ಆಲ್ ಇಸ್ಲಾಂ ಲೈಬ್ರರಿ

44 - The Smoke - Ad-Dukhān

:1

ಹಾ ಮೀಮ್.

:2

ಸುವ್ಯಕ್ತವಾದ ಈ ಗ್ರಂಥದಾಣೆ!

:3

ನಿಶ್ಚಯವಾಗಿಯೂ ನಾವು ಇದನ್ನು ಒಂದು ಅನುಗ್ರಹೀತ ರಾತ್ರಿಯಲ್ಲಿ ಅವತೀರ್ಣಗೊಳಿಸಿದ್ದೇವೆ. ನಾವು ಜನರಿಗೆ ಮುನ್ನೆಚ್ಚರಿಕೆ ನೀಡುವವರೇ ಆಗಿದ್ದೇವೆ.

:4

:5

ಆ ರಾತ್ರಿಯಲ್ಲಿ ನಮ್ಮ ಅಪ್ಪಣೆಯಿಂದ ಸುಶಕ್ತ ವಾದ ಸಕಲ ವಿಷಯಗಳನ್ನು ಬೇರ್ಪಡಿಸಿ ವಿವರಿಸಲಾಗುತ್ತದೆ . ನಾವು ಸಂದೇಶವಾಹಕರನ್ನು ಕಳುಹಿಸುತ್ತಿರುವವರಾಗಿರುವೆವು.

:6

ನಿನ್ನ ಪ್ರಭುವಿನ ಕಾರುಣ್ಯವಾಗಿ. ನಿಶ್ಚಯವಾಗಿಯೂ ಅವನೇ ಸರ್ವವನ್ನೂ ಆಲಿಸುವವನು ಮತ್ತು ಸರ್ವವನ್ನೂ ಅರಿಯುವವನು.

:7

ಆಕಾಶಗಳ ಹಾಗೂ ಭೂಮಿಯ ಮತ್ತು ಅವುಗಳ ನಡುವೆ ಇರುವ ಪ್ರತಿಯೊಂದು ವಸ್ತುವಿನ ಪ್ರಭು(ವಿನ ಕಾರುಣ್ಯವಾಗಿ). ನೀವು ದೃಢನಂಬಿಕೆಯುಳ್ಳವರಾಗಿದ್ದರೆ.

:8

ಅವನ ಹೊರತು ಬೇರೆ ಆರಾಧ್ಯರಿಲ್ಲ. ಅವನು ಜೀವಂತಗೊಳಿಸುತ್ತಾನೆ ಮತ್ತು ಮರಣ ಗೊಳಿಸುತ್ತಾನೆ. ಅವನು ನಿಮ್ಮ ಮತ್ತು ನಿಮಗಿಂತ ಮುಂಚೆ ಗತಿಸಿದ ಪೂರ್ವಜರ ಪ್ರಭು.

:9

ಆದರೆ ಅವರು ಸಂಶಯದಲ್ಲಿ ವಿನೋದವಾಡುತ್ತಿದ್ದಾರೆ.

:10

ಹೀಗಾಗಿ ಆಕಾಶವು ಸ್ಪಷ್ಟವಾದ ಹೊಗೆಯೊಂದಿಗೆ ಬರುವ ದಿನವನ್ನು ನಿರೀಕ್ಷಿಸಿರಿ.

:11

ಅದು ಜನರನ್ನು ಆವರಿಸಿಕೊಳ್ಳುತ್ತದೆ. ಇದು ಒಂದು ಯಾತನಾಮಯ ಶಿಕ್ಷೆಯಾಗಿದೆ.

:12

(ಅವರು ಹೇಳುವರು) “ನಮ್ಮ ಪ್ರಭು! ನಮ್ಮಿಂದ ಈ ಶಿಕ್ಷೆಯನ್ನು ತೊಲಗಿಸು. ನಾವು ಖಂಡಿತ ಸತ್ಯವಿಶ್ವಾಸಿಗಳಾಗುತ್ತೇವೆ”.

:13

ಅವರಿಗೆ ಹೇಗೆ ಬೋಧೋದಯ ಸಂಭವಿಸಿತು? ಅವರ ಬಳಿಗೆ (ಕಾರ್ಯಗಳನ್ನು) ವ್ಯಕ್ತಗೊಳಿ ಸುವ ಒಬ್ಬ ದೂತರು ಬಂದಿದ್ದರು.

:14

ಆದರೂ ಇವರು ಅವರಿಂದ ವಿಮುಖರಾದರು. `ಇವನೊಬ್ಬ ಕಲಿಸಲ್ಪಟ್ಟವನೂ ಹುಚ್ಚನೂ ಆಗಿರುವನು’ ಎಂದರು.

:15

ನಾವು ಶಿಕ್ಷೆಯನ್ನು ಸ್ವಲ್ಪ ಕಾಲ ತೊಲಗಿಸಿ ಬಿಡುತ್ತೇವೆ. ಆದರೆ (ಸತ್ಯನಿಷೇಧಿಗಳೇ!) ನೀವು (ಹಳೆಯ ಅವಸ್ಥೆಗೆ) ಮರಳಿ ಹೋಗುವಿರಿ.

:16

ನಾವು ಭಾರೀ ಹಿಡಿತವನ್ನು ಹಿಡಿಯುವ ದಿನವೇ ನಾವು ನಿಮ್ಮ ಮೇಲೆ ಸೇಡು ತೀರಿಸಲಿದ್ದೇವೆ.

:17

ಇವರಿಗಿಂತ ಮುಂಚೆ ಫಿರ್‍ಔನನ ಜನಾಂಗವನ್ನೂ ನಾವು ಪರೀಕ್ಷಿಸಿದ್ದೆವು. ಅವರ ಬಳಿಗೆ ಓರ್ವ ಸನ್ಮಾನ್ಯ ದೂತರು ಬಂದಿದ್ದರು.

:18

(ದೂತರು ಹೇಳಿದರು) `ಅಲ್ಲಾಹನ ದಾಸರನ್ನು ನನ್ನ ವಶಕ್ಕೆ ಒಪ್ಪಿಸಿ ಬಿಡಿರಿ. ನಾನು ನಿಮ್ಮ ಕಡೆಗಿರುವ ಓರ್ವ ಪ್ರಾಮಾಣಿಕ ದೂತನಾಗಿದ್ದೇನೆ.

:19

ಅಲ್ಲಾಹನ ವಿರುದ್ಧ ನೀವು ದರ್ಪ ತೋರದಿರಿ. ನಾನು ಸುಸ್ಪಷ್ಟ ಪುರಾವೆಯೊಂದಿಗೆ ನಿಮ್ಮನ್ನು ಸಮೀಪಿಸಿದ್ದೇನೆ.

:20

ನೀವು ನನ್ನನ್ನು ಕಲ್ಲೆಸೆಯದಿರಲು ನಾನು ನನ್ನ ಮತ್ತು ನಿಮ್ಮ ಪ್ರಭುವಿನ ಅಭಯ ಪಡೆದಿರುತ್ತೇನೆ.

:21

ನೀವು ನನ್ನಲ್ಲಿ ವಿಶ್ವಾಸ ಹೊಂದದಿದ್ದಲ್ಲಿ ನನ್ನನ್ನು ಬಿಟ್ಟು ನೀವು ದೂರ ಸರಿಯಿರಿ.

:22

ಕೊನೆಗೆ ಅವರು ತಮ್ಮ ಪ್ರಭುವಿನಲ್ಲಿ ಪ್ರಾರ್ಥಿಸಿದರು; `ಇವರೊಂದು ಅಪರಾಧಿ ಜನಾಂಗದ ವರಾಗಿದ್ದಾರೆ’ (ಅವರ ಮೇಲೆ ಆವಶ್ಯ ಕ್ರಮ ಕೈಗೊಳ್ಳು).

:23

(ಆಗ ಅಲ್ಲಾಹು ಆದೇಶಿಸಿದನು) `ಹಾಗಿದ್ದರೆ ನನ್ನ ದಾಸರನ್ನು (ಇಸ್ರಾಈಲ್‍ರನ್ನು) ಕರೆದುಕೊಂಡು ನೀವು ರಾತ್ರಿಯಲ್ಲಿ ಪ್ರಯಾಣ ಬೆಳೆಸಿರಿ. ನಿಮ್ಮನ್ನು (ಶತ್ರುಗಳಿಂದ) ಬೆನ್ನಟ್ಟಲಾಗುವುದು.

:24

ಸಮುದ್ರವನ್ನು ಶಾಂತವಾಗಿ ಇರಲು ಬಿಡಿರಿ. ಅವರು ಮುಳುಗಿ ನಾಶವಾಗುವ ಒಂದು ಸೈನ್ಯವೇ ಆಗಿದ್ದಾರೆ .

:25

:26

ಅದೆಷ್ಟೋ ಉದ್ಯಾನಗಳನ್ನೂ ಚಿಲುಮೆ ಗಳನ್ನೂ ಹೊಲಗಳನ್ನೂ ಭವ್ಯ ನಿವಾಸಗಳನ್ನೂ ಅವರು ಬಿಟ್ಟು ಹೋದರು.

:27

ಅವರು ಆಹ್ಲಾದಪೂರ್ವಕ ಸುಖಿಸುತ್ತಿದ್ದ ಎಷ್ಟೋ ಭೋಗ ಸಾಮಗ್ರಿಗಳು!

:28

(ಅವರ ಅಂತ್ಯ) ಹಾಗೆ ಸಂಭವಿಸಿತು. ನಾವು ಬೇರೊಂದು ಜನತೆಯನ್ನು ಈ ವಸ್ತುಗಳ ವಾರಿಸುದಾರರಾಗಿ ಮಾಡಿದೆವು.

:29

ಆಗ ಆಕಾಶವಾಗಲಿ-ಭೂಮಿಯಾಗಲಿ ಅವರಿಗಾಗಿ ರೋದಿಸಲಿಲ್ಲ. ಒಂದಿಷ್ಟು ಕಾಲಾವಕಾಶವೂ ಅವರಿಗೆ ಲಭಿಸಲಿಲ್ಲ.

:30

:31

ಇಸ್ರಾಈಲ್ ಸಂತತಿಗಳನ್ನು ನಿಂದನೀಯ ಶಿಕ್ಷೆಯಿಂದ ಅಂದರೆ ಫಿರ್‍ಔನ್‍ನಿಂದ ನಾವು ರಕ್ಷಿಸಿದೆವು. ಅವನು ನಿಜಕ್ಕೂ ಅತಿಕ್ರಮಿಗಳಲ್ಲಿ ಒಳಪಟ್ಟ ಅಹಂಕಾರಿಯಾಗಿದ್ದನು.

:32

(ಇಸ್ರಾಈಲ್ ಜನಾಂಗದ ಅವಸ್ಥೆಯನ್ನು) ತಿಳಿದುಕೊಂಡೇ ನಾವು ಅವರನ್ನು ಜಗತ್ತಿನ ಇತರ ಜನತೆಗಿಂತ ಉತ್ಕøಷ್ಟರಾಗಿ ಆಯ್ಕೆ ಮಾಡಿದೆವು.

:33

ಸುಸ್ಪಷ್ಟ ಪರೀಕ್ಷೆಯಿದ್ದ ಕೆಲವು ನಿದರ್ಶನಗಳನ್ನೂ ನಾವು ಅವರಿಗೆ (ತೋರಿಸಿ)ಕೊಟ್ಟೆವು.

:34

:35

ಅವರು ಹೇಳುತ್ತಾರೆ; ‘ನಮ್ಮ ಪ್ರಥಮ ಬಾರಿ ಯ ಮೃತ್ಯುವಿನ ಹೊರತು ಬೇರೇನೂ ಇಲ್ಲ. ನಾವು ಪುನಃ ಎಬ್ಬಿಸಲ್ಪಡುವವರೂ ಅಲ್ಲ’.

:36

ನೀವು ಸತ್ಯವಾದಿಯಾಗಿದ್ದರೆ ನಮ್ಮ ಪೂರ್ವಜರನ್ನು ಎಬ್ಬಿಸಿ ತನ್ನಿರಿ’.

:37

ಇವರೋ ಉತ್ತಮರು? ಅಥವಾ ತುಬ್ಬಅï ಜನಾಂಗ ಮತ್ತು ಅದಕ್ಕಿಂತ ಹಿಂದಿನವರು ಉತ್ತಮರೋ? ಏಕೆಂದರೆ ನಾವು ಅವರನ್ನು ನಾಶಗೊಳಿಸಿದೆವು. ಅವರು ಅಪರಾಧಿಗಳಾಗಿದ್ದರು.

:38

ಆಕಾಶಗಳನ್ನೂ-ಭೂಮಿಯನ್ನೂ ಅವುಗಳ ನಡುವೆ ಇರುವ ವಸ್ತುಗಳನ್ನೂ ನಾವು ವಿನೋದವಾಗಿ ಸೃಷ್ಟಿಸಿದ್ದಲ್ಲ.

:39

ನಾವು ಅವೆರಡನ್ನು ಸತ್ಯಪೂರ್ಣವಾಗಿ ಸೃಷ್ಟಿಸಿದ್ದೇವೆ. ಆದರೆ ಅವರಲ್ಲಿ ಹೆಚ್ಚಿನವರು ಅರಿಯುವುದಿಲ್ಲ.

:40

ಅವರೆಲ್ಲರ ನಿಶ್ಚಿತ ಸಮಯವು ಆ ನಿರ್ಣಾಯಕ ತೀರ್ಪಿನ ದಿನವಾಗಿದೆ.

:41

ಯಾವನೇ ಬಂಧು ತನ್ನ ಇನ್ನೊಬ್ಬ ಬಂಧುವಿಗೆ ಸ್ವಲ್ಪವೂ ಪ್ರಯೋಜನ ಕೊಡದ ಮತ್ತು ಅವರಿಗೆ ಯಾವ ಸಹಾಯವೂ ಲಭಿಸದ ದಿನ.

:42

ಅಲ್ಲಾಹನು ಕೃಪೆ ತೋರಿದವರ ಹೊರತು. ಅವನು ಮಹಾ ಪ್ರತಾಪಿಯೂ, ದಯಾನಿಧಿಯೂ ಆಗಿರುತ್ತಾನೆ.

:43

:44

ಖಂಡಿತ ಝಖ್ಖೂಮ್ ವೃಕ್ಷವು (ನರಕದಲ್ಲಿ) ಪಾಪಿಗಳ ಆಹಾರ.

:45

ಅದು ಉರಿಲೋಹದಂತೆ. ಅದು ಅವರ ಹೊಟ್ಟೆಯೊಳಗೆ ಕುದಿಯುತ್ತಿರುವುದು ಬಿಸಿ ನೀರು ಕುದಿಯುತ್ತಿರುವಂತೆ.

:46

:47

ಅವನನ್ನು ಹಿಡಿಯಿರಿ, ಆಮೇಲೆ ನರಕದ ಮಧ್ಯಕ್ಕೆ ಎಳೆದೊಯ್ಯಿರಿ.

:48

ಅನಂತರ ಕುದಿಯುವ ಬಿಸಿ ನೀರಿನ ಶಿಕ್ಷೆಯನ್ನು ಅವನ ತಲೆಯ ಮೇಲೆ ಸುರಿದು ಬಿಡಿರಿ.

:49

“ನೀನು ಇದರ ರುಚಿಯನ್ನು ಸವಿದುಕೋ, ಖಂಡಿತಾ ನೀನೊಬ್ಬ ಪ್ರತಾಪಿಯೂ, ಮರ್ಯಾದಸ್ಥನೂ ಆಗಿದ್ದೀಯಲ್ಲ?”

:50

ನೀವೆಲ್ಲ ಸಂದೇಹಪಡುತ್ತಿದ್ದ ಶಿಕ್ಷೆ ಖಂಡಿತಾ ಇದುವೇ ಆಗಿದೆ.

:51

ನಿಜವಾಗಿಯೂ ಭಕ್ತರು ಸುರಕ್ಷಿತ ತಾಣದಲ್ಲಿರುವರು.

:52

ಕೆಲವು ಉದ್ಯಾನಗಳಲ್ಲೂ ಚಿಲುಮೆಗಳಲ್ಲೂ.

:53

ತೆಳು ರೇಶ್ಮೆ ಹಾಗೂ ದೊರಗಿನ ರೇಶ್ಮೆ ಬಟ್ಟೆಗಳನ್ನು ಧರಿಸಿಕೊಂಡು ಎದುರು ಬದುರಾಗಿ (ಕುಳಿತಿರುವರು).

:54

ಅವರ ಅವಸ್ಥೆ ಹಾಗಿರುವುದು. ಬಿಳಿ ಬಣ್ಣದ, ವಿಶಾಲ ನಯನಗಳುಳ್ಳ ತರುಣಿಯರನ್ನು ನಾವು ಅವರಿಗೆ ವಿವಾಹ ಮಾಡಿಸುವೆವು.

:55

ಅಲ್ಲಿ ಅವರು ನಿಶ್ಚಿಂತರಾಗಿ ಎಲ್ಲ ತರದ ರುಚಿ ಕರವಾದ ಫಲ ವಸ್ತುಗಳನ್ನು ಅವಶ್ಯಪಡುವರು.

:56

(ಭೂಲೋಕದಲ್ಲಿ) ಮೊದಲು ಬಂದ ಮರಣದ ಹೊರತು ಅಲ್ಲಿ ಮರಣದ ರುಚಿಯನ್ನು ಅವರು ಸವಿಯಲಾರರು. ಅಲ್ಲಾಹನು ಅವರನ್ನು ನರಕ ಶಿಕ್ಷೆಯಿಂದ ರಕ್ಷಿಸುವನು.

:57

ತಮ್ಮ ಪ್ರಭುವಿನ ಮಹಾ ಔದಾರ್ಯದಿಂದ (ಇವೆಲ್ಲವೂ ಲಭಿಸುವುದು). ಅದುವೇ ಅತೀ ದೊಡ್ಡ ಯಶಸ್ಸು.

:58

(ದೂತರೇ,) ಅವರು ಯೋಚಿಸಿ ಗ್ರಹಿಸಲೆಂದು ನಾವು ಇದನ್ನು (ಖುರ್‍ಆನನ್ನು) ತಮ್ಮ ಭಾಷೆಯಲ್ಲಿ ಸರಳಗೊಳಿಸಿದ್ದೇವೆ.

:59

ಇನ್ನು ತಾವೂ ಕಾಯಿರಿ, ಅವರೂ ಕಾಯುತ್ತಿದ್ದಾರೆ.