಕೇಳುವೆವು, ಆಗ ಅದು, ಇನ್ನಷ್ಟು ಇದೆಯೇ? ಎಂದು ಕೇಳುವುದು.

:31

ಧರ್ಮ ಭಕ್ತರಿಗೆ ಸ್ವರ್ಗವನ್ನು ದೂರವಾಗದ ಸ್ಥಿತಿಯಲ್ಲಿ ಹತ್ತಿರಗೊಳಿಸಲಾಗುವುದು.

:32

ಈ ಕಾಣುತ್ತಿರುವುದು ನಿಮಗೆ ಸುವಾರ್ತೆ ನೀಡಲ್ಪಡುತ್ತಿದ್ದುದೇ ಆಗಿದೆ. ಬಹಳಷ್ಟು ಪಶ್ಚಾ ತ್ತಾಪಿಸಿ ಮರಳುತ್ತಿದ್ದ ಮತ್ತು (ಅಲ್ಲಾಹನ ವಿಧಿ- ಮೇರೆಗಳನ್ನು) ಪಾಲಿಸುತ್ತಿದ್ದ ಪ್ರತಿಯೊಬ್ಬರಿಗೂ.

:33

(ಅಂದರೆ) ಪರಮ ದಯಾಮಯನಾದ ಅಲ್ಲಾಹ ನನ್ನು ಕಣ್ಣಾರೆ ಕಾಣದೆಯೇ ಭಯಪಡುತ್ತಿದ್ದ ಮತ್ತು ವಿನಯಾನ್ವಿತ ಹೃದಯದೊಂದಿಗೆ ಬಂದಿರುವವನಿಗಾಗಿ.

:34

ಶಾಂತಿಯೊಂದಿಗೆ ನೀವು ಇದಕ್ಕೆ (ಸ್ವರ್ಗಕ್ಕೆ) ಪ್ರವೇಶಿಸಿರಿ. ಇದು ಶಾಶ್ವತ ಜೀವನದ ದಿನವಾಗಿರುವುದು.

:35

ಅಲ್ಲಿ ಅವರಿಗಾಗಿ ಅವರು ಬಯಸಿದ್ದೆಲ್ಲವೂ ಲಭಿಸುವುದು ಮತ್ತು (ಅವರಿಗಾಗಿ) ಅದಕ್ಕಿಂತಲೂ ಬಹಳಷ್ಟು ನಮ್ಮಲ್ಲಿ ಕೊಡಲಿಕ್ಕಿದೆ.

:36

ಇವರಿಗಿಂತ ಮುಂಚೆ ಅನೇಕ ಜನಾಂಗಗಳನ್ನು ನಾವು ನಾಶಗೊಳಿಸಿದ್ದೇವೆ. ಅವರು ಇವರಿಗಿಂತ ತುಂಬಾ ಬಲಶಾಲಿಗಳಾಗಿದ್ದರು. ಮತ್ತು ಅವರು ನಾಡುಗಳಲ್ಲಿ ಜಾಲಾಡಿದ್ದರು. ಆದರೆ (ನಮ್ಮ ಶಿಕ್ಷೆ ಬಂದೆರಗಿದಾಗ) ಅವರು ಯಾವುದಾದರೂ ಅಭಯ ಸ್ಥಾನವನ್ನು ಪಡೆದರೆ?

:37

(ಇಲ್ಲ) ಹೃದಯವುಳ್ಳ ಅಥವಾ ಹೃದಯ ಸಾನಿ ಧ್ಯದಿಂದ ಲಕ್ಷ್ಯಕೊಟ್ಟು ಕೇಳುವ ಪ್ರತಿಯೊಬ್ಬನಿಗೆ ಇದರಲ್ಲಿ ಬೋಧಪ್ರದ ಪಾಠವಿದೆ.

:38

ನಾವು ಆಕಾಶಗಳನ್ನೂ, ಭೂಮಿಯನ್ನೂ ಅವುಗಳ ನಡುವೆ ಇರುವುದನ್ನೂ ಆರು ದಿನಗಳಲ್ಲಿ (ಆರು ಹಂತಗಳಲ್ಲಿ) ಸೃಷ್ಟಿಸಿದೆವು. ಆದರೆ ನಮಗೇನೂ ದಣಿವಾಗಲಿಲ್ಲ.

:39

ಆದುದರಿಂದ (ಸಂದೇಶವಾಹಕರೇ,) ಅವರಾಡುವ ಮಾತುಗಳ ಬಗ್ಗೆ ತಾಳ್ಮೆವಹಿಸಿರಿ ಮತ್ತು ಸೂರ್ಯೋದಯಕ್ಕೆ ಮುಂಚೆಯೂ ಸೂರ್ಯಾಸ್ತ ಮಾನಕ್ಕಿಂತ ಮುಂಚೆಯೂ ನಿಮ್ಮ ಪ್ರಭುವಿನ ಸ್ತುತಿ ಮಾಡುತ್ತಾ ಅವನ ಪರಿಶುದ್ಧತೆಯನ್ನು ಕೊಂಡಾಡಿರಿ .

:40

ಪುನಃ ರಾತ್ರಿ ವೇಳೆಯೂ ಸಾಷ್ಟಾಂಗವೆರಗಿದ ಬಳಿಕವೂ ಅವನನ್ನು ಜಪಿಸಿರಿ.

:41

(ಓ ಮನುಷ್ಯಾ) ಕರೆಯುವವನು (ಪ್ರತಿಯೊಬ್ಬನ) ಸಮೀಪದಿಂದಲೇ ಕರೆಯುವ ದಿನವನ್ನು ಗಮನವಿಟ್ಟಿರು.

:42

ಅಂದರೆ, ಆ ಘೋರ ಶಬ್ಧವನ್ನು ಅವರು ನಿಜವಾಗಿಯೂ ಕೇಳಿಸಿಕೊಳ್ಳುವ ದಿನ. ಅದು (ಸಮಾಧಿಗಳಿಂದ) ಹೊರಬರುವ ದಿನವಾಗಿದೆ.

:43

ನಾವೇ ಜೀವದಾನ ಮಾಡುತ್ತೇವೆ ಮತ್ತು ನಾವೇ ಮರಣ ಕೊಡುತ್ತೇವೆ. ನಮ್ಮ ಕಡೆಗೇ ಮರಳ ಬೇಕಾಗಿದೆ.

:44

ಅಂದರೆ, ಭೂಮಿಯು ಅವರೊಂದಿಗೆ ಬಿರಿದು ಅವರು ಅತಿ ಬೇಗನೆ ಹೊರಡುವ ದಿನ. ಅದು ನಮಗೆ ಅತಿ ಸುಲಭದ ಒಟ್ಟುಗೂಡಿಸುವಿಕೆಯಾಗಿದೆ.

:45

(ಸಂದೇಶವಾಹಕರೇ,) ಅವರು ಹೇಳುವುದರ ಕುರಿತು ನಾವು ಚೆನ್ನಾಗಿ ಬಲ್ಲೆವು. ತಮಗೆ ಅವರ ನ್ನು ಬಲಾತ್ಕರಿಸುವ ಅಧಿಕಾರವಿಲ್ಲ. ಆದುದರಿಂದ ನನ್ನ ಎಚ್ಚರಿಕೆಯ ಭಯವಿರುವವರಿಗೆ ಈ ಖುರ್‍ಆನಿನ ಮೂಲಕ ನೀವು ಉಪದೇಶ ನೀಡಿರಿ.