ಆಲ್ ಇಸ್ಲಾಂ ಲೈಬ್ರರಿ

15 - The Rocky Tract - Al-Ĥijr

:1

ಅಲಿಫ್ ಲಾಮ್ ರಾ, ದೇವಗ್ರಂಥ ಹಾಗೂ ಸುವ್ಯಕ್ತ ಖುರ್‍ಆನಿನ ಸೂಕ್ತಗಳಿವು.

:2

‘ನಾವೂ ಮುಸ್ಲಿಮರಾಗಿದ್ದರೆ ಎಷ್ಟು ಚೆನ್ನಾಗಿತ್ತು’ ಎಂದು ಸತ್ಯನಿಷೇಧಿಗಳು ತೀವ್ರ ಆಶೆಪಡುವರು.

:3

ತಾವು ಅವರನ್ನು ಬಿಟ್ಟುಬಿಡಿರಿ. ಅವರು ತಿನ್ನಲಿ, ಸುಖಪಡಲಿ, ಹುಸಿ ಭರವಸೆಯಲ್ಲಿ ಮೈಮರೆಯಲಿ. ನಂತರ ಅವರು ತಿಳಿದುಕೊಳ್ಳುವರು.

:4

ಒಂದು ನಿರ್ದಿಷ್ಟ ಅವಧಿಯನ್ನು ಲಿಖಿತಗೊಳಿಸದೆ ಯಾವುದೇ ನಾಡನ್ನು ನಾವು ನಾಶಗೊಳಿಸಿಲ್ಲ.

:5

ಯಾವ ಜನಾಂಗವೂ ತನಗೆ ನಿಶ್ಚಯಿಸಲ್ಪಟ್ಟ ಕಾಲಕ್ಕಿಂತ ಮುಂದೆ ಹೋಗದು. (ಕಾಲಕ್ಕಿಂತ) ಅವರು ಹಿಂದೆ ಹೋಗರು.

:6

ಅವರು (ಅವಿಶ್ವಾಸಿಗಳು) ಹೇಳುತ್ತಾರೆ, ಓ, ಉದ್ಭೋಧೆ ಅವತೀರ್ಣಗೊಂಡವನೇ! ಖಂಡಿತ ನೀನೊಬ್ಬ ಹುಚ್ಚನಾಗಿರುವಿ.

:7

ನೀನು ಸತ್ಯವಾದಿಯಾಗಿದ್ದರೆ ನಮ್ಮ ಬಳಿ ದೇವಚ ರರನ್ನೇಕೆ ತರುವುದಿಲ್ಲ ?

:8

ನ್ಯಾಯವಾದ ಕಾರಣವಿಲ್ಲದೆ ನಾವು ದೇವಚರರನ್ನು ಇಳಿಸುವುದಿಲ್ಲ. ಮತ್ತು ಆಗ ಅವರಿಗೆ (ಸತ್ಯ ನಿಷೇಧಿಗಳಿಗೆ) ಕಾಲಾವಕಾಶ ನೀಡಲಾಗುವುದಿಲ್ಲ.

:9

ನಿಶ್ಚಯವಾಗಿಯೂ ನಾವು ಈ ಉದ್ಭೋ ದನೆಯನ್ನು ಅವತೀರ್ಣಗೊಳಿಸಿರುತ್ತೇವೆ. ಸ್ವತಃ ನಾವೇ ಅದರ ರಕ್ಷಕರೂ ಆಗಿರುತ್ತೇವೆ.

:10

(ಓ ಪೈಗಂಬರರೇ), ನಾವು ನಿಮಗಿಂತ ಮುಂಚೆ ಪೂರ್ವಿಕರ ಅನೇಕ ಪಂಗಡಗಳಲ್ಲಿ ಸಂದೇಶವಾ ಹಕರನ್ನು ಕಳುಹಿಸಿದ್ದೇವೆ.

:11

ಯಾವುದೇ ಸಂದೇಶವಾಹಕ ಅವರ ಬಳಿ ಬಂದಾಗ ಎಂದೂ ಪರಿಹಾಸ್ಯ ಮಾಡದೆ ಬಿಡಲಿಲ್ಲ.

:12

ಅದೇ ರೀತಿಯಲ್ಲಿ ಅಪರಾಧಿಗಳ ಹೃದಯದೊಳಗೆ ಅದನ್ನು (ಪರಿಹಾಸ್ಯವನ್ನು) ನಾವು ಹಾಯಿಸುತ್ತೇವೆ.

:13

ಅವರು ಪ್ರವಾದಿಯವರಲ್ಲಿ ವಿಶ್ವಾಸವಿರಿಸುವುದಿಲ್ಲ. ಪೂರ್ವಿಕರಲ್ಲಿ (ಅಲ್ಲಾಹನ) ಕ್ರಮ ಗತಿಸಿ ಹೋಗಿದೆ.

:14

ನಾವು ಅವರಿಗೆ ಆಕಾಶದಿಂದ ದ್ವಾರವೊಂದನ್ನು ತೆರೆದು, ಅವರು ಅದರ ಮೂಲಕ ಏರಿ ಹೋಗುತ್ತಿದ್ದರೆ,

:15

“ನಮ್ಮ ಕಣ್ಣುಗಳು ಮತ್ತೇರಿವೆ ಅಷ್ಟೆ. ಅಲ್ಲದೆ ನಾವು ಮಾಟಕ್ಕೊಳಗಾಗಿದ್ದೇವೆ” ಎಂದೇ ಅವರು ಹೇಳುತ್ತಿದ್ದರು.

:16

ಆಕಾಶದಲ್ಲಿ ನಾವು ಅನೇಕ ಭ್ರಮಣ ಪಥಗಳನ್ನು ಮಾಡಿರುತ್ತೇವೆ. ಅವುಗಳನ್ನು ನೋಡುವವರಿಗಾಗಿ ಅಲಂಕರಿಸಿರುತ್ತೇವೆ.

:17

ಮತ್ತು ಬಹಿಷ್ಕøತರಾದ ಎಲ್ಲ ಶೈತಾನರಿಂದ ಅವುಗಳನ್ನು ಕಾಪಾಡಿರುತ್ತೇವೆ.

:18

ಒಂದಿಷ್ಟು ಕದ್ದು ಕೇಳುವವನ ಹೊರತು, ಅವನು ಕದ್ದಾಲಿಸಲು ಪ್ರಯತ್ನಿಸುವಾಗ ಪ್ರತ್ಯಕ್ಷವಾದ ಒಂದು ಅಗ್ನಿಜ್ವಾಲೆಯು ಅವನನ್ನು ಬೆನ್ನಟ್ಟುತ್ತದೆ.

:19

ನಾವು ಭೂಮಿಯನ್ನು ಹರಡಿದೆವು. ಅದರಲ್ಲಿ ಊರಿನಿಂತ ಪರ್ವತಗಳನ್ನು ನಾಟಿದೆವು. ಸರಿ ಯಾಗಿ ನಿಶ್ಚಿತ ಪ್ರಮಾಣದದಲ್ಲಿ ಬೆಳೆಸಿದೆವು.

:20

ಮತ್ತು ಅದರಲ್ಲಿ ನಿಮಗಾಗಿಯೂ ನೀವು ಅನ್ನ ನೀಡದಂತಹ ಅನೇಕ ಸೃಷ್ಟಿಗಳಿಗೂ ಜೀವನ ಸಾಧನಗಳನ್ನು ಒದಗಿಸಿದೆವು.

:21

ಯಾವುದೇ ವಸ್ತುವಿನ ಭಂಡಾರ ನಮ್ಮ ಬಳಿ ಇಲ್ಲದಿಲ್ಲ. ಅದನ್ನು ನಾವು ಒಂದು ನಿಗದಿತ ಪ್ರಮಾಣದಲ್ಲಿ ಮಾತ್ರ ಇಳಿಸುತ್ತೇವೆ.

:22

ಜಲಾಂಶವನ್ನು ಹೊತ್ತ ಮಾರುತಗಳನ್ನು ನಾವೇ ಕಳುಹಿಸುತ್ತೇವೆ . ಹಾಗೆ ಆಕಾಶದಿಂದ ನೀರನ್ನು ಸುರಿಸುತ್ತೇವೆ. ಮತ್ತು ಅದನ್ನು ನಿಮಗೆ ಕುಡಿಸುತ್ತೇವೆ. ನೀವೇನೂ ಅದರ ಸಂಗ್ರಾಹಕರಾಗಿಲ್ಲ .

:23

ನಿಜವಾಗಿಯೂ ನಾವು ಬದುಕಿಸುತ್ತೇವೆ. ಮೃತ ಗೊಳಿಸುತ್ತೇವೆ. ನಾವೇ ಎಲ್ಲರ ವಾರೀಸುದಾರರು.

:24

ನಿಮ್ಮ ಪೈಕಿ ಈ ಮುಂಚೆ ಗತಿಸಿ ಹೋದವರನ್ನೂ ನಾವು ಬಲ್ಲೆವು. ಮುಂದೆ ಬರಲಿರುವವರನ್ನೂ ನಾವು ಬಲ್ಲೆವು .

:25

ನಿಶ್ಚಯವಾಗಿಯೂ ನಿಮ್ಮ ಪ್ರಭು ಅವರೆಲ್ಲರನ್ನೂ ಒಟ್ಟುಗೂಡಿಸುವನು. ಅವನು ಮಹಾಯುಕ್ತಿವಂತನೂ ಸರ್ವಜ್ಞನೂ ಆಗಿರುತ್ತಾನೆ.

:26

ನಾವು ಮಾನವನನ್ನು ಹಳಸಿದ ಕಪ್ಪು ಒಣಗಲು ಕೊಜೆ ಮಣ್ಣಿನಿಂದ ಸೃಷ್ಟಿಸಿದೆವು .

:27

ಅದಕ್ಕಿಂತ ಮುಂಚೆ `ಜಿನ್ನ್’ಅನ್ನು ಧೂಮರಹಿತ ಅಗ್ನಿಯ ಜ್ವಾಲೆಯಿಂದ ಸೃಷ್ಟಿಸಿದೆವು .

:28

ನಿಮ್ಮ ಪ್ರಭು ದೇವಚರರೊಡನೆ, ಹೀಗೆ ಹೇಳಿದ ಸಂದರ್ಭ; ‘ನಾನು ಹಳಸಿದ ಕಪ್ಪು ಒಣಗಲು ಕೊಜೆ ಮಣ್ಣಿನಿಂದ ಒಬ್ಬ ಮಾನವನನ್ನು ಸೃಷ್ಟಿ ಸುವವನಿದ್ದೇನೆ.

:29

ನಾನು ಅವನನ್ನು ಸಂಪೂರ್ಣಗೊಳಿಸಿ ಅವನೊಳಗೆ ನನ್ನ ಆತ್ಮದಿಂದ ಊದಿದರೆ ನೀವೆಲ್ಲರೂ ಅವನಿಗೆ ಸಾಷ್ಟಾಂಗವೆರಗಿರಿ’.

:30

ಆ ಪ್ರಕಾರ ಎಲ್ಲ ದೇವಚರರೂ ಸಾಷ್ಟಾಂಗವೆರಗಿದರು.

:31

ಇಬ್‍ಲೀಸನ ಹೊರತು. ಸಾಷ್ಟಾಂಗವೆರಗಿದವರ ಜೊತೆ ಸೇರಲು ಅವನು ನಿರಾಕರಿಸಿದನು.

:32

ಅಲ್ಲಾಹು ಕೇಳಿದನು, ಓ ಇಬ್‍ಲೀಸ್, ನೀನು ಸಾಷ್ಟಾಂಗವೆರಗಿದವರೊಂದಿಗೆ ಸೇರದಿರಲು ಕಾರಣವೇನು?

:33

ಅವನು ಹೇಳಿದನು; ‘ನೀನು ಹಳಸಿದ ಕಪ್ಪು ಒಣಗಲು ಕೊಜೆ ಮಣ್ಣಿನಿಂದ ಸೃಷ್ಟಿಸಿದ ಈ ಮಾನವನಿಗೆ ನಾನು ಸಾಷ್ಟಾಂಗವೆರಗಲಾರೆ’.

:34

ಅಲ್ಲಾಹು ಹೇಳಿದನು; ‘ಇಲ್ಲಿಂದ ಹೊರಗೆ ನಡೆ, ನಿಜವಾಗಿಯೂ ನೀನು ಬಹಿಷ್ಕøತನು.

:35

ನಿರ್ಣಾಯಕ ದಿನದವರೆಗೂ ನಿನ್ನ ಮೇಲೆ ನನ್ನ ಶಾಪವಿದೆ’.

:36

ಅವನು, ಹೇಳಿದನು; ‘ಓ ನನ್ನ ಪ್ರಭೂ, ಹಾಗಿದ್ದರೆ ಅವರು ಎಬ್ಬಿಸಲ್ಪಡುವ ದಿನದವರೆಗೆ ನನಗೆ ಕಾಲಾವಕಾಶ ನೀಡು’.

:37

ಆಗ, ಅಲ್ಲಾಹನು ಹೇಳಿದನು ‘ನೀನು ಕಾಲಾವ ಕಾಶವನ್ನು ನೀಡಲಾಗಿರುವವರ ಸಾಲಿಗೆ ಸೇರಿರುವೆ.

:38

ಆ ನಿಶ್ಚಿತ ಸಮಯದವರೆಗೆ’.

:39

ಅವನೆಂದನು, ‘ಓ ನನ್ನ ಪ್ರಭೂ, ನೀನು ನನ್ನನ್ನು ದಾರಿಗೆಡಿಸಿದಂತೆಯೇ ಭೂಮಿಯಲ್ಲಿ ಅವರಿಗೆ ನಾನು (ದುಷ್ಪøವರ್ತಿಗಳನ್ನು) ಅಲಂಕೃತವಾಗಿ ತೋರಿಸಿಕೊಡುವೆನು ಮತ್ತು ಅವರೆಲ್ಲರನ್ನೂ ನಾನು ದಾರಿಗೆಡಿಸಿಬಿಡುವೆನು ಖಂಡಿತ.

:40

ಅವರ ಪೈಕಿ ನಿನ್ನ ನಿಷ್ಕಂಳಕರಾದ ದಾಸರನ್ನು ಹೊರತು’ .

:41

ಅವನು (ಅಲ್ಲಾಹು) ಹೇಳಿದನು; ‘ನೇರವಾಗಿ ನನ್ನನ್ನು ತಲಪುವ ಮಾರ್ಗವಿದು .

:42

ನಿಶ್ಚಯವಾಗಿಯೂ ನನ್ನ (ನಿಷ್ಟಾವಂತ) ದಾಸರ ಮೇಲೆ ನಿನಗೆ ಅಧಿಕಾರವಿಲ್ಲ. ನಿನ್ನನ್ನು ಅನುಸರಿಸುವ ಪಥಭ್ರಷ್ಟರ ಮೇಲೆಯೇ ಹೊರತು.

:43

ನಿಶ್ಚಯವಾಗಿಯೂ ನರಕವು ಅವರೆಲ್ಲರಿಗೂ ನಿಶ್ಚಯಿಸಲಾದ ಸ್ಥಾನವಾಗಿದೆ’.

:44

ಅದಕ್ಕೆ (ನರಕಕ್ಕೆ) ಏಳು ದ್ವಾರಗಳಿವೆ. ಪ್ರತಿಯೊಂದು ದ್ವಾರಕ್ಕೆ ನಿಗಧಿಪಡಿಸಲಾದ ಒಂದೊಂದು ವಿಭಾಗವಿದೆ.

:45

ಧರ್ಮನಿಷ್ಟರು ಉದ್ಯಾನಗಳಲ್ಲಿಯೂ ಚಿಲುಮೆ ಗಳಲ್ಲಿಯೂ ಇರುವರು.

:46

ನಿರ್ಭಯರಾಗಿ ಶಾಂತಿಯಿಂದ ಅದರಲ್ಲಿ ಪ್ರವೇಶಿಸಿರಿ (ಎಂದು ಅವರಿಗೆ ಹೇಳಲಾಗುವುದು.)

:47

ಅವರ ಹೃದಯಗಳಿಂದ ವಿದ್ವೇಷವನ್ನು ನಾವು ತೆಗೆದುಬಿಡುವೆವು. ಅವರು ಪರಸ್ಪರ ಸಹೋದ ರರಾಗಿ ಅಭಿಮುಖರಾಗಿ ಆಸನಗಳಲ್ಲಿ ಕುಳಿತು ಕೊಳ್ಳುವರು.

:48

ಅವರಿಗೆ ಅಲ್ಲಿ ಯಾವುದೇ ಕ್ಲೇಶ ತಟ್ಟದು. ಮತ್ತು ಅವರು ಅಲ್ಲಿಂದ ಹೊರಹಾಕಲ್ಪಡುವುದೂ ಇಲ್ಲ.

:49

(ಓ ಪೈಗಂಬರರೇ,) ನಾನು ಮಹಾ ಕ್ಷಮಾಶೀಲನೂ ಕೃಪಾನಿಧಿಯೂ ಆಗಿರುತ್ತೇನೆಂದು ನನ್ನ ದಾಸರಿಗೆ ತಿಳಿಸಿಬಿಡಿರಿ.

:50

ನನ್ನ ಶಿಕ್ಷೆಯೂ ಅತ್ಯಂತ ವೇದನಾಯುಕ್ತ ವಾಗಿದೆ. (ಎಂದೂ ತಿಳಿಸಿಬಿಡಿರಿ).

:51

ಅವರಿಗೆ ಇಬ್‍ರಾಹೀಮರ ಅತಿಥಿಗಳ ವೃತ್ತಾಂತವನ್ನೂ ತಿಳಿಸಿರಿ.

:52

ಅವರು ಇವರ ಬಳಿ ಬಂದು, ‘ಸಲಾಮ್ (ನಿಮಗೆ ಶಾಂತಿ ಇರಲಿ)’ ಎಂದರು. ಆಗ ಇವರು, ‘ನಾವು ನಿಮ್ಮ ಬಗ್ಗೆ ಹೆದರಿದ್ದೇವೆ’ ಎಂದರು.

:53

ಆಗ ಅವರು, ಹೆದರಬೇಡಿರಿ, ನಾವು ನಿಮಗೆ ಓರ್ವ ಜ್ಞಾನಿಯಾದ ಪುತ್ರನ ಸುವಾರ್ತೆ ನೀಡುತ್ತೇವೆ’. ಎಂದರು.

:54

‘ನನಗೆ ವೃದ್ಧಾಪ್ಯ ತಟ್ಟಿದ ಮೇಲೆ ನೀವು ನನಗೆ ಸುವಾರ್ತೆ ನೀಡುತ್ತೀರಾ? ನೀವು ಯಾವುದರ ಬಗ್ಗೆ ಸುವಾರ್ತೆ ನೀಡುತ್ತಿರುವಿರಿ’ ಎಂದು ಇಬ್ರಾಹೀಮರು ಹೇಳಿದರು.

:55

ಆಗ ಅವರು, ಹೇಳಿದರು; ‘ನಾವು ನಿಮಗೆ ಸತ್ಯವಾದ ಸುವಾರ್ತೆಯನ್ನೇ ನೀಡುತ್ತಿದ್ದೇವೆ. ನೀವು ನಿರಾಶರಲ್ಲಿ ಸೇರಬೇಡಿರಿ.

:56

‘ತಮ್ಮ ಪ್ರಭುವಿನ ಕಾರುಣ್ಯದ ಬಗ್ಗೆ ಪಥ ಭ್ರಷ್ಟರಲ್ಲದೆ ಯಾರು ನಿರಾಶರಾಗುತ್ತಾರೆ’ ಎಂದು ಇಬ್ರಾಹೀಮರು ಹೇಳಿದರು.

:57

‘ಓ ದೇವದೂತರೇ, ನಿಮ್ಮ (ಮುಖ್ಯ) ವಿಷಯವೇನು?’ ಎಂದು ಕೇಳಿದರು.

:58

ಅವರು, ಹೇಳಿದರು; ‘ನಾವು ಒಂದು ಅಪರಾಧಿ ಜನಾಂಗದ ಕಡೆಗೆ ಕಳುಹಿಸಲ್ಪಟ್ಟಿದ್ದೇವೆ.

:59

ಆದರೆ `ಲೂಥ’ರ ಕುಟುಂಬದವರು ಇದಕ್ಕೆ ಹೊರ ತಾಗಿದ್ದಾರೆ. ಅವರೆಲ್ಲರನ್ನೂ ನಾವು ರಕ್ಷಿಸುವೆವು.

:60

`ಲೂಥ’ರ ಪತ್ನಿಯ ಹೊರತು; ಆಕೆ ನಾಶಕ್ಕೀಡಾಗುವವರಲ್ಲಿ ಸೇರಿದವಳೆಂದು ನಾವು ಲೆಕ್ಕ ಹಾಕಿದ್ದೇವೆ’ ಎಂದರು.

:61

ಅನಂತರ ಆ ದೂತರು ಲೂಥರ ಕುಟುಂಬದಲ್ಲಿಗೆ ತಲಪಿದಾಗ

:62

‘ನೀವು ನನಗೆ ಅಪರಿಚಿತರಾಗಿ ತೋರುತ್ತೀರಿ’ ಎಂದು ಅವರು ಹೇಳಿದರು.

:63

ಆಗ ಅವರು, (ದೂತರು) ಹೇಳಿದರು; ‘ಅಲ್ಲ, ಯಾವುದರ ಬಗ್ಗೆ ಇವರು (ಜನರು) ಸಂದೇಹ ಪಡುತ್ತಿದ್ದರೋ ಅದನ್ನು ವಹಿಸಿಕೊಂಡು ನಾವು ನಿಮ್ಮ ಬಳಿಗೆ ಬಂದಿದ್ದೇವೆ.

:64

ನಾವು ಸತ್ಯಸಹಿತ ನಿಮ್ಮ ಬಳಿಗೆ ಬಂದಿರುತ್ತೇವೆ ಮತ್ತು ನಾವು ಸತ್ಯವನ್ನೇ ಹೇಳುತ್ತೇವೆ.

:65

ಆದುದರಿಂದ ನೀವು ರಾತ್ರಿಯಿಂದ ಸ್ವಲ್ಪ ಉಳಿದಿರುವಾಗಲೇ ನಿಮ್ಮ ಕುಟುಂಬವನ್ನು ಕರಕೊಂಡು ಹೊರಟು ಹೋಗಿರಿ ಮತ್ತು ನೀವು ಅವರ ಹಿಂದೆಯೇ ಅನುಗಮಿಸಿರಿ. ನಿಮ್ಮ ಪೈಕಿ ಯಾರೂ ಹಿಂತಿರುಗಿ ನೋಡಬಾರದು. ನಿಮಗೆ ಆಜ್ಞಾಪಿಸಲಾದ ಭಾಗಕ್ಕೆ ನೇರವಾಗಿ ಸಾಗಿರಿ’. ಎಂದು ಹೇಳಿದರು.

:66

ಆ ಕಾರ್ಯ ಅಂದರೆ ಬೆಳಗಾಗುವುದರೊಳಗಾಗಿ ಈ ಮಂದಿಗಳ ಬುಡವನ್ನೇ ಕಿತ್ತೊಗೆಯಲಾಗುವುದೆಂಬ ಕಾರ್ಯವನ್ನು ನಾವು ಅವರಿಗೆ ನಿಖರವಾಗಿ ತಿಳಿಸಿಬಿಟ್ಟೆವು.

:67

ನಗರದವರು ಸಂತೋಷದಿಂದ ಲೂಥರ ಮನೆಗೆ ಧಾವಿಸಿ ಬಂದರು.

:68

ಲೂಥರು ಹೇಳಿದರು, ‘ಇವರು ನನ್ನ ಅತಿಥಿಗಳು, ನನ್ನನ್ನು ಅವಮಾನಿಸಬೇಡಿರಿ.

:69

ಅಲ್ಲಾಹನನ್ನು ಭಯಪಡಿರಿ, ನನ್ನನ್ನು ನಿಂದಿಸಬೇಡಿರಿ’.

:70

ಆಗ ಅವರು, ‘ಜನರಿಗೆ ಆತಿಥ್ಯ ನೀಡಬಾರದು ಎಂದು ನಾವು ನಿಮ್ಮನ್ನು ತಡೆ ಹೇರಿಲ್ಲವೇ?’ ಎಂದು ಕೇಳಿದರು.

:71

ಲೂಥರು ಹೇಳಿದರು: ‘ಇದೋ ನನ್ನ ಪುತ್ರಿಯರು. ನೀವು ಆಸೆ ತೀರಿಸುವವರಾಗಿದ್ದರೆ (ಅವರನ್ನು ಮದುವೆಯಾಗಬಹುದಲ್ಲ?).

:72

ನಿಮ್ಮ ಜೀವದಾಣೆ! ಆಗ ಆ ಜನರುಮದೋ ನ್ಮತ್ತರಾಗಿ ಮೈಮರೆತಿದ್ದರು.

:73

ಹಾಗೆ ಸೂರ್ಯೋದಯದ ಹೊತ್ತಲ್ಲಿ ಉಷಃಕಾಲವಾದೊಡನೆ ಒಂದು ಘೋರ ಶಬ್ದವು ಅವರನ್ನು ಹಿಡಿಯಿತು.

:74

ಹಾಗೆ ನಾವು ಆ ನಾಡನ್ನು ಬುಡಮೇಲು ಮಾಡಿ ಬಿಟ್ಟೆವು ಮತ್ತು ಅವರ ಮೇಲೆ ಸುಡುಮಣ್ಣಿನ ಕಲ್ಲುಗಳ ಮಳೆಗರೆದೆವು.

:75

ವಿಚಾರಶೀಲರಿಗೆ ಅದರಲ್ಲಿ ಅನೇಕ ನಿದರ್ಶನಗಳಿವೆ.

:76

ಅದು (ಆ ಪ್ರದೇಶವು) (ಇಂದಿಗೂ) ನೆಲೆನಿಂತಿರುವ ಒಂದು ಮಾರ್ಗದಲ್ಲೇ ಇದೆ.

:77

ಇದರಲ್ಲಿ ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳಿಗೆ ಒಂದು ನಿದರ್ಶನವಿದೆ.

:78

ಐಕಃದ ಜನರು ಅಕ್ರಮಿಗಳಾಗಿದ್ದರು.

:79

ನಾವು ಅವರ ಮೇಲೆ ಶಿಸ್ತುಕ್ರಮ ಕೈಗೊಂಡೆವು. ಈ ಎರಡೂ ಪ್ರದೇಶವೂ ತೆರೆದ ಮಾರ್ಗದಲ್ಲೇ ಇವೆ .

:80

ಖಂಡಿತ ಹಿಜ್ರ್‍ನವರೂ ಸಂದೇಶವಾಹಕರನ್ನು ಸುಳ್ಳಾಗಿಸಿದ್ದರು.

:81

ನಮ್ಮ ನಿದರ್ಶನಗಳನ್ನು ಅವರಿಗೆ ನಾವು ನೀಡಿದೆವು. ಆದರೆ ಅವರು ಅವೆಲ್ಲವನ್ನೂ ಅವಗಣಿಸುತ್ತಿದ್ದರು.

:82

ಅವರು ಪರ್ವತಗಳಿಂದ ಬಂಡೆಗಳನ್ನು ಕೊರೆದು ಮನೆಗಳನ್ನು ಮಾಡಿ ನಿರ್ಭಯರಾಗಿ ಕಳೆಯುತ್ತಿದ್ದರು.

:83

ಹೀಗಿರುತ್ತ ಬೆಳಗಾಗುತ್ತಲೇ ಒಂದು ಪ್ರಚಂಡ ಶಬ್ಧವು ಅವರನ್ನು ಹಿಡಿದು ಬಿಟ್ಟಿತು.

:84

ಅವರ ಸಂಪಾದನೆಯು ಅವರ ಉಪಯೋಗಕ್ಕೆ ಬರಲಿಲ್ಲ.

:85

ಭೂಮಿ-ಆಕಾಶಗಳನ್ನೂ ಅವುಗಳ ನಡುವೆ ಇರು ವುದೆಲ್ಲವನ್ನೂ ನಾವು ವ್ಯರ್ಥವಾಗಿ ಸೃಷ್ಟಿಸಲಿಲ್ಲ ಮತ್ತು ಅಂತ್ಯ ಘಳಿಗೆಯೂ ಖಂಡಿತ ಬರಲಿದೆ. ಆದುದರಿಂದ ಓ ಪೈಗಂಬರರೇ, ಅವರ ಬಗ್ಗೆ ನೀವು ನಿರ್ಲಿಪ್ತರಾಗಿ ನಿರ್ಲಕ್ಯವಹಿಸಿರಿ.

:86

ನಿಶ್ಚಯವಾಗಿಯೂ ನಿಮ್ಮ ಪ್ರಭು ಎಲ್ಲರ ಸೃಷ್ಟಿ ಕರ್ತನೂ ಸರ್ವಜ್ಞನೂ ಆಗಿರುತ್ತಾನೆ.

:87

ಪುನರಾವರ್ತಿಸಲ್ಪಡುವ ಸಪ್ತ ಸೂಕ್ತಗಳನ್ನೂ ಮಹತ್ತಾದ ಖುರ್‍ಆನನ್ನೂ ನಾವು ನಿಮಗೆ ದಯಪಾಲಿಸಿದ್ದೇವೆ.

:88

ಅವರ (ಅವಿಶ್ವಾಸಿಗಳ)ಲ್ಲಿರುವ ಜನರಿಗೆ ಅನೇಕ ವಿಧಗಳಲ್ಲಿ ನಾವು ಕೊಟ್ಟಿರುವ ಲೌಕಿಕ ಸುಖ ಭೋಗಗಳ ಕಡೆಗೆ ನೀವು ಕಣ್ಣೆತ್ತಿ ನೋಡಬೇಡಿರಿ ಮತ್ತು ಅವರಿಗಾಗಿ ವ್ಯಾಕುಲಗೊಳ್ಳದಿರಿ. ಸತ್ಯ ವಿಶ್ವಾಸಿಗಳಿಗೆ ನೀವು ವಿನಯಾನ್ವಿತರಾಗಿರಿ.

:89

ನಾನು ಸುಸ್ಪಷ್ಟವಾಗಿ ಎಚ್ಚರಿಕೆ ನೀಡುವವನು ಎಂದು ಹೇಳಿರಿ.

:90

ವಿಂಗಡನೆಗಾರರ ಮೇಲೆ ನಾವು ಕಳುಹಿಸಿದ್ದಂತೆ.

:91

ಅಂದರೆ ಖುರ್‍ಆನನ್ನು ವಿಭಿನ್ನ ಭಾಗಗಳಾಗಿ ಮಾರ್ಪಡಿಸಿದವರ ಮೇಲೆ.

:92

ನಿಮ್ಮ ಪ್ರಭುವಿನಾಣೆ! ನಾವು ಅವರೆಲ್ಲರೊಡನೆ ವಿಚಾರಿಸಿಯೇ ತೀರುವೆವು.

:93

ಅವರು ಮಾಡುತ್ತಲಿದ್ದ ಕರ್ಮದ ಬಗ್ಗೆ.

:94

ಆದುದರಿಂದ (ಓ ಪೈಗಂಬರರೇ,) ನಿಮಗೆ ಆಜ್ಞಾ ಪಿಸಲಾಗುತ್ತಿರುವ ಆದೇಶಗಳನ್ನು ಘಂಟಾ ಘೋಷವಾಗಿ ಸಾರಿ ಬಿಡಿರಿ ಮತ್ತು ಬಹುದೇವ ವಿಶ್ವಾಸಿಗಳನ್ನು ಅವಗಣಿಸಿರಿ.

:95

ಪರಿಹಾಸ್ಯ ಮಾಡುವವರಿಂದ ನಿಮ್ಮನ್ನು ರಕ್ಷಿಸಲು ನಾವು ಸಾಕು.

:96

ಅಲ್ಲಾಹನೊಂದಿಗೆ ಬೇರೆ ದೇವರನ್ನು ಸ್ಥಾಪಿಸುವವರವರು. ಮುಂದೆ ಅವರಿಗೆ ಗೊತ್ತಾಗಲಿದೆ.

:97

ಅವರಾಡುತ್ತಿರುವ (ಸುಳ್ಳು ಹಾಗೂ ಅಪಹಾಸ್ಯದ) ಮಾತುಗಳಿಂದ ನಿಮ್ಮ ಎದೆ ಇಕ್ಕಟ್ಟಾಗುತ್ತಿದೆಯೆಂಬುದನ್ನು ನಾವು ಬಲ್ಲೆವು.

:98

ನಿಮ್ಮ ಪ್ರಭುವಿನ ಕೀರ್ತನೆಯೊಂದಿಗೆ ಅವನನ್ನು ಸ್ತುತಿಸಿರಿ. ಸಾಷ್ಟಾಂಗವೆರಗುವವರಲ್ಲಿ ಸೇರಿರಿ.

:99

ಖಚಿತವಾದ ಕಾರ್ಯ (ಮರಣ) ನಿಮಗೆ ಬರುವ ವರೆಗೂ ನೀವು ನಿಮ್ಮ ಪ್ರಭುವಿಗೆ ಆರಾಧಿಸಿರಿ.