ಆಲ್ ಇಸ್ಲಾಂ ಲೈಬ್ರರಿ

21 - The Prophets - Al-'Anbyā

:1

ಜನರಿಗೆ ತಮ್ಮ ವಿಚಾರಣೆ ಸಮೀಪಿಸಿದೆ. ಆದರೆ ಅವರು ಅಶ್ರದ್ಧೆಯಿಂದ ವಿಮುಖರಾಗುತ್ತಿದ್ದಾರೆ.

:2

ಅವರು, ತಮ್ಮ ಪ್ರಭುವಿನ ಕಡೆಯಿಂದ ತಮಗೆ ಬರುವ ಯಾವುದೇ ಹೊಸ ಉಪದೇಶವನ್ನು ಕೇವಲ ಪರಿಹಾಸ್ಯ ಭಾವದಿಂದ ಕೇಳುತ್ತಾರೆ.

:3

ಅವರ ಹೃದಯಗಳು ಪ್ರಜ್ಞಾಹೀನವಾಗಿವೆ. “ಇವನು ನಿಮ್ಮಂತೆಯೇ ಇರುವ ಓರ್ವ ಮನುಷ್ಯನಲ್ಲವೇ? ಹೀಗಿರುವಾಗ ನೀವು ಕಣ್ಣಾರೆ ಕಾಣುತ್ತ ಜಾದುವಿನ ಕಡೆಗೆ ಹೋಗುವಿರಾ?” ಎಂದು ಅಕ್ರಮಿಗಳು ಪರಸ್ಪರ ಪಿಸುಗುಟ್ಟಿದರು.

:4

ಪ್ರವಾದಿಯು ಹೇಳಿದರು; “ನನ್ನ ಪ್ರಭು ಆಕಾಶ ಮತ್ತು ಭೂಮಿಯಲ್ಲಿರುವ ಪ್ರತಿಯೊಂದು ಮಾತನ್ನೂ ಅರಿಯುತ್ತಾನೆ. ಅವನು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ.”

:5

ಆದರೆ ಅಕ್ರಮಿಗಳು; “ಇದು ಕೇವಲ ಕೆಟ್ಟ ಕನ ಸುಗಳು. ಅಲ್ಲ, ಇದನ್ನು ಇವನೇ ಹೆಣೆದಿರುವನು. ಮಾತ್ರವಲ್ಲ, ಇವನೊಬ್ಬ ಕವಿ. ಅನ್ಯಥಾ ಹಿಂದಿನವರು ನಿದರ್ಶನಗಳೊಂದಿಗೆ ಕಳುಹಿಸಲ್ಪಟ್ಟಿರು ವಂತೆ ಇವನೂ ನಮಗೆ ಒಂದು ನಿದರ್ಶನ ತರಲಿ” ಎಂದು ಹೇಳಿದರು .

:6

ಆದರೆ ಇವರಿಗಿಂತ ಮುಂಚೆ ನಾವು ನಾಶಗೊಳಿಸಿದ ಯಾವ ನಾಡೂ ನಮ್ಮ ದೃಷ್ಟಾಂತವನ್ನು ನೋಡಿ ವಿಶ್ವಾಸವಿರಿಸಲಿಲ್ಲ. ಹೀಗಿರುವಾಗ ಇವರು ವಿಶ್ವಾಸವಿರಿಸುವರೇ?

:7

(ಪೈಗಂಬರರೇ,) ನಿಮಗಿಂತ ಮುಂಚೆ ಪುರುಷರನ್ನು ಮಾತ್ರವೇ ನಾವು ಪ್ರವಾದಿಗಳಾಗಿ ಕಳುಹಿಸಿದ್ದು. ಅವರಿಗೆ ನಾವು ಸಂದೇಶ ಕೊಡುತ್ತಿದ್ದೆವು. ಬೇಕಾದರೆ ನಿಮಗೆ ಗೊತ್ತಿಲ್ಲದಿದ್ದರೆ ಗ್ರಂಥದವರಲ್ಲಿ ಕೇಳಿರಿ.

:8

ಅವರನ್ನು (ಸಂದೇಶವಾಹಕರನ್ನು) ನಾವು ಆಹಾರ ಸೇವಿಸದಂತಹ ಶರೀರವನ್ನಾಗಿ ಮಾಡಿರಲಿಲ್ಲ. ಅವರು ಸದಾಕಾಲ ಬದುಕುವವರೂ ಆಗಿರಲಿಲ್ಲ.

:9

ನಂತರ ಅವರಿಗೆ ಮಾಡಿದ ನಮ್ಮ ವಾಗ್ದಾನವನ್ನು ನಾವು ಪೂರೈಸಿದ್ದೇವೆ. ಅವರನ್ನೂ ನಾವಿಚ್ಛಿಸಿದ ಇತರರನ್ನೂ ರಕ್ಷಿಸಿದ್ದೇವೆ. ಮೀರಿ ನಡೆದವರನ್ನು ನಾಶ ಮಾಡಿದ್ದೇವೆ .

:10

ಜನರೇ, ನಾವು ನಿಮ್ಮದೇ ಉದ್ಭೋದೆಯುಳ್ಳ ಒಂದು ಗ್ರಂಥವನ್ನು ನಿಮ್ಮ ಕಡೆಗೆ ಕಳುಹಿಸಿದ್ದೇವೆ. ನೀವು ಯೋಚಿಸುವುದಿಲ್ಲವೇ?”

:11

ಎಷ್ಟೋ ಅಕ್ರಮಿ ನಾಡುಗಳನ್ನು ನಾವು ಧ್ವಂಸ ಮಾಡಿದ್ದೇವೆ. ಅವರ ಬಳಿಕ ಬೇರೊಂದು ಹೊಸ ಜನಾಂಗವನ್ನು ನಿರ್ಮಿಸಿದ್ದೇವೆ.

:12

ಅವರಿಗೆ ನಮ್ಮ ಶಿಕ್ಷೆಯ ಸ್ಪರ್ಶವಾದಾಗ ಅಲ್ಲಿಂದ ಓಡ ಹತ್ತಿದರು. .

:13

(ಆಗ ಹೇಳಲಾಯಿತು:) “ಓಡಬೇಡಿರಿ, ನೀವು ಸುಖಿಸುತ್ತಿದ್ದ ಭೋಗದ ಕಡೆಗೆ ಮತ್ತು ನಿಮ್ಮ ನಿವಾಸಗಳಿಗೇ ಮರಳಿ ಹೋಗಿರಿ, ನಿಮ್ಮಲ್ಲಿ ಏನಾದರೂ ಪ್ರಶ್ನಿಸಲಾದೀತು”.

:14

ಆಗ ಅವರು, “ಅಯ್ಯೋ, ನಮ್ಮ ನಾಶವೇ! ನಿಜ ಕ್ಕೂ ನಾವು ಅಪರಾಧಿಗಳಾಗಿದ್ದೆವು” ಎಂದರು.

:15

ಹಾಗೆ ನಾವು ಅವರನ್ನು ಕೊಯ್ದು ತೆಗೆದ ಪೈರಾಗಿ, ಕಿಡಿಯಾರಿದ ಕೆಂಡದ ಬೂದಿಯಾಗಿ ಮಾಡು ವವರೆಗೂ ಅವರು ರೋದಿಸುತ್ತಲೇ ಇದ್ದರು .

:16

ಆಕಾಶವನ್ನೂ ಭೂಮಿಯನ್ನೂ ಅವುಗಳ ನಡುವೆ ಇರುವುದನ್ನೂ ಕ್ರೀಡೆಯಾಡಲು ನಾವು ಸೃಷ್ಟಿಸಲಿಲ್ಲ.

:17

ನಾವು ವಿನೋದವನ್ನು ಉಂಟು ಮಾಡ ಬಯಸಿದ್ದರೆ ನಾವದನ್ನು ನಮ್ಮ ಕಡೆಯಿಂದಲೇ ಮಾಡಿಕೊಳ್ಳುತ್ತಿದ್ದೆವು. (ಆದರೆ ಹಾಗೆ) ನಾವು ಮಾಡಲಾರೆವು .

:18

ಆದರೆ ನಾವು ಮಿಥ್ಯದ ಮೇಲೆ ಸತ್ಯದಿಂದ ಹೊಡೆಯುತ್ತೇವೆ. ಅದು ಮಿಥ್ಯದ ಮರ್ಮಕ್ಕೆ ತಾಗುತ್ತದೆ. ಆಗ ಅದು ಅಳಿದು ಹೋಗುತ್ತದೆ . (ಸತ್ಯನಿಷೇಧಿಗಳೇ,) ನೀವು ಅಲ್ಲಾಹನ ಬಗ್ಗೆ ಸೃಷ್ಟಿಸುವ ಮಾತುಗಳಿಂದ ನಿಮಗೆ ವಿನಾಶ ಕಾದಿದೆ.

:19

ಆಕಾಶಗಳಲ್ಲೂ ಭೂಮಿಯಲ್ಲೂ ಇರುವುದೆಲ್ಲವೂ ಅಲ್ಲಾಹನದ್ದು. ಅವನ ಬಳಿಯಲ್ಲಿರುವವರು (ದೇವಚರರು) ಅವನ ಆರಾಧನೆಯನ್ನು ಬಿಟ್ಟು ದರ್ಪ ತೋರುವುದಿಲ್ಲ. ಬಳಲುವುದೂ ಇಲ್ಲ.

:20

ಹಗಲು ಇರುಳೂ ಅವನ ಕೀರ್ತನೆ ಮಾಡುತ್ತಾರೆ, ದಣಿಯುವುದಿಲ್ಲ.

:21

ಅದಲ್ಲ, ಇವರು ಭೂಮಿಯಿಂದ ನಿರ್ಮಿಸಿದಂತಹ ದೇವರುಗಳು ಸತ್ತವರನ್ನು ಜೀವಂತ ಎಬ್ಬಿಸಬಲ್ಲರೇ?

:22

ಭೂಮಿ-ಆಕಾಶಗಳಲ್ಲಿ (ಏಕೈಕ) ಅಲ್ಲಾಹನ ಹೊರತು ಇತರ ದೇವರುಗಳೂ ಇರುತ್ತಿದ್ದರೆ ಅವೆರಡೂ ಹದಗೆಡುತ್ತಿತ್ತು . ಆದುದರಿಂದ ಅರ್ಶ್‍ನ ಪ್ರಭುವಾಗಿರುವ ಅಲ್ಲಾಹನು, ಇವರು ಹೊರಿಸುವ ಆರೋಪಗಳಿಂದ ಅದೆಷ್ಟು ಪರಿಶುದ್ಧನು!.

:23

ಅವನು ಮಾಡುವ ಕಾರ್ಯದ ಬಗ್ಗೆ ಆತನಲ್ಲಿ ಪ್ರಶ್ನಿಸಲಾಗುವುದಿಲ್ಲ. ಆದರೆ ಉಳಿದವರೆಲ್ಲರೂ ಪ್ರಶ್ನಿಸಲ್ಪಡುವರು.

:24

ಇವರು ಅವನನ್ನು ಬಿಟ್ಟು ಇತರ ದೇವರುಗಳನ್ನು ಮಾಡಿಕೊಂಡರೇ? (ಪೈಗಂಬರರೇ,) ಹೇಳಿರಿ; “ನಿಮ್ಮ ಪುರಾವೆಯನ್ನು ತನ್ನಿರಿ. ಇದೇ ನನ್ನ ಜೊತೆಯಿದ್ದವರ ಗ್ರಂಥ ಮತ್ತು ನನಗಿಂತ ಮುಂಚಿನವರ ಗ್ರಂಥ”. ಆದರೆ ಇವರಲ್ಲಿ ಹೆಚ್ಚಿನ ವರು ನಿಜವನ್ನು ಅರಿತಿಲ್ಲ. ಆದುದರಿಂದ ಅವರು ವಿಮುಖರಾಗಿದ್ದಾರೆ.

:25

“ನನ್ನ ಹೊರತು ಬೇರೆ ಆರಾಧ್ಯರಿಲ್ಲ. ಆದ್ದರಿಂದ ನೀವು ನನ್ನನ್ನೇ ಆರಾಧಿಸಿರಿ” ಎಂಬ ಸಂದೇ ಶವನ್ನು ನೀಡದೆ ತಮಗೆ ಮುಂಚೆ ಯಾವುದೇ ದೂತರನ್ನು ನಾವು ಕಳುಹಿಸಿಲ್ಲ .

:26

ಕರುಣಾಮಯನಾದ ಅಲ್ಲಾಹನು ಮಕ್ಕಳನ್ನು ಉಂಟು ಮಾಡಿರುವನೆಂದು ಇವರು ಹೇಳುತ್ತಾರೆ. ಅಲ್ಲಾಹು ಪರಮ ಪಾವನನು. ವಾಸ್ತವದಲ್ಲಿ ಅವರು (ದೇವಚರರು) ಆದರಣೀಯ ದಾಸರಾಗಿರುತ್ತಾರೆ.

:27

ಅವರು ಅವನ ಮಾತಿನ ನಡುವೆ ಬಾಯಿ ಹಾಕಲಾರರು. ಅವರು ಅವನ ಅಪ್ಪಣೆ ಪ್ರಕಾರ ಮಾತ್ರಕಾರ್ಯವೆಸಗುತ್ತಾರೆ

:28

ಅವರ ಮುಂದಿರುವುದನ್ನೂ ಅವರ ಹಿಂದಿರು ವುದನ್ನೂ ಅವನು ಬಲ್ಲನು. ಅಲ್ಲಾಹು ತೃಪ್ತಿಪಟ್ಟವರಿಗಲ್ಲದೆ ಅವರು ಶಿಫಾರಸ್ಸು ಮಾಡುವುದಿಲ್ಲ. ಅವರು ಆತನ ಭಯದಿಂದ ತತ್ತರಿಸುವವರು.

:29

ಅಲ್ಲಾಹನ ಹೊರತು ನಾನೂ ಒಬ್ಬ ದೇವನೆಂದು ಅವರ ಪೈಕಿ ಯಾರಾದರೂ ಹೇಳಿದರೆ ಅವನಿಗೆ ನಾವು ನರಕಾಗ್ನಿಯ ಪ್ರತಿಫಲ ಕೊಡುವೆವು. ಅಕ್ರಮಿಗಳಿಗೆ ನಾವು ಇದೇ ರೀತಿಯ ಪ್ರತಿಫಲ ಕೊಡುತ್ತೇವೆ.

:30

ಆಕಾಶಗಳೂ ಭೂಮಿಯೂ ಮೊದಲು ಕೂಡಿ ಕೊಂಡಿದ್ದು ಅನಂತರ ನಾವು ಅವುಗಳನ್ನು ಬೇರ್ಪಡಿಸಿದ್ದನ್ನೂ ಪ್ರತಿಯೊಂದು ಜೀವಿಯನ್ನು ನೀರಿನಿಂದ ಸೃಷ್ಟಿಸಿದ್ದನ್ನೂ ಸತ್ಯನಿಷೇಧಿಗಳು ಕಾಣಲಿಲ್ಲವೇ? ಅವರಿನ್ನೂ ವಿಶ್ವಾಸ ವಿರಿಸುವುದಿಲ್ಲವೇ?

:31

ಭೂಮಿ ಮನುಷ್ಯರೊಂದಿಗೆ ವಾಲದಂತೆ ಅದರಲ್ಲಿ ನಾವು ಅಚಲವಾದ ಪರ್ವತಗಳನ್ನು ನಾಟಿದ್ದೇವೆ. ಅವರು ತಮ್ಮ ನಿರ್ಧಿಷ್ಟ ಗುರಿಯನ್ನು ತಲುಪುವಂತಾಗಲು ಪರ್ವತಗಳಲ್ಲಿ ವಿಶಾಲ ವಾದ ಮಾರ್ಗಗಳನ್ನು ಮಾಡಿದ್ದೇವೆ .

:32

ಆಕಾಶವನ್ನು ಒಂದು ಸುರಕ್ಷಿತವಾದ ಮೇಲು ಛಾವಣೆಯನ್ನಾಗಿ ನಾವು ಮಾಡಿದ್ದೇವೆ. ಆದರೆ ಇವರು ಅದರ ನಿದರ್ಶನಗಳಿಂದ ವಿಮುಖರಾಗುತ್ತಾರೆ .

:33

ಅವನು ರಾತ್ರಿ ಹಗಲುಗಳನ್ನು ಉಂಟು ಮಾಡಿದವನು. ಸೂರ್ಯ ಚಂದ್ರನನ್ನು ಸೃಷ್ಟಿಸಿದವನು. ಎಲ್ಲವೂ ಕಕ್ಷೆಯಲ್ಲಿ ತೇಲುತ್ತಿವೆ.

:34

(ಪೈಗಂಬರರೇ,) ನಿಮಗೆ ಮುಂಚೆ ಯಾವ ಮನುಷ್ಯನಿಗೂ ನಾವು ಅಮರತ್ವವನ್ನು ನೀಡಲಿಲ್ಲ. ಹೀಗಿದ್ದು ನೀವು ಮರಣ ಹೊಂದಿದರೂ ಕೂಡಾ ಇವರೇನು ಶಾಶ್ವತರೇ?

:35

ಪ್ರತಿಯೊಂದು ಜೀವಿಯೂ ಮರಣದ ಸವಿಯು ಣ್ಣಲಿದೆ. ನಿಮ್ಮನ್ನು ನಾವು ಕಷ್ಟ - ಸುಖಗಳಿಂದ ಪರೀಕ್ಷಿಸುತ್ತಿದ್ದೇವೆ, ಕೊನೆಗೆ ನೀವು ನಮ್ಮ ಕಡೆಗೇ ಮರಳಲಿದ್ದೀರಿ.

:36

“ನಿಮ್ಮ ದೇವರುಗಳನ್ನು ಪ್ರಸ್ತಾವಿಸುತ್ತಿರುವವನು ಇವನೋ?” ಎನ್ನುತ್ತ ಸತ್ಯನಿಷೇಧಿಗಳು ನಿಮ್ಮನ್ನು ಕಂಡಾಗ ಪರಿಹಾಸ್ಯ ಮಾಡದೇ ಬಿಡುವುದಿಲ್ಲ. ಅವರೇ ಕರುಣಾನಿಧಿಯಾದ ಅಲ್ಲಾಹನ ಉದ್ಭೋದೆಯನ್ನು ತಿರಸ್ಕರಿಸುವವರು.

:37

ಮಾನವನನ್ನು ದುಡುಕಿನಿಂದ ಸೃಷ್ಟಿಸಲಾಗಿದೆ. ನನ್ನ ನಿದರ್ಶನಗಳನ್ನು ನಿಮಗೆ ನಾನು ತೋರಿಸಿ ಕೊಡಲಿದ್ದೇನೆ. ಆದ್ದರಿಂದ ನನ್ನೊಡನೆ ದುಡುಕಬೇಡಿರಿ.

:38

“ನೀವು ಸತ್ಯವಂತರಾಗಿದ್ದರೆ ಈ ವಾಗ್ದಾನ ಯಾವಾಗ?” ಎಂದು ಇವರು ಕೇಳುತ್ತಾರೆ.

:39

ಸತ್ಯನಿಷೇಧಿಗಳು ತಮ್ಮ ಮುಖಗಳಿಂದಾಗಲಿ ತಮ್ಮ ಬೆನ್ನುಗಳಿಂದಾಗಲಿ ನರಕಾಗ್ನಿಯನ್ನು ತಡೆದಿರಿಸಲಾಗದ ಹಾಗೂ ಅವರಿಗೆ ಸಹಾಯ ನೀಡಲಾಗದ ಸಂದರ್ಭದ ಬಗ್ಗೆ ಅರಿಯುತ್ತಿದ್ದರೆ! (ಅವರು ಹೀಗೆ ದುಡುಕುತ್ತಿರಲಿಲ್ಲ).

:40

ಆದರೆ ಆ ವಿಪತ್ತು ದಿಢೀರನೆ ಅವರ ಮೇಲೆರಗು ವುದು. ಆಗ ಅವರನ್ನು ಅದು ಕಂಗೆಡಿಸುವುದು. ಅವರಿಗೆ ಅದನ್ನು ತಡೆಯಲು ಸಾಧ್ಯವಾಗದು ಮತ್ತು ಸಮಯಾವಕಾಶವನ್ನೂ ಕೊಡಲಾಗದು.

:41

(ನಬಿಯವರೇ) ನಿಮಗಿಂತ ಮುಂಚೆಯೂ ಸಂದೇಶ ವಾಹಕರನ್ನು ಪರಿಹಾಸ್ಯ ಮಾಡಲಾ ಗಿದೆ. ಆದರೆ ಅವರನ್ನು ಗೇಲಿ ಮಾಡಿದವರಿಗೆ ಅವರು ಪರಿಹಾಸ್ಯ ಮಾಡುತ್ತಿದ್ದುದೇ ಬಂದೆರಗಿತು ಂ.

:42

(ಪೈಗಂಬರರೇ,) ಕೇಳಿರಿ, ನಿಮ್ಮನ್ನು ಹಗಲೂ ರಾತ್ರಿಯೂ ಕರುಣಾಮಯನಾದ ಅಲ್ಲಾಹನಿಂದ ರಕ್ಷಿಸುವವನು ಯಾರು? ಆದರೆ ಇವರು ತಮ್ಮ ಪ್ರಭುವಿನ ಸ್ಮರಣೆಯಿಂದ ವಿಮುಖರಾಗಿದ್ದಾರೆ.

:43

ನಮ್ಮ ವಿರುದ್ಧ ಇವರನ್ನು ತಡೆದು ರಕ್ಷಿಸುವ ದೇವ ರುಗಳು ಇವರಿಗಿದ್ದಾರೆಯೇನು? ಆ ದೇವರುಗಳು ಸ್ವಯಂ ತಮಗೇ ಸಹಾಯ ಮಾಡಿಕೊಳ್ಳಲಾರರು ಮತ್ತು ನಮ್ಮಿಂದ ಅವರು ಸಹಾಯ ಪಡಕೊಳ್ಳಲಾರರು.

:44

ವಾಸ್ತವದಲ್ಲಿ ನಾವು ಇವರಿಗೂ ಇವರ ಪೂರ್ವ ಜರಿಗೂ ಜೀವನ ಸವಲತ್ತುಗಳನ್ನು ಕೊಟ್ಟಿದ್ದೆವು. ಹೀಗೆ ಅವರ ಜೀವನಾವಧಿ ದೀರ್ಘವಾಯಿತು. ಆದರೆ ನಾವು ಭೂಮಿಯನ್ನು ಅದರ ವಿವಿಧ ದಿಸೆಗಳಿಂದ ಕಡಿತಗೊಳಿಸುತ್ತ ಬರುತ್ತಿರುವುದು ಇವರು ಕಾಣುವುದಿಲ್ಲವೇ? ಹೀಗಿರುವಾಗ ಇವರು ಮೇಲುಗೈ ಸಾಧಿಸುವರೇ?

:45

ನಾನಂತು ಅಲ್ಲಾಹನ ಸಂದೇಶದ ಆಧಾರದಲ್ಲೇ ನಿಮಗೆ ಎಚ್ಚರಿಕೆ ಕೊಡುತ್ತಿದ್ದೇನೆಂದು ಇವರೊಡನೆ ಹೇಳಿರಿ. ಆದರೆ ಕಿವುಡರಿಗೆ ಎಷ್ಟು ಎಚ್ಚರಿಸಿದರೂ ಅವರು ಕರೆಯನ್ನು ಕೇಳುವುದಿಲ್ಲ.

:46

ನಿನ್ನ ಪ್ರಭುವಿನ ಶಿಕ್ಷೆಯಿಂದ ಇವರಿಗೆ ಕಿಂಚಿತ್ತಾದರೂ ಸೋಂಕಿ ಬಿಟ್ಟರೆ. “ಅಯ್ಯೋ ನಮ್ಮ ನಾಶವೇ! ನಿಜಕ್ಕೂ ನಾವು ಅಪರಾಧಿಗಳೇ ಆಗಿದ್ದೆವು” ಎಂದು ಖಂಡಿತ ಹೇಳುವರು.

:47

ಪುನರುತ್ಥಾನ ದಿನ ನಾವು ನಿಖರವಾಗಿ ತೂಗುವ ನ್ಯಾಯ ತಕ್ಕಡಿಯನ್ನಿಟ್ಟು ಬಿಡುವೆವು. ಆಗ ಯಾರ ಮೇಲೂ ಸ್ವಲ್ಪವೂ ಅಕ್ರಮವಾಗದು. ಮನುಷ್ಯನ ಕರ್ಮವು ಸಾಸಿವೆ ಕಾಳಿನಷ್ಟಾಗಿದ್ದರೂ ನಾವು ಅದನ್ನು ಮುಂದೆ ತರುವೆವು . ಲೆಕ್ಕ ಪರಿಶೋಧಕರಾಗಿ ನಾವೇ ಸಾಕು.

:48

ಈ ಮುಂಚೆ ಮೂಸಾ ಮತ್ತು ಹಾರೂನರಿಗೆ ಸತ್ಯ-ಅಸತ್ಯಗಳ ವಿವೇಚನೆ ಹಾಗೂ ಬೆಳಕನ್ನೂ ಧರ್ಮನಿಷ್ಠರಿಗಿರುವ ಉದ್ಬೋಧನೆಯನ್ನೂ ನಾವು ನೀಡಿದ್ದೇವೆ.

:49

ತಮ್ಮ ಪ್ರಭುವನ್ನು ಅದೃಶ್ಯದಲ್ಲಿ ಭಯಪಡುವ ಹಾಗೂ (ವಿಚಾರಣೆಯ) ಆ ಘಳಿಗೆಯ ಬಗ್ಗೆ ಸದಾ ಭೀತರಾಗಿರುವ (ಧರ್ಮನಿಷ್ಟರಿಗಾಗಿ).

:50

ಇದು (ಖುರ್‍ಆನ್) ನಾವು ಅವತೀರ್ಣಗೊಳಿಸಿದ ಅನುಗ್ರಹೀತ ಉದ್ಬೋಧೆಯಾಗಿದೆ. ನೀವೇನು ಇದನ್ನು ನಿರಾಕರಿಸುವಿರಾ?

:51

ಅದಕ್ಕಿಂತಲೂ ಮುಂಚೆ ನಾವು ಇಬ್‍ರಾಹೀಮ ರಿಗೆ ಅವರ ಸನ್ಮಾರ್ಗವನ್ನು ದಯಪಾಲಿಸಿದ್ದೆವು ಮತ್ತು ನಾವು ಅವರನ್ನು ಚೆನ್ನಾಗಿ ಅರಿತಿದ್ದೆವು.

:52

ಅವರು ತಮ್ಮ ತಂದೆ ಹಾಗೂ ತಮ್ಮ ಜನಾಂಗ ದೊಡನೆ, “ನೀವು ಭಜನೆ ಕೂರುತ್ತಿರುವ ಈ ವಿಗ್ರಹಗಳು ಎಂತಹವು?” ಎಂದು ಕೇಳಿದ್ದ ಸಂದರ್ಭವನ್ನು ಸ್ಮರಿಸಿರಿ.

:53

ಆಗ ಅವರು, ‘`ನಮ್ಮ ಪೂರ್ವಜರು ಇವುಗಳನ್ನು ಪೂಜಿಸುತ್ತಿರುವುದನ್ನು ನಾವು ಕಂಡಿದ್ದೇವೆ” ಎಂದು ಉತ್ತರಕೊಟ್ಟರು.

:54

ಇವರು, “ನೀವೂ ನಿಮ್ಮ ಪೂರ್ವಜರೂ ಸ್ಪಷ್ಟ ದುರ್ಮಾರ್ಗದಲ್ಲಿದ್ದೀರಿ” ಎಂದಾಗ

:55

ಅವರು, “ನೀನೊಂದು ಸತ್ಯ ವಿಚಾರವನ್ನು ತಂದಿದ್ದೀಯಾ? ಅಥವಾ ಸುಮ್ಮನೆ ಮೋಜು ಮಾಡುತ್ತಿರುವೆಯಾ ?” ಎಂದು ಕೇಳಿದರು.

:56

ಆಗ ಇವರು, “ಸುಮ್ಮನೆಯಲ್ಲ, ವಾಸ್ತವದಲ್ಲಿ ಭೂಮಿ-ಆಕಾಶಗಳನ್ನು ಸೃಷ್ಟಿಸಿದ ಪ್ರಭುವೇ ನಿಮ್ಮ ಪ್ರಭುವಾಗಿರುವನು. ಈ ಬಗೆಗೆ ನಾನು ನಿಮ್ಮ ಮುಂದೆ ಸಾಕ್ಷ್ಯ ವಹಿಸುತ್ತೇನೆ.

:57

ಅಲ್ಲಾಹನಾಣೆ, ನೀವು ಹಿಂತಿರುಗಿ ಹೋದ ನಂತರ ನಾನು ಖಂಡಿತವಾಗಿಯೂ ನಿಮ್ಮ ವಿಗ್ರಹಗಳನ್ನು ನಾಶ ಮಾಡಲು ಪ್ರಯತ್ನಿಸುವೆನು” ಎಂದರು.

:58

ಆ ಪ್ರಕಾರ ಇವರು ಅವರನ್ನು (ವಿಗ್ರಹಗಳನ್ನು) ತುಂಡು ತುಂಡಾಗಿ ಮುರಿದು ಹಾಕಿದರು ಮತ್ತು ಅದರ ಕಡೆಗೆ ಅವರು ಮರಳಿ ಬರಲೆಂದು ಅವರಲ್ಲಿ ದೊಡ್ಡ ವಿಗ್ರಹವನ್ನು ಬಿಟ್ಟುಬಿಟ್ಟರು .

:59

ಅವರು “ನಮ್ಮ ದೇವರುಗಳಿಗೆ ಈ ಗತಿ ಮಾಡಿ ದವನಾರು? ಅವನೊಬ್ಬ ಮಹಾ ಅಕ್ರಮಿಯಾಗಿರುವನು” ಎಂದರು.

:60

ಕೆಲವರು ಹೀಗೆ ಹೇಳಿದರು; “ಇಬ್‍ರಾಹೀಮ್ ಎಂದು ಕರೆಯಲ್ಪಡುವ ಯುವಕನೊಬ್ಬ ಅವರ ಬಗ್ಗೆ ಹೀಗಳೆಯುತ್ತಿದ್ದುದನ್ನು ನಾವು ಕೇಳಿದ್ದೇವೆ’’.

:61

ಆಗ ಅವರು, “ಹಾಗಾದರೆ ಅವನನ್ನು ಹಿಡಿದು ಜನರೆದುರು ಕರೆತನ್ನಿ. ಅವರು ಸಾಕ್ಷಿ ಹೇಳುವವ ರಾಗಲಿ” ಎಂದರು.

:62

“ಓ ಇಬ್ರಾಹೀಮ್! ನಮ್ಮ ದೇವರುಗಳನ್ನು ಹೀಗೆ ಮಾಡಿರುವುದು ನೀನೋ?” ಎಂದು ಕೇಳಿದರು.

:63

ಅವರು “ಅಲ್ಲ, ಅದನ್ನು ಅವರ ಈ ಹಿರಿಯನು ಮಾಡಿರುತ್ತಾನೆ. ಅವರು ಮಾತಾಡುವುದಿದ್ದರೆ ಅವರನ್ನೇ ಕೇಳಿಕೊಳ್ಳಿರಿ” ಎಂದರು.

:64

ಆಗ ಅವರು ತಮ್ಮ ಅಂತಃಕರಣದ ಕಡೆಗೆ ಮರ ಳಿದರು. ಆಮೇಲೆ ತಮ್ಮೊಳಗೆ “ನಿಜಕ್ಕೂ ನೀವೇ ಅಕ್ರಮಿಗಳು” ಎಂದರು.

:65

ನಂತರ ಅವರನ್ನು ಪೂರ್ವಸ್ಥಿತಿಗೆ ಮರಳಿಸಲಾಯಿತು. “ಇವರು ಮಾತನಾಡುವುದಿಲ್ಲ ವೆಂದು ನಿನಗೆ ಗೊತ್ತಿದೆ.” ಎಂದರು.

:66

ಆಗ ಇಬ್‍ರಾಹೀಮ್, “ಹಾಗಾದರೆ ನೀವು ಅಲ್ಲಾಹನನ್ನು ಬಿಟ್ಟು ನಿಮಗೆ ಯಾವುದೇ ಉಪಕಾರ ಮಾಡದ ಹಾಗೂ ಉಪದ್ರವಿಸದ ವಸ್ತುಗಳನ್ನು ಪೂಜಿಸುತ್ತಿರುವಿರಲ್ಲ?

:67

ಛೇ, ನಿಮಗೆ ಮತ್ತು ಅಲ್ಲಾಹನನ್ನು ಬಿಟ್ಟು ನೀವು ಪೂಜಿಸುತ್ತಿರುವ ನಿಮ್ಮ ಆರಾದ್ಯ ವಸ್ತುಗಳಿಗೆ ಧಿಕ್ಕಾರವಿರಲಿ. ನೀವೇನು ಯೋಚಿ ಸುವುದಿಲ್ಲವೇ?”ಎಂದರು.

:68

ಆಗ ಅವರು “ಈತನ ಮೇಲೆ ನೀವು ಯಾವುದೇ ಕ್ರಮ ಕೈಗೊಳ್ಳುವುದಾದರೆ, ಇವನನ್ನು ಸುಟ್ಟುಹಾಕಿರಿ. ನಿಮ್ಮ ದೇವರುಗಳಿಗೆ ನೆರವಾಗಿರಿ” ಎಂದರು .

:69

ನಾವು ಹೇಳಿದೆವು; “ಓ ಅಗ್ನಿಯೇ, ಇಬ್‍ರಾ ಹೀಮ್‍ರ ಪಾಲಿಗೆ ತಣ್ಣಗಾಗು, ಸುರಕ್ಷೆಯಾಗು”.

:70

ಅವರು ಇಬ್‍ರಾಹೀಮರಿಗೆ ಕೇಡು ಮಾಡಲು ಬಯಸಿದ್ದರು. ಆದರೆ ಅವರನ್ನು ಅತ್ಯಂತ ನಷ್ಟ ವಂತರನ್ನಾಗಿ ನಾವು ಮಾಡಿದೆವು.

:71

ಅವರನ್ನೂ ಲೂಥರನ್ನೂ ಲೋಕವಾಸಿಗಳಿಗೆ ನಾವು ಸಮೃದ್ಧಿಯನ್ನಿರಿಸಿದ ಪ್ರದೇಶಕ್ಕೆ ಕಳುಹಿಸಿ ನಾವು ರಕ್ಷಿಸಿದೆವು.

:72

ಅವರಿಗೆ ನಾವು ಇಸ್‍ಹಾಖರನ್ನು, ಹೆಚ್ಚುವರಿಯಾಗಿ ಯಅïಖೂಬರನ್ನೂ ದಾನ ನೀಡಿದೆವು ಮತ್ತು ಅವರನ್ನೆಲ್ಲ ಸಜ್ಜನರಾಗಿ ಮಾಡಿದೆವು.

:73

ಅವರನ್ನು ನಾವು ನಮ್ಮ ಅಪ್ಪಣೆಯಂತೆ ಮಾರ್ಗ ದರ್ಶನ ನೀಡುವ ನಾಯಕರನ್ನಾಗಿ ಮಾಡಿದೆವು. ಸತ್ಕರ್ಮವೆಸಗಲು, ನಮಾಝ್ ಸಂಸ್ಥಾಪಿಸಲು ಮತ್ತು ಝಕಾತ್ ನೀಡಲು ಅವರಿಗೆ ನಾವು ಸಂದೇಶ ನೀಡಿದೆವು. ಅವರು ನಮ್ಮ ಉಪಾಸಕರಾಗಿದ್ದರು.

:74

ಲೂಥರಿಗೆ ನಾವು ನ್ಯಾಯವಿಧಿ ಮತ್ತು ಜ್ಞಾನವನ್ನು ದಯಪಾಲಿಸಿದೆವು. ಅವರನ್ನು ಕೆಟ್ಟ ಕೆಲಸ ಮಾಡುತ್ತಿದ್ದ ಆ ನಾಡಿನಿಂದ ಪಾರು ಮಾಡಿದೆವು. ವಾಸ್ತವದಲ್ಲಿ ಅವರು ಅತ್ಯಂತ ದುಷ್ಟರಾದ ದುರ್ವೃತ್ತ ಜನಾಂಗವಾಗಿದ್ದರು.

:75

ಲೂಥರನ್ನು ನಾವು ನಮ್ಮ ಕೃಪೆಯಲ್ಲಿ ಪ್ರವೇಶ ಗೊಳಿಸಿದೆವು. ಅವರು ಸಜ್ಜನರಲ್ಲಾಗಿದ್ದರು.

:76

ನೂಹರನ್ನು ಸ್ಮರಿಸಿರಿ. ಮುಂಚೆ ಅವರು ಕೂಗಿ ಪ್ರಾರ್ಥಿಸಿದ ಸಂದರ್ಭ. ನಾವು ಅವರಿಗೆ ಉತ್ತರಿಸಿ ದೆವು. ಅವರನ್ನೂ ಅವರ ಮನೆಯವರನ್ನೂ ಮಹಾ ಸಂಕಷ್ಟದಿಂದ ಪಾರುಗೊಳಿಸಿದೆವು.

:77

ನಮ್ಮ ನಿದರ್ಶನಗಳನ್ನು ಸುಳ್ಳಾಗಿಸಿದ ಜನಾಂಗದಿಂದ ಅವರನ್ನು ಪಾರುಗೊಳಿಸಿ ಸಹಾಯ ಮಾಡಿದೆವು. ಅವರು ಬಹಳ ಕೆಟ್ಟ ಜನಾಂಗವಾಗಿದ್ದರು. ಆದುದರಿಂದ ನಾವು ಅವೆರಲ್ಲರನ್ನೂ ಮುಳುಗಿಸಿ ಕೊಂದೆವು.

:78

ದಾವೂದ್ ಮತ್ತು ಸುಲೈಮಾನರನ್ನು ಸ್ಮರಿಸಿರಿ. ರಾತ್ರಿ ವೇಳೆ ಒಂದು ಜನಾಂಗದ ಆಡುಗಳು ಮೇಯ್ದು ಕೃಷಿ ನಾಶ ಮಾಡಿದ ಒಂದು ಹೊಲದ ಮೊಕದ್ದಮೆಯಲ್ಲಿ (ಅವರಿಬ್ಬರೂ) ತೀರ್ಪು ನೀಡುತ್ತಿದ್ದ ಸಂದರ್ಭ. ಅವರ ನ್ಯಾಯ ತೀರ್ಮಾನಕ್ಕೆ ನಾವು ಸಾಕ್ಷ್ಯ ವಹಿಸುತ್ತಿದ್ದೆವು.

:79

ಅದರ ಕುರಿತಾಗಿ ಸುಲೈಮಾನರಿಗೆ ನಾವು ಮನವರಿಕೆ ಮಾಡಿಕೊಟ್ಟೆವು. ನ್ಯಾಯ ವಿಧಿ ಮತ್ತು ಜ್ಞಾನವನ್ನು ನಾವು ಇಬ್ಬರಿಗೂ ದಯ ಪಾಲಿಸಿದ್ದೆವು. ನಾವು ದಾವೂದರ ಜೊತೆಗೆ ಅಲ್ಲಾಹನ ಪಾವಿತ್ರ್ಯವನ್ನು ಕೊಂಡಾಡುವ ಸ್ಥಿತಿಯಲ್ಲಿ ಪರ್ವತಗಳನ್ನೂ ಪಕ್ಷಿಗಳನ್ನೂ ಅಧೀನಗೊಳಿಸಿಕೊಟ್ಟೆವು, ಇದನ್ನು ಮಾಡಿದವರು ನಾವೇ ಆಗಿದ್ದೆವು.

:80

ನೀವು ಎದುರಿಸುವ ಯುದ್ಧದ ವಿಪತ್ತುಗಳಿಂದ ನಿಮ್ಮನ್ನು ರಕ್ಷಿಸಲಿಕ್ಕಾಗಿ ಬಳಸುವ ಎದೆಗವಚದ ನಿರ್ಮಾಣವನ್ನು ನಾವು ಅವರಿಗೆ ಕಲಿಸಿದ್ದೆವು . ಹೀಗಿರುವಾಗ ನೀವು ಕೃತಜ್ಞರಾಗುವಿರಾ?

:81

ನಾವು ಸುಲೈಮಾನರಿಗೆ ಬಲವಾಗಿ ಬೀಸುವ ಗಾಳಿಯನ್ನು ಅಧೀನಗೊಳಿಸಿಕೊಟ್ಟೆವು. ನಾವು ಅನುಗ್ರಹಿಸಿದ ಪ್ರದೇಶಕ್ಕೆ ಅದು ಅವರ ಅಪ್ಪಣೆ ಪ್ರಕಾರ ಚಲಿಸುತ್ತಿತ್ತು. ನಾವು ಸಕಲ ವಸ್ತುಗಳ ಜ್ಞಾನವುಳ್ಳವರಾಗಿರುತ್ತೇವೆ.

:82

ಶೈತಾನರ ಪೈಕಿ ಅವರಿಗಾಗಿ ಮುಳುಗೇಳುವ ಕೆಲವರನ್ನು ನಾವು ಅವರ ನಿಯಂತ್ರಣಕ್ಕೆ ತಂದು ಕೊಟ್ಟಿದ್ದೆವು. ಇದಕ್ಕೆ ಹೊರತಾಗಿ ಇತರ ಕೆಲಸಗಳನ್ನೂ ಅವರು ಮಾಡುತ್ತಿದ್ದರು. ಇವರೆಲ್ಲರ ಸಂರಕ್ಷಕರು ನಾವೇ ಆಗಿದ್ದೆವು .

:83

ಅಯ್ಯೂಬರನ್ನು ಸ್ಮರಿಸಿರಿ. ಅವರು, “ನನಗೆ ರೋಗ ಹಿಡಿದಿದೆ, ನೀನು ಕರುಣಾಳುಗಳಲ್ಲಿ ಅತ್ಯಂತ ಕರುಣಾಳು ಆಗಿರುವಿ” ಎಂದು ತಮ್ಮ ಪ್ರಭುವನ್ನು ಕೂಗಿ ಕರೆದ ಸಂದರ್ಭ .

:84

ಆಗ ನಾವು ಅವರಿಗೆ ಉತ್ತರಕೊಟ್ಟೆವು. ಅವರಿಗೆ ಬಾಧಿಸಿದ ಸಂಕಷ್ಟವನ್ನು ದೂರೀಕರಿಸಿದೆವು. ಅವರಿಗೆ ಸ್ವಂತ ಮನೆಯವರನ್ನೂ ಅವರೊಂದಿಗೆ ಅಷ್ಟೇ ಮಂದಿ ಬೇರೆಯವರನ್ನೂ ಕೊಟ್ಟೆವು. ನಮ್ಮ ಬಳಿಯಿಂದ ವಿಶೇಷ ಕಾರುಣ್ಯವೂ ಆರಾಧಕರಿಗೆ ಒಂದು ಸ್ಮರಣೆಯೂ ಆಗಲೆಂದು.

:85

ಇಸ್ಮಾಈಲ್, ಇದ್ರೀಸ್ ಮತ್ತು ದ್ಸುಲ್‍ಕಿಫ್ಲ್‍ರನ್ನೂ ಸ್ಮರಿಸಿರಿ. ಇವರೆಲ್ಲರೂ ಸಹನಶೀಲರಾಗಿದ್ದರು.

:86

ಇವರನ್ನು ನಾವು ನಮ್ಮ ಕೃಪೆಯಲ್ಲಿ ಸೇರಿಸಿಕೊಂಡೆವು. ಖಂಡಿತ ಅವರು ಸಜ್ಜನರಲ್ಲಾಗಿದ್ದರು.

:87

ಮತ್ಸ್ಯದವರನ್ನು (ಪ್ರವಾದಿ ಯೂನುಸ್) ಸ್ಮರಿಸಿರಿ. ಅವರು ಕೋಪಗೊಂಡು ಹೊರಟು ಹೋಗಿದ್ದ ಸಂದರ್ಭ. ಅವರನ್ನು ನಾವು ಇಕ್ಕಟ್ಟಿಗೆ ಸಿಲುಕಿಸಲಾರೆವೆಂದು ಅವರು ಭಾವಿಸಿದ್ದರು. ಕೊನೆಗೆ ಅವರು ಅಂಧಕಾರದೊಳಗಿಂದ ಕೂಗಿ ಪ್ರಾರ್ಥಿಸಿದರು, “(ಪ್ರಭು)-ನಿನ್ನ ಹೊರತು ಅನ್ಯ ಆರಾಧ್ಯನಿಲ್ಲ. ನೀನು ಪರಮ ಪಾವನನು. ನಿಶ್ಚಯ, ನಾನು ಅಕ್ರಮಿಗಳ ಗಣಕ್ಕೆ ಸೇರಿ ಹೋದೆ”.

:88

ಆಗ ನಾವು ಅವರಿಗೆ ಉತ್ತರ ಕೊಟ್ಟೆವು. ಅವರನ್ನು ದುಃಖದಿಂದ ಪಾರುಗೊಳಿಸಿದೆವು. ಇದೇ ರೀತಿ ನಾವು ಸತ್ಯವಿಶ್ವಾಸಿಗಳನ್ನು ರಕ್ಷಿಸಿಕೊಳ್ಳುತ್ತೇವೆ.

:89

`ಝಕರಿಯ್ಯಾರನ್ನು ಸ್ಮರಿಸಿರಿ. ಅವರು, ‘ನನ್ನ ಪ್ರಭೂ, ನನ್ನನ್ನು ಏಕಾಂಗಿಯಾಗಿ ಬಿಟ್ಟು ಬಿಡ ಬೇಡ. ವಾರೀಸುದಾರರ ಪೈಕಿ ನೀನೇ ಉತ್ತಮನಾಗಿರುವಿ’ ಎಂದು ತನ್ನ ಪ್ರಭುವನ್ನು ಕೂಗಿ ಕರೆದ ಸಂದರ್ಭ.

:90

ಆಗ ನಾವು ಅವರಿಗೆ ಉತ್ತರಿಸಿದೆವು. ಅವರಿಗೆ (ಪುತ್ರ) ಯಹ್ಯಾರನ್ನು ನೀಡಿದೆವು. ಅವರ ಪತ್ನಿಯನ್ನು ಗರ್ಭ ಧಾರಣೆಗೆ ಪ್ರಾಪ್ತಗೊಳಿಸಿದೆವು. ಇವರು (ಪ್ರವಾದಿ ಗಳು) ಪುಣ್ಯ ಕಾರ್ಯಗಳಲ್ಲಿ ಉತ್ಸುಕರಾಗಿದ್ದರು. ನಮ್ಮನ್ನು ಒಲವು ಹಾಗೂ ಭಯದೊಂದಿಗೆ ಪ್ರಾರ್ಥಿಸುತ್ತಿದ್ದರು. ನಮ್ಮ ಮುಂದೆ ಭಕ್ತಿಯಿಂದ ವಿನಯ ತೋರುತ್ತಿದ್ದರು

:91

ತನ್ನ ಗೌಪ್ಯವನ್ನು ಕಾಪಾಡಿದ ಆ ಸ್ತ್ರೀಯನ್ನು (ಮರ್ಯಮರನ್ನು) ಸ್ಮರಿಸಿರಿ. ನಮ್ಮ ಆತ್ಮದ (ಜಿಬ್ರೀಲ) ಮೂಲಕ ಅವಳಲ್ಲಿ ನಾವು ಊದಿದೆವು. ಅವಳನ್ನೂ ಅವಳ ಪುತ್ರನನ್ನೂ (ಈಸಾರನ್ನು) ಜಗತ್ತಿಗೆ ನಿದರ್ಶನವಾಗಿ ಮಾಡಿದೆವು.

:92

ಓ ಜನರೇ! ಇದು ನಿಮ್ಮ ಧರ್ಮ. ಏಕೈಕ ಧರ್ಮ. ನಾನು ನಿಮ್ಮ ಪ್ರಭುವಾಗಿದ್ದೇನೆ. ಆದುದರಿಂದ ನೀವು ನನಗೆ ಆರಾಧಿಸಿರಿ.

:93

ಆದರೆ ಅವರು ಪರಸ್ಪರ ತಮ್ಮ ಕಾರ್ಯವನ್ನು ಛಿನ್ನಭಿನ್ನ ಮಾಡಿದರು. ಎಲ್ಲರೂ ನಮ್ಮ ಕಡೆಗೇ ಮರಳುವವರು.

:94

ಆದ್ದರಿಂದ ಯಾರು ಸತ್ಯವಿಶ್ವಾಸಿಯಾಗಿದ್ದು ಕೊಂಡು ಸತ್ಕರ್ಮವೆಸಗುತ್ತಾರೋ ಅವನ ಪ್ರಯತ್ನ ಫಲವನ್ನು ನಿಷೇಧಿಸಲಾಗದು. ನಾವು ಅದನ್ನು ದಾಖಲಿಸುತ್ತಿದ್ದೇವೆ.

:95

ನಾವು ನಾಶ ಮಾಡಿರುವ ಯಾವುದೇ ನಾಡಿನ ಜನರು ಪುನಃ ಮರಳಿ ಬರುವುದು ಸಾಧ್ಯವಿಲ್ಲ ಎಂಬುದು ಖಂಡಿತ .

:96

ಹಾಗೆ ಯಅïಜೂಜ, ಮಅïಜೂಜರು ಬಿಡು ಗಡೆ ಗೊಳಿಸಲ್ಪಡುವ ತನಕ - ಅವರು ಎಲ್ಲ ಎತ್ತರದ ಸ್ಥಳಗಳಿಂದ ನುಗ್ಗಿ ಬರುವರು.

:97

ಸತ್ಯ ವಾಗ್ದಾನ ಸಮಯ ಸನ್ನಿಹಿತವಾದರೆ, ಸತ್ಯ ನಿಷೇಧಿಗಳ ತೆರೆದ ಕಣ್ಣುಗಳು ಮೇಲಕ್ಕೆ ದಿಟ್ಟಿಸಿ ನಿಲ್ಲುವುದು. ಅವರು ಹೇಳುವರು; “ಅಯ್ಯೋ, ನಮ್ಮ ನಾಶವೇ! ನಾವು ಇದರಿಂದ ಅಲಕ್ಷ್ಯರಾಗಿದ್ದೆವು. ಅಲ್ಲ, ನಿಜವಾಗಿ ನಾವು ಅಕ್ರಮಿಗಳಾಗಿದ್ದೆವು”.

:98

ಸತ್ಯ ನಿಷೇಧಿಗಳೇ, ನೀವು ಮತ್ತು ಅಲ್ಲಾಹ ನನ್ನು ಬಿಟ್ಟು ನೀವು ಪೂಜಿಸುವ ಆರಾಧ್ಯ ವಸ್ತುಗಳು ನರಕಾಗ್ನಿಯ ಇಂಧನಗಳು, ನೀವೂ ಅದಕ್ಕೆ ಸೇರಬೇಕಾದವರು.

:99

ಅವುಗಳು ನಿಜಕ್ಕೂ ದೇವರಾಗಿರುತ್ತಿದ್ದರೆ ಅವು ನರಕಕ್ಕೆ ಹೋಗುತ್ತಿರಲಿಲ್ಲ. ಎಲ್ಲರೂ ಅದರಲ್ಲಿ ಶಾಶ್ವತರು.

:100

ಅಲ್ಲಿ ಅವರು ನಿಡುಸುಯ್ಯುವರು. ಅಲ್ಲಿ ಅವರಿಗೇನೂ ಕೇಳಿಸದು.

:101

ಯಾರಿಗೆ ಮೊದಲೇ ನಮ್ಮಿಂದ ಉತ್ತಮ ಸ್ಥಾನ ಪ್ರಾಪ್ತವಾಗಿದೆಯೋ ಅವರು ನರಕದಿಂದ ದೂರವಾಗುವರು.

:102

ಅದರ ಮೆಲು ದನಿಯನ್ನೂ ಅವರು ಕೇಳಲಾರರು. ಅವರು ತಮ್ಮ ಮನಮೆಚ್ಚುವ ಅನುಗ್ರಹ ಗಳ ನಡುವೆ ಶಾಶ್ವತವಾಗಿ ನೆಲೆಸುವರು.

:103

ಅತಿ ಭಯಂಕರ ಭಯಭೀತಿಯು ಅವರನ್ನು ವ್ಯಥೆಗೊಳಿಸದು. ಇದು ನಿಮಗೆ ವಾಗ್ದಾನ ಮಾಡಲಾಗಿದ್ದ ಅದೇ ನಿಮ್ಮ ದಿನ ಎನ್ನುತ್ತಾ ದೇವಚರರು ಅವರನ್ನು ಇದಿರ್ಗೊಳ್ಳುವರು.

:104

ಬರೆಯಲಾದ ಹೊತ್ತಗೆಯ ಹಾಳೆಗಳನ್ನು ಸುತ್ತುವ ಹಾಗೆ ನಾವು ಆಕಾಶವನ್ನು ಸುರುಟು ವ ದಿನವನ್ನು ನೆನೆಸಿರಿ. ಮೊದಲು ಸೃಷ್ಟಿಯ ಆರಂಭ ಮಾಡಿದಂತೆ ಅದನ್ನು ನಾವು ಪುನರ್ ಸೃಷ್ಟಿಸುತ್ತೇವೆ. ಇದು ನಮ್ಮ ಮೇಲಿನ ವಾಗ್ದಾನ ವಾಗಿದ್ದು ಈ ಕಾರ್ಯವನ್ನು ನಾವು ಖಂಡಿತ ಮಾಡುತ್ತೇವೆ.

:105

ನಮ್ಮ ಸಜ್ಜನ ದಾಸರು ಭೂಮಿಯನ್ನು ವಾರೀಸು ಪಡೆಯಲಿದ್ದಾರೆಂದು ಮೂಲ ಪ್ರಮಾಣದಲ್ಲಿ ಉಲ್ಲೇಖಿಸಿದ ಬಳಿಕ ನಾವು ವೇದಗ್ರಂಥದಲ್ಲಿ ಬರೆದಿರುತ್ತೇವೆ.

:106

ಇದರಲ್ಲಿ ದೇವೋಪಾಸಕರಿಗೆ ಒಂದು ದೊಡ್ಡ ಸಂದೇಶವಿದೆ

:107

(ಪೈಗಂಬರರೇ,) ನಾವು ನಿಮ್ಮನ್ನು ಸಕಲ ಜಗತ್ತಿಗೆ ಅನುಗ್ರಹವಾಗಿ ಮಾಡಿ ಕಳುಹಿಸಿರುತ್ತೇವೆ .

:108

ಹೇಳಿರಿ. “ನಿಮ್ಮ ದೇವನು ಏಕೈಕ ದೇವನೆಂದು ನನ್ನ ಬಳಿಗೆ ದಿವ್ಯ ಸಂದೇಶ ಬಂದಿದೆ. ಆದ್ದ ರಿಂದ ಅವನನ್ನು ನೀವು ಅನುಸರಿಸುವಿರಾ?”

:109

ಇನ್ನು ಅವರು ವಿಮುಖರಾದರೆ ಹೇಳಿರಿ, “ನಾನು ಸರಿಯಾದ ರೀತಿಯಲ್ಲಿ ನಿಮಗೆ ಎಚ್ಚರಿಕೆ ನೀಡಿ ರುತ್ತೇನೆ. ಆದರೆ ನಿಮಗೆ ಮಾಡಲಾದ ವಾಗ್ದಾ ನವು ಹತ್ತಿರವಿದೆಯೋ ಅಥವಾ ದೂರವಿದೆಯೋ ಎಂದು ನಾನರಿಯೆನು.

:110

ನೀವು ಜೋರಾಗಿ ಹೇಳುವುದನ್ನೂ ಅವನು ಅರಿಯುತ್ತಾನೆ. ಗುಟ್ಟಾಗಿ ಹೇಳುವುದನ್ನೂ ಅವನು ಅರಿಯುತ್ತಾನೆ.

:111

ನಾನು ತಿಳಿದಿಲ್ಲ. ಪ್ರಾಯಶಃ ಈ ವಿಳಂಬವು ನಿಮಗೊಂದು ಪರೀಕ್ಷೆಯಾಗಿದೆ ಮತ್ತು ನಿಮಗೆ ಒಂದು ನಿರ್ದಿಷ್ಟ ಕಾಲದವರೆಗೆ ಸುಖಿಸುವ ಅವಕಾಶ ಕೊಡಲಾಗುತ್ತಿದೆ” .

:112

ಸಂದೇಶವಾಹಕರು ಹೇಳಿದರು, “ಓ ನನ್ನ ಪ್ರಭೂ, ಸತ್ಯವಾದ ನೆಲೆಯಲ್ಲಿ ತೀರ್ಪು ಕಲ್ಪಿಸು. ದಯಾಮಯನಾದ ಅಲ್ಲಾಹನೇ ನಮ್ಮ ಪ್ರಭು. ನೀವು (ಸತ್ಯ ನಿಷೇಧಿಗಳು) ವರ್ಣಿಸುತ್ತಿರುವ ಮಾತುಗಳ ವಿರುದ್ಧ ಅವನು ಸಹಾಯ ಕೇಳಲ್ಪಡಬೇಕಾದವನು’’