ಆಲ್ ಇಸ್ಲಾಂ ಲೈಬ್ರರಿ

56 - The Inevitable - Al-Wāqi`ah

:1

ಆ ಘಟನೆ (ಅಂತ್ಯ ದಿನ) ಸಂಭವಿಸಿದಾಗ.

:2

ಅದರ ಸಂಭಾವ್ಯತೆಯನ್ನು ಸುಳ್ಳಾಗಿಸುವ ಯಾವನೂ ಇರಲಾರನು.

:3

ಪತನ, ಉಚ್ಛ್ರಾಯದ ಘಟನೆ .

:4

ಅಂದರೆ ಭೂಮಿ ಬಲವಾಗಿ ನಡುಗಿಸಲ್ಪಟ್ಟಾಗ.

:5

ಪರ್ವತಗಳು ನುಚ್ಚುನೂರು ಮಾಡಲ್ಪಟ್ಟಾಗ.

:6

ಹಾಗೆ ಅವು ಚದುರಿ ಹರಡಿದ ಧೂಳೀಪಟ ಗಳಾಗುವುವು.

:7

ಆಗ ನೀವು ಮೂರು ಗುಂಪುಗಳಾಗಿ ವಿಂಗಡಿಸಲ್ಪಡುವಿರಿ.

:8

ಆಗ ಒಂದು ವಿಭಾಗ ಬಲ ವಿಭಾಗದವರು! ಬಲ ವಿಭಾಗದವರದ್ದು ಏನವಸ್ಥೆ !

:9

ಎಡ ವಿಭಾಗದವರು! ಎಡ ವಿಭಾಗದವರ ಪರಿಸ್ಥಿತಿಯೇನು?

:10

(ಸತ್ಯವಿಶ್ವಾಸ ಹಾಗೂ ಸತ್ಕರ್ಮದಲ್ಲಿ) ಮುನ್ನಡೆ ಸಾಧಿಸಿದವರು (ಪರಲೋಕದಲ್ಲೂ) ಮುನ್ನಡೆದವರು.

:11

ಅವರು ಅಲ್ಲಾಹನ ಸಾಮೀಪ್ಯ ಪಡೆದವರಾಗಿರುವರು.

:12

ಸಂಪತ್ಸಮೃದ್ಧ ಸ್ವರ್ಗೋದ್ಯಾನಗಳಲ್ಲಿ (ಅವರು ವಾಸಿಸುವರು.)

:13

ಪೂರ್ವಿಕರಲ್ಲಿ ಒಂದು ಕೂಟ.

:14

ಮುಂದಿನವರಲ್ಲಿ ಸ್ವಲ್ಪ ಜನರು.

:15

ರತ್ನಗಳ ದಪ್ಪ ನಾರುಗಳಿಂದ ಹೊಸೆಯಲಾದ ಮಂಚಗಳಲ್ಲಿರುವರು.

:16

ಅವರದರಲ್ಲಿ ಎದುರುಬದುರಾಗಿ ಸುಖಾಸೀನರಾಗಿರುವರು.

:17

ಚಿರ ಬಾಲಕರು (ಸೇವೆಗಾಗಿ) ಅವರ ನಡುವೆ ಸುತ್ತುತ್ತಿರುವರು.

:18

ಉದಕದಿಂದ ಸುರೆ ತುಂಬಿಸಿಕೊಂಡ ಪಾತ್ರೆಗಳನ್ನು, ಹೂಜಿಗಳನ್ನು ಮತ್ತು ಪಾನ ಲೋಟಗಳನ್ನು ಹಿಡಿದುಕೊಂಡು (ಓಡಾಡುತ್ತಿರುವರು.)

:19

ಅದನ್ನು ಕುಡಿದಾಗ ಅವರ ತಲೆ ತಿರುಗಲಾರದು ಮತ್ತು ಅವರಿಗೆ ಅಮಲೇರಲಾರದು.

:20

ಅವರು ಇಷ್ಟಪಟ್ಟು ಆಯ್ಕೆ ಮಾಡಿಕೊಳ್ಳುವಂತಹ ತರತರದ ಹಣ್ಣುಹಂಪಲುಗಳನ್ನು (ಆ ಬಾಲ ಕರು) ತಂದಿರಿಸುವರು.

:21

ಅವರು ಆಶೆಪಡುವ ಪಕ್ಷಿಗಳ ಮಾಂಸದೊಂದಿಗೆ (ಆ ಬಾಲಕರು ಓಡಾಡುವರು)

:22

ಅವರಿಗಾಗಿ ಸುರಸುಂದರ ಬೊಗಸೆ ಕಂಗಳ ಅಪ್ಸರೆಯರಿರುವರು.

:23

ಅವರು ಚಿಪ್ಪಿಯೊಳಗೆ ಬಚ್ಚಿಡಲಾದ ಮುತ್ತುಗಳಂತಿರುವರು.

:24

ಇವೆಲ್ಲ ಅವರು ಭೂಲೋಕದಲ್ಲಿ ಮಾಡುತ್ತಿದ್ದ ಸತ್ಕರ್ಮಗಳ ಪ್ರತಿಫಲಗಳು.

:25

ಅಲ್ಲಿ ಅವರು ಯಾವುದೇ ಅಸಭ್ಯ ಅಥವಾ ಪಾಪಕರ ಮಾತನ್ನು ಕೇಳಲಾರರು.

:26

ಸಲಾಂ-ಸಲಾಂ ಎಂಬ ಮಾತಿನ ಹೊರತು.

:27

ಇನ್ನು ಬಲಗಡೆಯವರು, ಬಲಗಡೆಯವರದ್ದು ಏನವಸ್ಥೆ!

:28

ಅವರು ಮುಳ್ಳಿಲ್ಲದ ಬೊಗರಿ ವೃಕ್ಷಗಳು,

:29

ಅಡಿಯಿಂದ ಮುಡಿ ತನಕ ಹಣ್ಣುಗಳು ದಟ್ಟೈಸಿದ ಬಾಳೆ ಗಿಡಗಳು,

:30

ಬಹು ದೂರ ಹಬ್ಬಿರುವ ನೆರಳು,

:31

ಸದಾ ಹರಿಯುತ್ತಲೇ ಇರುವ ಜಲ,

:32

:33

ಮತ್ತು ಎಂದೂ ಮುಗಿಯದ ಹಾಗೂ ಅಡೆತಡೆಯಿಲ್ಲದೆ ಧಾರಾಳವಾಗಿ ಸಿಗುತ್ತಲಿರುವ ಹಣ್ಣು ಹಂಪಲುಗಳು

:34

ಹಾಗೂ ಎತ್ತರದ ಮೆತ್ತೆಗಳಲ್ಲಿ ಸುಖಾನು ಭವದಲ್ಲಿರುವರು.

:35

ನಾವು ಆ ತರುಣಿಯರನ್ನು ವಿಶಿಷ್ಟ ರೀತಿಯಲ್ಲಿ ಉತ್ಪಾದಿಸಿರುವೆವು.

:36

ನಾವು ಅವರನ್ನು ಚಿರ ಕನ್ನಿಕೆಯರನ್ನಾಗಿ ಮಾಡಿರುವೆವು.

:37

ಅವರು ಪ್ರಿಯತಮೆಯರು ಮತ್ತು ಸಮ ಪ್ರಾಯದವರು.

:38

ಇವೆಲ್ಲ ಬಲಗಡೆಯವರಿಗಾಗಿ ಇರುವುದಾಗಿದೆ.

:39

ಅವರು ಪೂರ್ವಿಕರ ಪೈಕಿ ಒಂದು ವಿಭಾಗವೂ

:40

ಮುಂದಿನವರ ಪೈಕಿ ಒಂದು ವಿಭಾಗವೂ ಆಗಿರುವರು.

:41

ಇನ್ನು ಎಡಗಡೆಯವರು. ಎಡಗಡೆಯವರ ಅವಸ್ಥೆಯೇನು!

:42

:43

:44

ಅವರು ಸುಡುಗಾಳಿಯ ಉರಿಯಲ್ಲೂ ಕುದಿಯುತ್ತಿರುವ ನೀರಲ್ಲೂ ತಂಪಾಗಲಿ, ರಮ್ಯತೆ ಯಾಗಲಿ ಇಲ್ಲದ ಕರಿಹೊಗೆಯ ನೆರಳಲ್ಲೂ ನೆಲೆಸುವರು.

:45

ಅವರು ಅದಕ್ಕೆ ಮುನ್ನ (ಇಹಲೋಕದಲ್ಲಿ) ಸುಖಲೋಲುಪರಾಗಿದ್ದರು.

:46

ಮತ್ತು ಗಂಭೀರ ಪಾಪದಲ್ಲಿ ನೆಲೆಗೊಂಡಿದ್ದರು.

:47

:48

“ನಾವು ಸತ್ತು ಮಣ್ಣಾಗಿ ಮೂಳೆಗಳಾದ ನಂತರ ಮರು ಜೀವಗೊಳಿಸಲ್ಪಡುವುದುಂಟೆ? ನಮ್ಮ ಪೂರ್ವಿಕರೂ ಮರಳಿ ಜೀವ ತಾಳಲಿಕ್ಕಿದೆಯೇ?” ಎಂದು ಅವರು ಕುಚೋದ್ಯವಾಡುತ್ತಿದ್ದರು.

:49

:50

(ಸಂದೇಶವಾಹಕರೇ,) ಹೇಳಿರಿ - ನಿಶ್ಚ ಯವಾಗಿಯೂ ಹಿಂದಿನವರೂ ಮುಂದಿನವರೂ ಎಲ್ಲರೂ ಒಂದು ನಿಶ್ಚಿತ ದಿನದ ಕ್ಲಪ್ತ ಸಮಯಕ್ಕೆ ಖಂಡಿತ ಒಟ್ಟುಗೂಡಿಸಲ್ಪಡುವರು.

:51

ಓ ಸುಳ್ಳುಗಾರರಾದ ಪಥಭ್ರಷ್ಟರೇ, ನಂತರ ಖಂಡಿತಾ ನೀವು

:52

`ಝಖ್ಖೂಮ್’ ಎಂಬ ವೃಕ್ಷದ ಆಹಾರವನ್ನು ತಿನ್ನಲಿರುವಿರಿ.

:53

ಅದರಿಂದಲೇ ನೀವು ಹೊಟ್ಟೆ ತುಂಬುವಿರಿ.

:54

ಮತ್ತು ಅದರ ಮೇಲೆ ಕುದಿಯುವ ನೀರನ್ನು ಕುಡಿಯುವಿರಿ.

:55

ಬಾಯಾರಿದ ಒಂಟೆ ಕುಡಿಯುವಂತೆ ನೀವು ಧಾವಂತದಿಂದ ಕುಡಿಯುವಿರಿ.

:56

ಇದುವೇ ಪ್ರತಿಫಲದ ದಿನ ಅವರಿಗೆ ಕಾದಿರಿಸಲಾದ ಆತಿಥ್ಯ.

:57

ನಿಮ್ಮನ್ನು ಸೃಷ್ಟಿಸಿದ್ದು ನಾವು. ಆದರೂ ನೀವು (ಮರುಸೃಷ್ಟಿಯ ನನ್ನ ಸಾಮಥ್ರ್ಯವನ್ನು) ಅಂಗೀಕರಿಸಿಲ್ಲವೇಕೆ?

:58

(ಸ್ತ್ರೀಯರ ಗರ್ಭಾಶಯಕ್ಕೆ) ನೀವು ಸುರಿಸುವ ವೀರ್ಯದ ಕುರಿತು ವಿವೇಚಿಸಿರುವಿರಾ?

:59

ಅದನ್ನು ಸೃಷ್ಟಿ ಮಾಡುವವರು ನೀವೋ ಅಥವಾ ಅದನ್ನು ಸೃಷ್ಟಿ ಮಾಡಿದವರು ನಾವೋ?

:60

ನಿಮ್ಮೊಳಗೆ ಮರಣವನ್ನು ನಿಶ್ಚಯಿಸಿದ್ದು ನಾವೇ ಆಗಿದ್ದೇವೆ. ನಿಮಗೆ ಬದಲು ನಿಮ್ಮಂತಹ ವರನ್ನು ತರುವಲ್ಲಿ ಮತ್ತು ನಿಮಗೆ ತಿಳಿದಿರದ ಯಾವುದಾದರೂ ರೂಪದಲ್ಲಿ ನಿಮ್ಮನ್ನು ಪುನಃ ಸೃಷ್ಟಿಸುವಲ್ಲಿ ನಾವೆಂದೂ ಪರಾಜಿತರಲ್ಲ.

:61

:62

ಮೊದಲ ಉತ್ಪತ್ತಿಯ ಕುರಿತಂತೆ ನೀವು ತಿಳಿದಿರುವಿರಿ. ಮತ್ತೇಕೆ ನೀವು ಚಿಂತಿಸಿ ಪಾಠ ಕಲಿಯುವುದಿಲ್ಲ?

:63

ನೀವು ಬಿತ್ತನೆ ಮಾಡುವ ಕುರಿತು ನೀವೆಂದಾದರೂ ವಿವೇಚಿಸಿ ನೋಡಿರುವಿರಾ?

:64

ಅದನ್ನು ಬೆಳೆಸುವವರು ನೀವೋ ಅಥವಾ ಅದನ್ನು ಬೆಳೆಸುವವರು ನಾವೋ?

:65

:66

:67

ನಾವಿಚ್ಛಿಸಿದರೆ ಅದನ್ನು (ಕೃಷಿಗಳನ್ನು) ಹೊಟ್ಟನ್ನಾಗಿ ಮಾಡಿಬಿಡಬಲ್ಲೆವು. ಆಗ ನೀವು ಸಖೇದಾಶ್ಚರ್ಯದೊಂದಿಗೆ; ``ನಾವು ನಷ್ಟ ಹೊಂದಿ ದೆವು, ಮಾತ್ರವಲ್ಲ, ನಮಗೆ ಜೀವನಾಧಾರವೇ ತಡೆಯಲ್ಪಟ್ಟಿತು’’ ಎನ್ನುವಿರಿ.

:68

ನೀವು ಕುಡಿಯುವ ನೀರಿನ ಬಗ್ಗೆ ಯೋಚಿಸಿದ್ದೀರಾ?

:69

ಅದನ್ನು ಮೋಡಗಳಿಂದ ಸುರಿಸಿದ್ದು ನೀವೋ ಅಥವಾ ಅದನ್ನು ಸುರಿಸಿದ್ದು ನಾವೋ?

:70

ನಾವಿಚ್ಛಿಸಿದರೆ ಅದನ್ನು ಕಡು ಉಪ್ಪನ್ನಾಗಿ ಮಾಡಿ ಬಿಡಬಲ್ಲೆವು. ಹೀಗಿರುತ್ತ ನೀವೇಕೆ ಕೃತಜ್ಞರಾಗುವುದಿಲ್ಲ ?

:71

ನೀವು ಉರಿಸುತ್ತಿರುವ ಬೆಂಕಿಯ ಕುರಿತು ನೀವು ಚಿಂತನೆ ನಡೆಸಿದ್ದುಂಟೇ?

:72

ಅದರ ಮರವನ್ನು ಉಂಟುಮಾಡಿದ್ದು ನೀವೋ ಅಥವಾ ಅದನ್ನುಂಟುಮಾಡಿದ್ದು ನಾವೋ?

:73

ಅದನ್ನು ನಾವು ಒಂದು ಚಿಂತನಾ ವಿಷಯವಾಗಿಯೂ ಮರುಭೂಮಿಯ ಸಂಚಾರಿಗಳಿಗೆ ಒಂದು ಅನುಕೂಲವಾಗಿಯೂ ಮಾಡಿರುತ್ತೇವೆ.

:74

ಆದುದರಿಂದ (ಸಂದೇಶವಾಹಕರೇ), ಅತ್ಯಂತ ಮಹಾನನಾದ ತಮ್ಮ ಪ್ರಭುವಿನ ನಾಮವನ್ನು ಪ್ರಕೀರ್ತಿಸಿರಿ.

:75

ಖಂಡಿತ ನಾನು ನಕ್ಷತ್ರಗಳ ಅಸ್ತಮಯ ಸ್ಥಾನಗಳ ಆಣೆಯಿಡುತ್ತೇನೆ.

:76

ನೀವು ಅರಿಯುವುದಾದರೆ, ಅದೊಂದು ಉನ್ನತ ಮಟ್ಟದ ಆಣೆಯಾಗಿದೆ.

:77

ಇದು ಆದರಣೀಯವಾದ ಖುರ್‍ಆನ್ ಆಗಿದೆ.

:78

ಭದ್ರವಾಗಿ ಕಾಯ್ದಿಡಲಾದ ಒಂದು ಗ್ರಂಥದಲ್ಲಿ ಮುದ್ರಿತವಿದೆ.

:79

ಪರಿಶುದ್ಧರಲ್ಲದೆ ಬೇರಾರೂ ಇದನ್ನು ಸ್ಪರ್ಶಿಸಲಾರರು .

:80

ಇದು ಲೋಕಪಾಲಕನಿಂದ ಅವತೀರ್ಣಗೊಂಡಿದೆ.

:81

ಹೀಗಿರುತ್ತ ನೀವು ಈ ವೃತ್ತಾಂತದ ಕುರಿತು ನಿರ್ಲಕ್ಷ್ಯ ತೋರುವಿರಾ?

:82

ಮತ್ತು ಸತ್ಯನಿಷೇಧವನ್ನೇ ನಿಮ್ಮ ಉಪಜೀವನ ಮಾರ್ಗವನ್ನಾಗಿ ಮಾಡಿಕೊಂಡಿರುವಿರಾ?

:83

ಹಾಗಾದರೆ, ಅದು (ಆತ್ಮ) ಗಂಟಲಿಗೆ ತಲುಪಿದಾಗ (ಅದನ್ನು ಯಾಕೆ ನಿಮಗೆ ತಡೆಯಲಾಗುವುದಿಲ್ಲ?)

:84

ನೀವಾದರೋ ಆ ಸಂದರ್ಭದಲ್ಲಿ (ಮರಣವನ್ನು) ಕಣ್ಣಾರೆ ನೋಡಿ ನಿಂತಿರುತ್ತೀರಿ.

:85

ನಾವು ಅವನೊಂದಿಗೆ (ಆ ಮರಣಾಸನ್ನನೊಂದಿಗೆ) ನಿಮಗಿಂತ ನಿಕಟವಾಗಿರುವೆವು. ಆದರೆ ಅದನ್ನು ನೀವು ಕಾಣುತ್ತಲಿಲ್ಲ.

:86

:87

ನೀವು ಪರಾಧೀನರಲ್ಲದಿರುತ್ತಿದ್ದರೆ ಮತ್ತು ನೀವು ಸತ್ಯವಾದಿಗಳಾಗಿರುತ್ತಿದ್ದರೆ (ಪ್ರಾಣವನ್ನು ರಕ್ಷಿಸಿಕೊಳ್ಳಲು ಯಾಕಾಗುತ್ತಿಲ್ಲ?)

:88

ಇನ್ನು ಆ ಮರಣ ಹೊಂದುವವನು ಅಲ್ಲಾಹನ ನಿಕಟವರ್ತಿಗಳಲ್ಲಿ ಒಬ್ಬನಾಗಿದ್ದರೆ

:89

ಅವನಿಗೆ ಸುಖ ಸಂತೋಷ, ಸುಗಂಧಪೂರಿತ ಜೀವನಾಧಾರ ಮತ್ತು ಅನುಗ್ರಹ ತುಂಬಿದ ಸ್ವರ್ಗೋದ್ಯಾನವಿದೆ.

:90

ಇನ್ನು ಅವನು ಬಲಗಡೆಯವನಾಗಿದ್ದರೆ

:91

ನೀನು ಬಲಗಡೆಯವನಾದುದರಿಂದ ನಿನಗೆ ಶಾಂತಿ ಇರಲಿ ಎಂದು ಅವನಲ್ಲಿ ಹೇಳಲಾಗುವುದು.

:92

ಇನ್ನು ಅವನು ಸುಳ್ಳಾಗಿಸುವ ಪಥಭ್ರಷ್ಟ ರಲ್ಲೊಬ್ಬನಾಗಿದ್ದರೆ

:93

ಅವನಿಗೆ ಕುದಿಯುವ ನೀರಿನ ಸತ್ಕಾರವೂ,

:94

ಜ್ವಲಿಸುವ ನರಕ ಪ್ರವೇಶದ ಶಿಕ್ಷೆಯೂ (ಲಭಿಸಲಿದೆ)

:95

ಇದುವೇ ಖಚಿತವಾದ ಸತ್ಯ.

:96

ಆದುದರಿಂದ (ಸಂದೇಶವಾಹಕರೇ), ತಮ್ಮ ಮಹೋನ್ನತ ಪ್ರಭುವಿನ ನಾಮವನ್ನು ಪ್ರಕೀರ್ತಿಸಿರಿ.